Uttara Kannada: ಅರಣ್ಯ ಇಲಾಖೆಯೂ ಸಂಗ್ರಹಿಸಿಲ್ಲ, ಬಿದ್ದ ಸ್ಥಳಗಳಲ್ಲೂ ಇಲ್ಲ, ಮರಗಳು ಮಂಗಮಾಯ!

Uttara Kannada: ಅರಣ್ಯ ಇಲಾಖೆಯೂ ಸಂಗ್ರಹಿಸಿಲ್ಲ, ಬಿದ್ದ ಸ್ಥಳಗಳಲ್ಲೂ ಇಲ್ಲ, ಮರಗಳು ಮಂಗಮಾಯ!

Suvarna News   | Asianet News
Published : Dec 10, 2021, 04:36 PM ISTUpdated : Dec 10, 2021, 04:47 PM IST

- ಭೂ ಕುಸಿತ, ಗುಡ್ಡ ಕುಸಿತದಲ್ಲಿ ನೆಲಕ್ಕುರುಳಿದ್ದವು ಭಾರೀ ಪ್ರಮಾಣದ ಬೆಲೆ ಬಾಳುವ ಮರಗಳು 

- ಅರಣ್ಯ ಇಲಾಖೆಯೂ ಸಂಗ್ರಹಿಸಿಲ್ಲ, ಬಿದ್ದ ಸ್ಥಳಗಳಲ್ಲೂ ಇಲ್ಲ ನೆಲಕಚ್ಚಿದ್ದ ಮರಗಳು! 

- ಮರಗಳ್ಳರು ಇವುಗಳನ್ನು ನುಂಗಿ ಹಾಕಿದ್ದಾರೆ ಅನ್ನೋ ಆರೋಪ ಮಾಡಿದ್ದಾರೆ ಜನರು

ಉತ್ತರ ಕನ್ನಡ (ಡಿ. 10):  ಕಳೆದ ಜುಲೈ ತಿಂಗಳಿನಿಂದ ಅಕ್ಟೋಬರ್‌ವರೆಗೆ ಕಾಣಿಸಿಕೊಂಡ ಮಹಾಮಳೆಗೆ (Heavy Rainfall) ಜನಜೀವನವೇ ಅಸ್ತವ್ಯಸ್ತಗೊಂಡಿತ್ತು. ಈ ನಡುವೆ ಮಲೆನಾಡು (Malenadu) ಹಾಗೂ ಕರಾವಳಿ ಭಾಗದ ಕೆಲವೆಡೆ ಗುಡ್ಡ ಕುಸಿತ, ಭೂ ಕುಸಿತವಾಗಿ ಭಾರೀ ಪ್ರಮಾಣದಲ್ಲಿ ಬೃಹತ್ ಮರಗಳು (Trees) ನೆಲಕಚ್ಚಿದ್ದವು.  ನೆಲಕ್ಕಿರುಳಿದ್ದ ಈ ಮರಗಳು ಸರಕಾರಕ್ಕೆ ಉತ್ತಮ ಆದಾಯವಾಗುವ ಮುನ್ನವೇ ಕಾಣೆಯಾಗಿದ್ದು, ಅರಣ್ಯಾಧಿಕಾರಿಗಳ (Forest Department) ಹಾಗೂ ಜನಪ್ರತಿನಿಧಿಗಳ ಕೃಪಾಕಟಾಕ್ಷದಿಂದ ಮರಗಳ್ಳರು ಇವುಗಳನ್ನು ನುಂಗಿ ಹಾಕಿದ್ದಾರೆ ಅನ್ನೋ ಆರೋಪ ವ್ಯಕ್ತವಾಗಿವೆ.

ಅರಣ್ಯ ಇಲಾಖೆ ಸಿಬ್ಬಂದಿ ಇವುಗಳನ್ನು ಸಂಗ್ರಹಿಸಿ ಡಿಪೋಗೆ ನೀಡಿ ಹಣವನ್ನು ಸರಕಾರಕ್ಕೆ ನೀಡಿದಿದ್ದಲ್ಲಿ ಸರಕಾರಕ್ಕೂ‌ ಒಂದು ಆದಾಯವಾಗುತ್ತಿತ್ತು.‌ ಆದರೆ,ಅರಣ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕೇಳಿದರೆ ನಾವು ಯಾವ ಮರಗಳನ್ನೂ ಸಂಗ್ರಹಿಸಿಯೇ ಇಲ್ಲ ಅಂತಾರೆ. ಹಾಗಿದ್ದರೆ, ಈ ಮರಗಳು ಎಲ್ಲಿಗೆ ಹೋಯ್ತು ಅನ್ನೋದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕೃಪಾ ಕಟಾಕ್ಷದಿಂದ ಮರಗಳ್ಳರು ಇವುಗಳನ್ನು ನುಂಗಿ ಹಾಕಿದ್ದಾರೆ ಅನ್ನೋ ಆರೋಪ ಎದುರಾಗಿದ್ದು, ಈ ಬಗ್ಗೆ ಆರ್‌ಟಿಐ ಮೂಲಕ ಮಾಹಿತಿ ಸಂಗ್ರಹ ಮಾಡಲು ಹೋರಾಟಗಾರರು ಅಣಿಯಾಗಿದ್ದಾರೆ. 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more