ನಾಟಕಗಳು ಶುರು ಮಾಡಿದ್ರೂ ನೋಡಲು ಬರುತ್ತಿಲ್ಲ ಜನರು,  ಕಂಪನಿಗಳು ಕಂಗಾಲು!

ನಾಟಕಗಳು ಶುರು ಮಾಡಿದ್ರೂ ನೋಡಲು ಬರುತ್ತಿಲ್ಲ ಜನರು, ಕಂಪನಿಗಳು ಕಂಗಾಲು!

Suvarna News   | Asianet News
Published : Nov 19, 2021, 11:28 AM ISTUpdated : Nov 19, 2021, 12:20 PM IST

- ಅಳಿವಿನ ಅಂಚಿನತ್ತ ಸಾಗಿದೆ ವೃತ್ತಿರಂಗಭೂಮಿ

- ಕೊರೋನಾ ಇಳಿಕೆಯಾದರೂ ನಾಟಕ ಕಂಪನಿಗಳು ಕಂಗಾಲು!

- ಊಟ, ವಸತಿ ಹಾಗೂ ಸಂಬಳ ನೀಡಲೂ ಹಣವಿಲ್ಲದ ದುಸ್ಥಿತಿ
 

ಬೆಂಗಳೂರು (ನ. 19): ಇಂದಿನ ಆಧುನಿಕ ಯುಗದಲ್ಲಿ ಮೊದಲೇ ಪ್ರೇಕ್ಷಕರ ಕೊರತೆ ಎದುರಿಸುತ್ತಿದ್ದ ನಾಟಕ ಕಂಪನಿಗಳು, ಕೊರೋನಾ ಬಂದ ಬಳಿಕ ನಾಟಕಗಳ ಪ್ರದರ್ಶನವೇ ಇಲ್ಲದಂತೆ ಆಗಿತ್ತು. ಇದೀಗ ನಾಟಕಗಳ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿದೆ. ಇನ್ನಾದರೂ ನಮ್ಮ ಬದಕು ಸರಿಹೋಗುತ್ತೆ ಎಂದು ತಿಳಿದಿದ್ದ ನಾಟಕ ಕಂಪನಿಗಳ ಮಾಲೀಕರು ಮತ್ತು ಕಲಾವಿದರಿಗೆ ನಿರಾಸೆಯಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಬಾರದೇ ನಾಟಕ ಕಂಪನಿ ಮಾಲೀಕರು ಮತ್ತು ಕಲಾವಿದರು ಪರದಾಡುವಂತಹ ಸ್ಥಿತಿ ಮುಂದುವರಿದಿದೆ.

ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಕಲಬುರಗಿ ಮುಖ್ಯರಸ್ತೆಗೆ ಹೊಂದಿಕೊ೦ಡಿರುವ ಅನ್ನದಾನಗೌಡ ಬಯ್ಯಾಪೂರ ಆಸ್ಪತ್ರೆ ಮುಂಭಾಗದಲ್ಲಿ ನಾಟ್ಯ ಸಂಘವೊ೦ದು ಠಿಕಾಣಿ ಹೂಡಿದ್ದು ಹವ್ಯಾಸಿ, ಸಾಂಸಾರಿಕ ಹಾಗೂ ಸಾಮಾಜಿಕ ನಾಟಕಗಳ ಪ್ರದರ್ಶನ ನಡೆಯುತ್ತಿದೆ. ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿಯವರಾದ ರಾಜಣ್ಣ ರಂಗಭೂಮಿಕಲಾವಿದರು. ನಾಟಕ ಸಾಹಿತ್ಯ ಬರೆಯುತ್ತ ನಿರ್ದೇಶನ ಮಾಡುತ್ತ ರಂಗಭೂಮಿಯಲ್ಲೇ ಬದುಕು ಕಟ್ಟಿಕೊಂಡವರು. ಸದ್ಯ ರಾಜಣ್ಣ ಜೇವರ್ಗಿಯವರ ಇಡೀ ಕುಟುಂಬವೇ ರಂಗಭೂಮಿ ಕಲೆಗೆ ಜೀವನ ಮುಡಿಪಾಗಿಟ್ಟಿದೆ. ಒಟ್ಟಿನಲ್ಲಿ ಕೊರೊನಾ ಬಳಿಕ ಕಲಾವಿದರೂ ನಾಟಕಗಳು ಶುರು ಮಾಡಿದ್ದಾರೆ. ಆದ್ರೆ ಜನರು ಮಾತ್ರ ನಾಟಕ ಕಂಪನಿಗಳ ಕಡೆಗೆ ಮುಖ ಮಾಡುತ್ತಿಲ್ಲ. ಅತ್ತ ಪ್ರೇಕ್ಷಕರು ಇಲ್ಲದೆ ಇತ್ತ ಸರ್ಕಾರದ ಸಹಾಯವೂ ಇಲ್ಲದೆ ನಾಟಕ ಕಂಪನಿಗಳು ಹಾಗೂ ರಂಗಭೂಮಿ ಕಲಾವಿದರೂ ಕಂಗಾಲಾಗಿದ್ದಾರೆ. ಹೀಗಾಗಿ ಇನ್ನಾದ್ರೂ ಸರ್ಕಾರಗಳು ರಂಗಭೂಮಿ ಉಳಿವಿಗೆ ಮುಂದಾಗಬೇಕಿದೆ..
 

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more