Suvarna cover story:ರಾಗಿ ಬೆಳೆದ ರೈತರ ಕಷ್ಟ ಯಾರಿಗೂ ಬೇಡ..!

Suvarna cover story:ರಾಗಿ ಬೆಳೆದ ರೈತರ ಕಷ್ಟ ಯಾರಿಗೂ ಬೇಡ..!

Published : Apr 08, 2023, 07:45 PM ISTUpdated : Apr 08, 2023, 07:46 PM IST

ರಾಗಿ ಬೆಳೆಗೆ ಸರ್ಕಾರ ಘೋಷಣೆ ಮಾಡಿದ ಬೆಂಬಲ ಬೆಲೆ ಪಡೆಯಲು ರೈತರು ಪಡುವ ಕಷ್ಟವನ್ನು ಹಾಗೂ ಲಂಚಾವತಾರವನ್ನು  ಹೊಸದುರ್ಗದ ಎಪಿಎಂಸಿಯಲ್ಲಿ ನೀವೇ ಕಣ್ಣಾರೆ ನೋಡಿ. 

ಹೊಸದುರ್ಗ : ರಾಗಿ ಬೆಳೆಗೆ ಸರ್ಕಾರ ಬಂಬಲ ಬೆಲೆಯನ್ನೇನೋ ಘೋಷಣೆ ಮಾಡಿದೆ. ಆದರೆ, ಅದನ್ನು ಪಡೆಯಲು ರೈತರು ಭಾರಿ ಕಷ್ಟಪಡುತ್ತಿದ್ದಾರೆ. ಹೊಸದುರ್ಗದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ನಡೆಯುವ ಕರ್ಮಕಾಂಡ ಮತ್ತು ಲಂಚಾವತಾರವನ್ನು ನೀವೇ ಕಣ್ಣಾರೆ ನೋಡಿ. 

ಹಮಾಲಿಗಳಿಗೆ 4 ಸಾವಿರ, ಅಧಿಕಾರಿಗಳಿಗೆ 1,500 ಹಾಗೂ ಟ್ರ್ಯಾಕ್ಟರ್‌ಗೆ 8 ಸಾವಿರ ರೂ. ಕೊಡಬೇಕು. ಎಲ್ಲವನ್ನೂ ಕೊಟ್ಟರೆ ಮಾತ್ರ ರಾಗಿ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಇಲ್ಲವಾದರೆ ದಲ್ಲಿ ರಾಗಿ ಮಾರಾಟ ಮಾಡೋಕೆ ಆಗುವುದಿಲ್ಲ. ರೈತರು ತಂದ ರಾಗಿಯನ್ನು ಗ್ರೇಡ್‌ ಮಾಡಿ ಚೀಟಿ ಬರೆದುಕೊಡಬೇಕು. ಆದರೆ, ಅಲ್ಲಿ ನಡೆಯೋದೇ ಬೇರೆ. ಗ್ರೇಡ್‌ ಮಾಡುವ ಮೊದಲೆ ರಾಗಿಯ ಗ್ರೇಡ್‌ ಚೀಟಿ ಕೊಡುವ ಮುಂಚೆ ಅವರಿಗೆ ಹಣವನ್ನು ಕೊಡಬೇಕು. ಹಣ ಕೊಟ್ಟರೆ ಮಾತ್ರ ರೈತರಿಗೆ ಗ್ರೇಡ್‌ ಚೀಟಿ ಕೊಡಲಾಗುತ್ತದೆ.

ಇಲ್ಲವಾದರೆ ಗ್ರೇಡ್‌ ಚೀಟಿ ಕೊಡದೇ ಜರಡಿ ಹಾಕಿ, ಧೂಳು ಇದೆ ಗಾಳಿಗೆ ತೂರಿಕೊಂಡು ಬನ್ನಿ ಎಂದು ಕ್ಯಾತೆ ತೆಗೆಯುತ್ತಾರೆ. ಆಗ ಸಾವಿರಾರು ರೂಪಾಯಿ ಟ್ರ್ಯಾಕ್ಟರ್‌ ಬಾಡಿಗೆ ಕೊಟ್ಟು ರಾಗಿಯನ್ನು ಮಾರುಕಟ್ಟೆಗೆ ತಂದ ರೈತರು ವಾಪಸ್‌ ತೆಗೆದುಕೊಂಡು ಹೋಗಲಾಗದೇ ಗ್ರೇಡ್‌ ಕೊಡುವ ವ್ಯಕ್ತಿಗೆ ಹಣವನ್ನು ಕೊಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ವ್ಯಕ್ತಿಗಳು ಪ್ರತಿನಿತ್ಯ ಸಾವಿರಾರು ರೈತರಿಂದ ಲಕ್ಷಾಂತರ ರೂ. ಲೂಟಿ ಮಾಡುತ್ತಾರೆ.

29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
Read more