Yakshagana : 2 ವರ್ಷಗಳ ಬಳಿಕ ಯಕ್ಷಗಾನ ಮೇಳಗಳ ತಿರುಗಾಟ ಆರಂಭ

Yakshagana : 2 ವರ್ಷಗಳ ಬಳಿಕ ಯಕ್ಷಗಾನ ಮೇಳಗಳ ತಿರುಗಾಟ ಆರಂಭ

Suvarna News   | Asianet News
Published : Nov 20, 2021, 12:54 PM ISTUpdated : Nov 20, 2021, 03:54 PM IST

- ಎರಡು ವರ್ಷಗಳ ಬಳಿಕ ರಂಗೇರಿದ ಯಕ್ಷಗಾನ ವೇದಿಕೆಗಳು 

-ಕೊರೋನಾ ಕಾಲದಲ್ಲಿ ಕಳೆಗುಂದಿದ್ದ ಯಕ್ಷಗಾನ ಕಲಾಕ್ಷೇತ್ರ

- ಕೊರೋನಾ, ಲಾಕ್‌ಡೌನ್‌ಗೆ ತತ್ತರಿಸಿದ್ದ ಮೇಳದ ಕಲಾವಿದರು
 

ಉಡುಪಿ (ನ. 20): ರಂಗದಮೇಲೆ ರಾಜರಂತೆ ಮೆರೆದವರೆಲ್ಲಾ, ಒಪ್ಪತ್ತಿನ ಊಟಕ್ಕೂ ಕಷ್ಟಪಡುವ ಸ್ಥಿತಿ ಇತ್ತು. ಅವಿಭಜಿತ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಎರಡೂವರೆ ಸಾವಿರಕ್ಕೂ ಅಧಿಕ ಯಕ್ಷಗಾನ ಕಲಾವಿದರು, ಪ್ರದರ್ಶನಕ್ಕೆ ಅವಕಾಶವಿಲ್ಲದೆ ಕಷ್ಟ ಅನುಭವಿಸುತ್ತಿದ್ದರು. ಇದೀಗ ಕೊರೋನಾ ಹದ್ದುಬಸ್ತಿಗೆ ಬಂದಿದೆ. ಯಕ್ಷಗಾನದ ರಂಗ ಮಂಚಕ್ಕೆ ಮತ್ತೆ ಜೀವ ಬಂದಿದೆ. 

ಎರಡು ಜಿಲ್ಲೆಗಳ 50ಕ್ಕೂ ಅಧಿಕ ಯಕ್ಷಗಾನ ಮೇಳಗಳು (Yakshagana Mela) ತಿರುಗಾಟದ ತಯಾರಿ ಆರಂಭಿಸಿದೆ. ಕುಂದಾಪುರದ ಹಟ್ಟಿಯಂಗಡಿ ಮೇಳ ಈಗಾಗಲೇ ಪ್ರದರ್ಶನ ಯಾತ್ರೆ ಶುರು ಮಾಡಿದೆ. ರಾತ್ರಿಪೂರ್ತಿ ಪ್ರದರ್ಶನ, ಕಾಲಮಿತಿಯ ಪ್ರದರ್ಶನ ಗಳಿಗೆ ವೇದಿಕೆ ಸಿದ್ಧವಾಗಿದೆ. ಹರಕೆಯ ಬಯಲಾಟ ಗಳಿಗೂ ದೇವಸ್ಥಾನಗಳು ಸಜ್ಜಾಗಿದೆ. ದೇವರಿಗೆ ಹರಕೆ ಹೊತ್ತು ಬೆಳಕಿನ ಸೇವೆ ನೀಡಲು ಕಾಯುತ್ತಿದ್ದ ಭಕ್ತರಿಗೂ ಸಂತೋಷವಾಗಿದೆ. ಕೊನೆಗೂ ಕಷ್ಟ ಬಗೆಹರಿಯುವ ಲಕ್ಷಣಗಳು ಕಾಣುತ್ತಿವೆ. ಚೌಕಿ ಮನೆಯಲ್ಲಿ ಬಣ್ಣ- ರಂಗದ ಮೇಲೆ ಬೆಳಕು  ಕಂಗೊಳಿಸುತ್ತಿದೆ. ಕರಾವಳಿಯ ಯಕ್ಷ ಪ್ರಿಯರು ಯಕ್ಷಗಾನಂ ಗೆಲ್ಗೆ ಎನ್ನುತ್ತಿದ್ದಾರೆ.
 

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
Read more