ಬಳ್ಳಾರಿ ದುರಂತದ ಭಯಾನಕ ಸತ್ಯ ಬಯಲು: ಬಡ ಹೆಣ್ಣು ಮಕ್ಕಳ ಜೀವದ ಜೊತೆ ಇದೆಂಥಾ ಚೆಲ್ಲಾಟ?

ಬಳ್ಳಾರಿ ದುರಂತದ ಭಯಾನಕ ಸತ್ಯ ಬಯಲು: ಬಡ ಹೆಣ್ಣು ಮಕ್ಕಳ ಜೀವದ ಜೊತೆ ಇದೆಂಥಾ ಚೆಲ್ಲಾಟ?

Published : Nov 30, 2024, 11:39 AM IST

ಇದೇ ವಿಚಾರವನ್ನು ಮುಂದಿಡ್ಕೊಂಡು ವಿಪಕ್ಷಗಳು ಸರ್ಕಾರದ ಮೇಲೆ ಮುಗಿ ಬಿದ್ದಿವೆ. ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಿಗೆ ವಿಪಕ್ಷಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿವೆ. ಆರೋಗ್ಯ ಸಚಿವ ದಿನೇಶ ಗುಂಡೂರವ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಕೆಂಡ ಕಾರ್ತಿವೆ. 

ಬಳ್ಳಾರಿ(ನ.30):   ಪುಟ್ಟ ಜೀವಗಳು ಹುಟ್ಟಿ ದಿನಗಳು ಕಳೆದಿದ್ದವು ಅಷ್ಟೆ. ಸತ್ತು ಬದುಕಿದಂತಹ ನೋವನ್ನ ಅನುಭವಿಸಿ ಜನ್ಮ ಕೊಟ್ಟಿದ್ದವು ಆ ಹೆಣ್ಣು ಜೀವಗಳು.. ಆದ್ರೆ, ಆ ಹೆಣ್ಣು ಜೀವಗಳೇ ಇಂದಿಲ್ಲ. ಒಂದಲ್ಲ… ಎರಡಲ್ಲ ಬಾಣಂತಿಯರ ಸಾವಿನ ಮರಣ ಮೃದಂಗವೇ ಬಾರಿಸಿದೆ. ನಿರ್ಲಕ್ಷ್ಯವೋ..? ನಿರ್ಲಜ್ಜತನವೋ..? ಇನ್ನೆಷ್ಟು ಬಾಣಂತಿಯರ ಬಲಿ ಬೇಕು..? ರಾಜ್ಯದ ಬಡ ಹೆಣ್ಣು ಮಕ್ಕಳ ಜೀವದ ಜೊತೆಗೆ ಇದೆಂಥಾ ಚೆಲ್ಲಾಟ..? ಜೀವ ಕೊಟ್ಟ ಜೀವಗಳನ್ನೇ ತೆಗೆದುಬಿಡ್ತಾ ಮೆಡಿಕಲ್ ಮಾಫಿಯಾ..? ಇದೇ ಈ ಹೊತ್ತಿನ ವಿಶೇಷ ಬಾಣಂತಿಯರ ಬಲಿ.. 

ಸದ್ಯ ಇದೇ ವಿಚಾರವನ್ನು ಮುಂದಿಡ್ಕೊಂಡು ವಿಪಕ್ಷಗಳು ಸರ್ಕಾರದ ಮೇಲೆ ಮುಗಿ ಬಿದ್ದಿವೆ. ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಿಗೆ ವಿಪಕ್ಷಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿವೆ. ಆರೋಗ್ಯ ಸಚಿವ ದಿನೇಶ ಗುಂಡೂರವ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಕೆಂಡ ಕಾರ್ತಿವೆ. 

ಫೆಂಗಲ್ ಅಬ್ಬರ: ಕಾದಿದ್ಯಾ ಮತ್ತೊಂದು ದುರಂತ, ರಾಜ್ಯಕ್ಕೂ ಇದ್ಯಾ ಆತಂಕ?

ರಾಜಕೀಯ ಆರೋಪ – ಪ್ರತ್ಯಾರೋಪಗಳು ಏನೇ ಇರಲಿ.. ಸಾವಿಗೆ ಕಾರಣವೂ ಕೂಡ ಏನೇ ಆಗಿರಲಿ.. ಹೋದ ಜೀವಗಳು ಮತ್ತೆ ಬರಲ್ಲ. ಆ ನೋವು ಬಲಿಯಾದ ಬಾಣಂತಿಯರ ಕುಟುಂಬವನ್ನ ಕಾಡ್ತಿದೆ. 

ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಾಗಿದೆ. ಸಾವಿನ ಅರ್ಧ ಸತ್ಯ ಈಗಾಗಲೇ ಹೊರಬಿದ್ದಿದ್ದು ಇನ್ನರ್ಧ ಸತ್ಯ ಹೊರ ಬರಬೇಕಿದೆ. ಇಂದಲ್ಲಾ, ನಾಳೆ ಸಾವಿಗೆ ಕಾರಣ ಏನು ಅಂತ ಗೊತ್ತಾಗ್ಬಹುದು. ಆದ್ರೆ, ಸತ್ತು ಹೋದ ಆ ಜೀವಗಳು ಮತ್ತೆ ಮರಳಿ ಬರುತ್ವಾ..? ಹೆಣ್ಣು ಮಕ್ಕಳನ್ನ ಕಳೆದುಕೊಂಡ ಆ ಕುಟುಂಬದವರ ಆಕ್ರಂದನವನ್ನ ನೋಡೋದಿಕ್ಕೆ ಸಾಧ್ಯವೇ ಇಲ್ಲ. 

ನಾಲ್ಕು ಬಾಣಂತಿಯರ ಸಾವಿಗೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಯಾರ ನಿರ್ಲಕ್ಷ್ಯವು ಕಾರಣವಲ್ಲವಂತೆ. ಹಾಗಿದ್ರೆ, ನಾಲ್ಕು ಬಡ  ಬಾಣಂತಿಯರು ಅಲ್ಲಿ ಬಲಿಯಾಗಿದ್ದು ಹೇಗೆ..? ತಾಯಿ ಇಲ್ಲದೇ ತಬ್ಬಲಿಯಾಗಿದ್ದಾವಲ್ಲಾ  ಆ ಹಸುಗೂಸುಗಳು ಅವುಗಳು ನಮ್ಮ ಹಡೆದವ್ವನಿಗೆ ಏನಾಯ್ತು ಅಂತ ಕೇಳಿದ್ರೆ ಅದಕ್ಕೆ ಉತ್ತರವೇನು..? ಸದ್ಯಕ್ಕೆ ತಜ್ಞರ ತಂಡ ಇದಕ್ಕೆ ಉತ್ತರ ಕೊಟ್ಟಿದೆ. ಹಾಗಿದ್ರೆ, ಏನಾ ಉತ್ತರ..? ಇಲ್ಲಿ ಮೆಡಿಕಲ್ ಮಾಫಿಯಾದ ಕರಾಳತೆ ಅದೆಷ್ಟು ಭಯಾನಕವಾಗಿದೆ ಗೊತ್ತಾ.

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
Read more