ಬೆಂಗಳೂರಿನಲ್ಲಿ ಭಾರಿ ಅಗ್ನಿ ಅವಘಡ,ಟಿಶ್ಯೂ ಪೇಪರ್‌ ಗೋದಾಮು ಭಸ್ಮ

Mar 18, 2023, 11:14 AM IST

ಬೆಂಗಳೂರಿನಲ್ಲಿ ಭಾರಿ ಅಗ್ನಿ ಅವಘಡ ಸಂಭಿಸಿದ್ದು, ಗೋದಾಮು ಸಂಪೂರ್ಣ ಭಸ್ಮವಾಗಿದೆ. ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ಸಮೀಪದಲ್ಲಿ ರಾತ್ರಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ವಸ್ತಗಳು ಬೆಂಕಿಗಾಹುತಿಯಾಗಿದೆ.  ಗಾಮಿ ಕೇರ್‌ ಐಜಿನ್‌ ಕಂಪನಿಗೆ  ಸೇರಿದ ಟಿಶ್ಯೂ ಪೇಪರ್‌ ಮ್ಯಾನುಫ್ಯಾಕ್ಚರ್‌ ಗೋಡೌನ್‌ ಆಗಿದ್ದು. ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿ ಈಡಿ ಗೋದಾಮನ್ನು ಆವರಿಸಿದೆ. ಇನ್ನು 9 ವಾಹನಗಳಲ್ಲಿ ಸ್ಥಳಕ್ಕೆ ಆಗಮಿಸಿದ  ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ .  ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.