ಹಕ್ಕಿ ಕಿರಿಕ್‌ಗೆ ಜನ ಹೈರಾಣು: ಹಾವಿನ ದ್ವೇಷ 12 ವರುಷ, ಕಾಗೆ ದ್ವೇಷ ಎಷ್ಟು ವರುಷ..?

ಹಕ್ಕಿ ಕಿರಿಕ್‌ಗೆ ಜನ ಹೈರಾಣು: ಹಾವಿನ ದ್ವೇಷ 12 ವರುಷ, ಕಾಗೆ ದ್ವೇಷ ಎಷ್ಟು ವರುಷ..?

Suvarna News   | Asianet News
Published : Jan 30, 2022, 11:55 AM IST

*   ತಲೆಗೆ ಕುಕ್ಕಿ ಪರಾರಿಯಾಗುವ ಕಾಗೆಯಿಂದ ಜನ ಹೈರಾಣು
*   ರಸ್ತೆಯಲ್ಲಿ ಓಡಾಡುವುದೇ ಜನರಿಗೆ ದೊಡ್ಡ ತಲೆನೋವು 
*   ಆಂಜನೇಯ ದೇವಾಲಯಕ್ಕೂ ಕಾಗೆಗೂ ಏನು ಸಂಬಂಧ?
 

ಚಿತ್ರದುರ್ಗ(ಜ.30):  ಕಾಗೆಯೊಂದು ಜನರು ಓಡಾಡೋದಕ್ಕೂ ಬಿಡದೇ ಸಿಕ್ಕ ಸಿಕ್ಕವರ ಮೇಲೆ ಅಟ್ಯಾಕ್ ಮಾಡುತ್ತಿರುವ ಘಟನೆ ಚಿತ್ರದುರ್ಗ ತಾಲೂಕಿನ ಓಬಳಾಪುರ ಗ್ರಾಮದಲ್ಲಿ ನಡೆದಿದೆ.  ಇದ್ರಿಂದ ಬೇಸತ್ತ ಜನರು ಅಯ್ಯೋ‌ ಇದೇನಪ್ಪ ಕಾಗೆ ಕುಕ್ಕಿ ಹೋಯ್ತು ಎಂಬ ಭಯದಿಂದ ಪಾವಗಡದ ಶನೇಶ್ವರ ದೇವರ ಮೊರೆ ಹೋಗಿ ಪೂಜೆ ಸಲ್ಲಿಸಿ ಬಂದಿದ್ದೂ ಆಯ್ತು. ಹೀಗೆ ನಿತ್ಯ ಹತ್ತಾರು ಮಂದಿಗೆ ಕುಕ್ಕಲು ಶುರುಮಾಡಿದ ಕಾಗೆಯ ಅವಾಂತರ ನೋಡಿ ಜನರೇ ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಯಿತು. 

ಇನ್ನೂ ಈ ಕಾಗೆಯು ಜನರಿಗೆ ಮಾತ್ರವಲ್ಲದೇ ಮನೆಯ ಕಿಟಕಿಯ ಗಾಜಿನ ಬಳಿ ಬಂದು ನಿತ್ಯ ಕುಕ್ಕಲಾರಂಭಿಸಿದೆ. ಇದ್ರಿಂದ ಆಶ್ಚರ್ಯಗೊಂಡ ಜನರು ಯಾಕಿಂಗೆ ಆಗ್ತಿರಬಹುದು ಎಂದು ಚಿಂತೆಗೆ ಒಳಗಾಗಿದ್ದಾರೆ.‌ ಆದ್ರೆ ಕಳೆದ 25 ವರ್ಷಗಳ ಹಿಂದೆ ಗ್ರಾಮದಲ್ಲಿ ಇದ್ದ ಆಂಜನೇಯ ದೇವಾಲಯವನ್ನು ಕೆಡವಿ ಆಂಜನೇಯ ದೇವರನ್ನು ಇಂದು ಅನಾಥವಾಗಿ ರಸ್ತೆಯ ಬದಿಯಲ್ಲಿರುವ ಒಂದು ಪಾಳು ಬಿದ್ದಿರೋ‌ ಜಾಗದಲ್ಲಿ ಇಟ್ಟಿರೋದೆ ಶಾಪವಾ ಎಂದು ಜನರು ಆಲೋಚಿಸಿದ್ದಾರೆ. ಆದ್ರೂ 25 ವರ್ಷಗಳಿಂದ ಇಲ್ಲದ ಯಾವುದೇ ಸಮಸ್ಯೆ ದಿಢೀರ್ ಅಂತ ಆರು ತಿಂಗಳಿಂದ‌ ಕಾಗೆ ಕಾಟ ಕೊಡಲು ಶುರುಮಾಡಿದ್ಯಲ್ಲ ಎಂದೂ ಯೋಚಿಸಿದ್ದಾರೆ. 

Karwar: ಸೀಬರ್ಡ್ ನೌಕಾನೆಲೆಗೆ ಭೂಮಿಕೊಟ್ಟ ಹಾಲಕ್ಕಿ ಒಕ್ಕಲಿಗರಿಗಿಲ್ಲ ಉದ್ಯೋಗ..!

ಒಟ್ಟಾರೆಯಾಗಿ ಕಾಗೆಯ ಕಾಟಕ್ಕೆ ಇಡೀ ಗ್ರಾಮದ ಜನರು ರೋಸಿ ಹೋಗಿದ್ದು. ಕೂಡಲೇ ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರ ಬೇಗ ಆಗಿ ಕಾಗೆಯ ಕಾಟ ತಪ್ಪಲಿ ಎಂಬುದು ಗ್ರಾಮಸ್ಥರ ಆಶಯ.
 

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more