ಬಳ್ಳಾರಿ ದುರಂತದ ಭಯಾನಕ ಸತ್ಯ ಬಯಲು: ಬಡ ಹೆಣ್ಣು ಮಕ್ಕಳ ಜೀವದ ಜೊತೆ ಇದೆಂಥಾ ಚೆಲ್ಲಾಟ?

ಬಳ್ಳಾರಿ ದುರಂತದ ಭಯಾನಕ ಸತ್ಯ ಬಯಲು: ಬಡ ಹೆಣ್ಣು ಮಕ್ಕಳ ಜೀವದ ಜೊತೆ ಇದೆಂಥಾ ಚೆಲ್ಲಾಟ?

Published : Nov 30, 2024, 11:39 AM IST

ಇದೇ ವಿಚಾರವನ್ನು ಮುಂದಿಡ್ಕೊಂಡು ವಿಪಕ್ಷಗಳು ಸರ್ಕಾರದ ಮೇಲೆ ಮುಗಿ ಬಿದ್ದಿವೆ. ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಿಗೆ ವಿಪಕ್ಷಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿವೆ. ಆರೋಗ್ಯ ಸಚಿವ ದಿನೇಶ ಗುಂಡೂರವ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಕೆಂಡ ಕಾರ್ತಿವೆ. 

ಬಳ್ಳಾರಿ(ನ.30):   ಪುಟ್ಟ ಜೀವಗಳು ಹುಟ್ಟಿ ದಿನಗಳು ಕಳೆದಿದ್ದವು ಅಷ್ಟೆ. ಸತ್ತು ಬದುಕಿದಂತಹ ನೋವನ್ನ ಅನುಭವಿಸಿ ಜನ್ಮ ಕೊಟ್ಟಿದ್ದವು ಆ ಹೆಣ್ಣು ಜೀವಗಳು.. ಆದ್ರೆ, ಆ ಹೆಣ್ಣು ಜೀವಗಳೇ ಇಂದಿಲ್ಲ. ಒಂದಲ್ಲ… ಎರಡಲ್ಲ ಬಾಣಂತಿಯರ ಸಾವಿನ ಮರಣ ಮೃದಂಗವೇ ಬಾರಿಸಿದೆ. ನಿರ್ಲಕ್ಷ್ಯವೋ..? ನಿರ್ಲಜ್ಜತನವೋ..? ಇನ್ನೆಷ್ಟು ಬಾಣಂತಿಯರ ಬಲಿ ಬೇಕು..? ರಾಜ್ಯದ ಬಡ ಹೆಣ್ಣು ಮಕ್ಕಳ ಜೀವದ ಜೊತೆಗೆ ಇದೆಂಥಾ ಚೆಲ್ಲಾಟ..? ಜೀವ ಕೊಟ್ಟ ಜೀವಗಳನ್ನೇ ತೆಗೆದುಬಿಡ್ತಾ ಮೆಡಿಕಲ್ ಮಾಫಿಯಾ..? ಇದೇ ಈ ಹೊತ್ತಿನ ವಿಶೇಷ ಬಾಣಂತಿಯರ ಬಲಿ.. 

ಸದ್ಯ ಇದೇ ವಿಚಾರವನ್ನು ಮುಂದಿಡ್ಕೊಂಡು ವಿಪಕ್ಷಗಳು ಸರ್ಕಾರದ ಮೇಲೆ ಮುಗಿ ಬಿದ್ದಿವೆ. ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಿಗೆ ವಿಪಕ್ಷಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿವೆ. ಆರೋಗ್ಯ ಸಚಿವ ದಿನೇಶ ಗುಂಡೂರವ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಕೆಂಡ ಕಾರ್ತಿವೆ. 

ಫೆಂಗಲ್ ಅಬ್ಬರ: ಕಾದಿದ್ಯಾ ಮತ್ತೊಂದು ದುರಂತ, ರಾಜ್ಯಕ್ಕೂ ಇದ್ಯಾ ಆತಂಕ?

ರಾಜಕೀಯ ಆರೋಪ – ಪ್ರತ್ಯಾರೋಪಗಳು ಏನೇ ಇರಲಿ.. ಸಾವಿಗೆ ಕಾರಣವೂ ಕೂಡ ಏನೇ ಆಗಿರಲಿ.. ಹೋದ ಜೀವಗಳು ಮತ್ತೆ ಬರಲ್ಲ. ಆ ನೋವು ಬಲಿಯಾದ ಬಾಣಂತಿಯರ ಕುಟುಂಬವನ್ನ ಕಾಡ್ತಿದೆ. 

ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಾಗಿದೆ. ಸಾವಿನ ಅರ್ಧ ಸತ್ಯ ಈಗಾಗಲೇ ಹೊರಬಿದ್ದಿದ್ದು ಇನ್ನರ್ಧ ಸತ್ಯ ಹೊರ ಬರಬೇಕಿದೆ. ಇಂದಲ್ಲಾ, ನಾಳೆ ಸಾವಿಗೆ ಕಾರಣ ಏನು ಅಂತ ಗೊತ್ತಾಗ್ಬಹುದು. ಆದ್ರೆ, ಸತ್ತು ಹೋದ ಆ ಜೀವಗಳು ಮತ್ತೆ ಮರಳಿ ಬರುತ್ವಾ..? ಹೆಣ್ಣು ಮಕ್ಕಳನ್ನ ಕಳೆದುಕೊಂಡ ಆ ಕುಟುಂಬದವರ ಆಕ್ರಂದನವನ್ನ ನೋಡೋದಿಕ್ಕೆ ಸಾಧ್ಯವೇ ಇಲ್ಲ. 

ನಾಲ್ಕು ಬಾಣಂತಿಯರ ಸಾವಿಗೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಯಾರ ನಿರ್ಲಕ್ಷ್ಯವು ಕಾರಣವಲ್ಲವಂತೆ. ಹಾಗಿದ್ರೆ, ನಾಲ್ಕು ಬಡ  ಬಾಣಂತಿಯರು ಅಲ್ಲಿ ಬಲಿಯಾಗಿದ್ದು ಹೇಗೆ..? ತಾಯಿ ಇಲ್ಲದೇ ತಬ್ಬಲಿಯಾಗಿದ್ದಾವಲ್ಲಾ  ಆ ಹಸುಗೂಸುಗಳು ಅವುಗಳು ನಮ್ಮ ಹಡೆದವ್ವನಿಗೆ ಏನಾಯ್ತು ಅಂತ ಕೇಳಿದ್ರೆ ಅದಕ್ಕೆ ಉತ್ತರವೇನು..? ಸದ್ಯಕ್ಕೆ ತಜ್ಞರ ತಂಡ ಇದಕ್ಕೆ ಉತ್ತರ ಕೊಟ್ಟಿದೆ. ಹಾಗಿದ್ರೆ, ಏನಾ ಉತ್ತರ..? ಇಲ್ಲಿ ಮೆಡಿಕಲ್ ಮಾಫಿಯಾದ ಕರಾಳತೆ ಅದೆಷ್ಟು ಭಯಾನಕವಾಗಿದೆ ಗೊತ್ತಾ.

29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
Read more