ಹಕ್ಕಿ ಕಿರಿಕ್‌ಗೆ ಜನ ಹೈರಾಣು: ಹಾವಿನ ದ್ವೇಷ 12 ವರುಷ, ಕಾಗೆ ದ್ವೇಷ ಎಷ್ಟು ವರುಷ..?

ಹಕ್ಕಿ ಕಿರಿಕ್‌ಗೆ ಜನ ಹೈರಾಣು: ಹಾವಿನ ದ್ವೇಷ 12 ವರುಷ, ಕಾಗೆ ದ್ವೇಷ ಎಷ್ಟು ವರುಷ..?

Suvarna News   | Asianet News
Published : Jan 30, 2022, 11:55 AM IST

*   ತಲೆಗೆ ಕುಕ್ಕಿ ಪರಾರಿಯಾಗುವ ಕಾಗೆಯಿಂದ ಜನ ಹೈರಾಣು
*   ರಸ್ತೆಯಲ್ಲಿ ಓಡಾಡುವುದೇ ಜನರಿಗೆ ದೊಡ್ಡ ತಲೆನೋವು 
*   ಆಂಜನೇಯ ದೇವಾಲಯಕ್ಕೂ ಕಾಗೆಗೂ ಏನು ಸಂಬಂಧ?
 

ಚಿತ್ರದುರ್ಗ(ಜ.30):  ಕಾಗೆಯೊಂದು ಜನರು ಓಡಾಡೋದಕ್ಕೂ ಬಿಡದೇ ಸಿಕ್ಕ ಸಿಕ್ಕವರ ಮೇಲೆ ಅಟ್ಯಾಕ್ ಮಾಡುತ್ತಿರುವ ಘಟನೆ ಚಿತ್ರದುರ್ಗ ತಾಲೂಕಿನ ಓಬಳಾಪುರ ಗ್ರಾಮದಲ್ಲಿ ನಡೆದಿದೆ.  ಇದ್ರಿಂದ ಬೇಸತ್ತ ಜನರು ಅಯ್ಯೋ‌ ಇದೇನಪ್ಪ ಕಾಗೆ ಕುಕ್ಕಿ ಹೋಯ್ತು ಎಂಬ ಭಯದಿಂದ ಪಾವಗಡದ ಶನೇಶ್ವರ ದೇವರ ಮೊರೆ ಹೋಗಿ ಪೂಜೆ ಸಲ್ಲಿಸಿ ಬಂದಿದ್ದೂ ಆಯ್ತು. ಹೀಗೆ ನಿತ್ಯ ಹತ್ತಾರು ಮಂದಿಗೆ ಕುಕ್ಕಲು ಶುರುಮಾಡಿದ ಕಾಗೆಯ ಅವಾಂತರ ನೋಡಿ ಜನರೇ ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಯಿತು. 

ಇನ್ನೂ ಈ ಕಾಗೆಯು ಜನರಿಗೆ ಮಾತ್ರವಲ್ಲದೇ ಮನೆಯ ಕಿಟಕಿಯ ಗಾಜಿನ ಬಳಿ ಬಂದು ನಿತ್ಯ ಕುಕ್ಕಲಾರಂಭಿಸಿದೆ. ಇದ್ರಿಂದ ಆಶ್ಚರ್ಯಗೊಂಡ ಜನರು ಯಾಕಿಂಗೆ ಆಗ್ತಿರಬಹುದು ಎಂದು ಚಿಂತೆಗೆ ಒಳಗಾಗಿದ್ದಾರೆ.‌ ಆದ್ರೆ ಕಳೆದ 25 ವರ್ಷಗಳ ಹಿಂದೆ ಗ್ರಾಮದಲ್ಲಿ ಇದ್ದ ಆಂಜನೇಯ ದೇವಾಲಯವನ್ನು ಕೆಡವಿ ಆಂಜನೇಯ ದೇವರನ್ನು ಇಂದು ಅನಾಥವಾಗಿ ರಸ್ತೆಯ ಬದಿಯಲ್ಲಿರುವ ಒಂದು ಪಾಳು ಬಿದ್ದಿರೋ‌ ಜಾಗದಲ್ಲಿ ಇಟ್ಟಿರೋದೆ ಶಾಪವಾ ಎಂದು ಜನರು ಆಲೋಚಿಸಿದ್ದಾರೆ. ಆದ್ರೂ 25 ವರ್ಷಗಳಿಂದ ಇಲ್ಲದ ಯಾವುದೇ ಸಮಸ್ಯೆ ದಿಢೀರ್ ಅಂತ ಆರು ತಿಂಗಳಿಂದ‌ ಕಾಗೆ ಕಾಟ ಕೊಡಲು ಶುರುಮಾಡಿದ್ಯಲ್ಲ ಎಂದೂ ಯೋಚಿಸಿದ್ದಾರೆ. 

Karwar: ಸೀಬರ್ಡ್ ನೌಕಾನೆಲೆಗೆ ಭೂಮಿಕೊಟ್ಟ ಹಾಲಕ್ಕಿ ಒಕ್ಕಲಿಗರಿಗಿಲ್ಲ ಉದ್ಯೋಗ..!

ಒಟ್ಟಾರೆಯಾಗಿ ಕಾಗೆಯ ಕಾಟಕ್ಕೆ ಇಡೀ ಗ್ರಾಮದ ಜನರು ರೋಸಿ ಹೋಗಿದ್ದು. ಕೂಡಲೇ ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರ ಬೇಗ ಆಗಿ ಕಾಗೆಯ ಕಾಟ ತಪ್ಪಲಿ ಎಂಬುದು ಗ್ರಾಮಸ್ಥರ ಆಶಯ.
 

23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!
Read more