Uttara Kannada: ಅರಣ್ಯ ಇಲಾಖೆಯೂ ಸಂಗ್ರಹಿಸಿಲ್ಲ, ಬಿದ್ದ ಸ್ಥಳಗಳಲ್ಲೂ ಇಲ್ಲ, ಮರಗಳು ಮಂಗಮಾಯ!

Uttara Kannada: ಅರಣ್ಯ ಇಲಾಖೆಯೂ ಸಂಗ್ರಹಿಸಿಲ್ಲ, ಬಿದ್ದ ಸ್ಥಳಗಳಲ್ಲೂ ಇಲ್ಲ, ಮರಗಳು ಮಂಗಮಾಯ!

Published : Dec 10, 2021, 04:36 PM ISTUpdated : Dec 10, 2021, 04:47 PM IST

- ಭೂ ಕುಸಿತ, ಗುಡ್ಡ ಕುಸಿತದಲ್ಲಿ ನೆಲಕ್ಕುರುಳಿದ್ದವು ಭಾರೀ ಪ್ರಮಾಣದ ಬೆಲೆ ಬಾಳುವ ಮರಗಳು 

- ಅರಣ್ಯ ಇಲಾಖೆಯೂ ಸಂಗ್ರಹಿಸಿಲ್ಲ, ಬಿದ್ದ ಸ್ಥಳಗಳಲ್ಲೂ ಇಲ್ಲ ನೆಲಕಚ್ಚಿದ್ದ ಮರಗಳು! 

- ಮರಗಳ್ಳರು ಇವುಗಳನ್ನು ನುಂಗಿ ಹಾಕಿದ್ದಾರೆ ಅನ್ನೋ ಆರೋಪ ಮಾಡಿದ್ದಾರೆ ಜನರು

ಉತ್ತರ ಕನ್ನಡ (ಡಿ. 10):  ಕಳೆದ ಜುಲೈ ತಿಂಗಳಿನಿಂದ ಅಕ್ಟೋಬರ್‌ವರೆಗೆ ಕಾಣಿಸಿಕೊಂಡ ಮಹಾಮಳೆಗೆ (Heavy Rainfall) ಜನಜೀವನವೇ ಅಸ್ತವ್ಯಸ್ತಗೊಂಡಿತ್ತು. ಈ ನಡುವೆ ಮಲೆನಾಡು (Malenadu) ಹಾಗೂ ಕರಾವಳಿ ಭಾಗದ ಕೆಲವೆಡೆ ಗುಡ್ಡ ಕುಸಿತ, ಭೂ ಕುಸಿತವಾಗಿ ಭಾರೀ ಪ್ರಮಾಣದಲ್ಲಿ ಬೃಹತ್ ಮರಗಳು (Trees) ನೆಲಕಚ್ಚಿದ್ದವು.  ನೆಲಕ್ಕಿರುಳಿದ್ದ ಈ ಮರಗಳು ಸರಕಾರಕ್ಕೆ ಉತ್ತಮ ಆದಾಯವಾಗುವ ಮುನ್ನವೇ ಕಾಣೆಯಾಗಿದ್ದು, ಅರಣ್ಯಾಧಿಕಾರಿಗಳ (Forest Department) ಹಾಗೂ ಜನಪ್ರತಿನಿಧಿಗಳ ಕೃಪಾಕಟಾಕ್ಷದಿಂದ ಮರಗಳ್ಳರು ಇವುಗಳನ್ನು ನುಂಗಿ ಹಾಕಿದ್ದಾರೆ ಅನ್ನೋ ಆರೋಪ ವ್ಯಕ್ತವಾಗಿವೆ.

ಅರಣ್ಯ ಇಲಾಖೆ ಸಿಬ್ಬಂದಿ ಇವುಗಳನ್ನು ಸಂಗ್ರಹಿಸಿ ಡಿಪೋಗೆ ನೀಡಿ ಹಣವನ್ನು ಸರಕಾರಕ್ಕೆ ನೀಡಿದಿದ್ದಲ್ಲಿ ಸರಕಾರಕ್ಕೂ‌ ಒಂದು ಆದಾಯವಾಗುತ್ತಿತ್ತು.‌ ಆದರೆ,ಅರಣ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕೇಳಿದರೆ ನಾವು ಯಾವ ಮರಗಳನ್ನೂ ಸಂಗ್ರಹಿಸಿಯೇ ಇಲ್ಲ ಅಂತಾರೆ. ಹಾಗಿದ್ದರೆ, ಈ ಮರಗಳು ಎಲ್ಲಿಗೆ ಹೋಯ್ತು ಅನ್ನೋದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕೃಪಾ ಕಟಾಕ್ಷದಿಂದ ಮರಗಳ್ಳರು ಇವುಗಳನ್ನು ನುಂಗಿ ಹಾಕಿದ್ದಾರೆ ಅನ್ನೋ ಆರೋಪ ಎದುರಾಗಿದ್ದು, ಈ ಬಗ್ಗೆ ಆರ್‌ಟಿಐ ಮೂಲಕ ಮಾಹಿತಿ ಸಂಗ್ರಹ ಮಾಡಲು ಹೋರಾಟಗಾರರು ಅಣಿಯಾಗಿದ್ದಾರೆ. 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more