Suvarna cover story:ರಾಗಿ ಬೆಳೆದ ರೈತರ ಕಷ್ಟ ಯಾರಿಗೂ ಬೇಡ..!

Suvarna cover story:ರಾಗಿ ಬೆಳೆದ ರೈತರ ಕಷ್ಟ ಯಾರಿಗೂ ಬೇಡ..!

Published : Apr 08, 2023, 07:45 PM ISTUpdated : Apr 08, 2023, 07:46 PM IST

ರಾಗಿ ಬೆಳೆಗೆ ಸರ್ಕಾರ ಘೋಷಣೆ ಮಾಡಿದ ಬೆಂಬಲ ಬೆಲೆ ಪಡೆಯಲು ರೈತರು ಪಡುವ ಕಷ್ಟವನ್ನು ಹಾಗೂ ಲಂಚಾವತಾರವನ್ನು  ಹೊಸದುರ್ಗದ ಎಪಿಎಂಸಿಯಲ್ಲಿ ನೀವೇ ಕಣ್ಣಾರೆ ನೋಡಿ. 

ಹೊಸದುರ್ಗ : ರಾಗಿ ಬೆಳೆಗೆ ಸರ್ಕಾರ ಬಂಬಲ ಬೆಲೆಯನ್ನೇನೋ ಘೋಷಣೆ ಮಾಡಿದೆ. ಆದರೆ, ಅದನ್ನು ಪಡೆಯಲು ರೈತರು ಭಾರಿ ಕಷ್ಟಪಡುತ್ತಿದ್ದಾರೆ. ಹೊಸದುರ್ಗದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ನಡೆಯುವ ಕರ್ಮಕಾಂಡ ಮತ್ತು ಲಂಚಾವತಾರವನ್ನು ನೀವೇ ಕಣ್ಣಾರೆ ನೋಡಿ. 

ಹಮಾಲಿಗಳಿಗೆ 4 ಸಾವಿರ, ಅಧಿಕಾರಿಗಳಿಗೆ 1,500 ಹಾಗೂ ಟ್ರ್ಯಾಕ್ಟರ್‌ಗೆ 8 ಸಾವಿರ ರೂ. ಕೊಡಬೇಕು. ಎಲ್ಲವನ್ನೂ ಕೊಟ್ಟರೆ ಮಾತ್ರ ರಾಗಿ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಇಲ್ಲವಾದರೆ ದಲ್ಲಿ ರಾಗಿ ಮಾರಾಟ ಮಾಡೋಕೆ ಆಗುವುದಿಲ್ಲ. ರೈತರು ತಂದ ರಾಗಿಯನ್ನು ಗ್ರೇಡ್‌ ಮಾಡಿ ಚೀಟಿ ಬರೆದುಕೊಡಬೇಕು. ಆದರೆ, ಅಲ್ಲಿ ನಡೆಯೋದೇ ಬೇರೆ. ಗ್ರೇಡ್‌ ಮಾಡುವ ಮೊದಲೆ ರಾಗಿಯ ಗ್ರೇಡ್‌ ಚೀಟಿ ಕೊಡುವ ಮುಂಚೆ ಅವರಿಗೆ ಹಣವನ್ನು ಕೊಡಬೇಕು. ಹಣ ಕೊಟ್ಟರೆ ಮಾತ್ರ ರೈತರಿಗೆ ಗ್ರೇಡ್‌ ಚೀಟಿ ಕೊಡಲಾಗುತ್ತದೆ.

ಇಲ್ಲವಾದರೆ ಗ್ರೇಡ್‌ ಚೀಟಿ ಕೊಡದೇ ಜರಡಿ ಹಾಕಿ, ಧೂಳು ಇದೆ ಗಾಳಿಗೆ ತೂರಿಕೊಂಡು ಬನ್ನಿ ಎಂದು ಕ್ಯಾತೆ ತೆಗೆಯುತ್ತಾರೆ. ಆಗ ಸಾವಿರಾರು ರೂಪಾಯಿ ಟ್ರ್ಯಾಕ್ಟರ್‌ ಬಾಡಿಗೆ ಕೊಟ್ಟು ರಾಗಿಯನ್ನು ಮಾರುಕಟ್ಟೆಗೆ ತಂದ ರೈತರು ವಾಪಸ್‌ ತೆಗೆದುಕೊಂಡು ಹೋಗಲಾಗದೇ ಗ್ರೇಡ್‌ ಕೊಡುವ ವ್ಯಕ್ತಿಗೆ ಹಣವನ್ನು ಕೊಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ವ್ಯಕ್ತಿಗಳು ಪ್ರತಿನಿತ್ಯ ಸಾವಿರಾರು ರೈತರಿಂದ ಲಕ್ಷಾಂತರ ರೂ. ಲೂಟಿ ಮಾಡುತ್ತಾರೆ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!