ಗುಮ್ಮಟನಗರಿಯಲ್ಲಿ ಮೇಳೈಸಿದ ದೀಪಾವಳಿ ಸಂಭ್ರಮ: ಇಲ್ಲಿ ನೆರವೇರುತ್ತೆ ಸಗಣಿಯಿಂದ ತಯಾರಾದ ಗೊಂಬೆಗಳಿಗೆ ಪೂಜೆ

ಗುಮ್ಮಟನಗರಿಯಲ್ಲಿ ಮೇಳೈಸಿದ ದೀಪಾವಳಿ ಸಂಭ್ರಮ: ಇಲ್ಲಿ ನೆರವೇರುತ್ತೆ ಸಗಣಿಯಿಂದ ತಯಾರಾದ ಗೊಂಬೆಗಳಿಗೆ ಪೂಜೆ

Published : Nov 13, 2023, 11:00 AM IST

ದೀಪಾವಳಿ ಹಬ್ಬವನ್ನು ಎಲ್ಲಾ ಊರಿನಲ್ಲಿ ತಮ್ಮದೇ ಸಂಪ್ರಾದಾಯದಂತೆ ಆಚರಿಸುತ್ತಾರೆ. ಅದ್ರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ದೀಪಾವಳಿಯನ್ನ ಸಂಭ್ರಮಿಸುವ ಪರಿಯೇ ಬೇರೆ. ಮನೆಯಲ್ಲಿ ಹೆಣ್ಣು ಮಕ್ಕಳು ಸೆಗಣಿಯಲ್ಲಿ ಪಂಚ ಪಾಂಡವರ ಗೊಂಬೆಗಳ ನಿರ್ಮಿಸಿ ಮನೆ ಎದುರು ಪೂಜಿಸೋದು ದೀಪಾವಳಿಯ ಮತ್ತೊಂದು ವಿಶೇಷ.
 


ಒಂದೊಂದು ಊರಿನಲ್ಲಿ ವಿಭಿನ್ನವಾಗಿ, ಇಡೀ ದೇಶವೇ ಆಚರಿಸುವ ಹಬ್ಬವೆಂದರೆ ಅದು ದೀಪಾವಳಿ. ಅಂತೆಯೇ ಈ ದೀಪಾವಳಿ(Deepavali) ಹಬ್ಬವನ್ನು ಗೋವಿನ ಸೆಗಣಿಯಲ್ಲಿ (Cow Dung) ಗೊಂಬೆಗಳನ್ನು ಮಾಡಿ ಪೂಜೆ ಸಲ್ಲಿಸಿ ವಿಭಿನ್ನವಾಗಿ ಆಚರಿಸುವ ಪದ್ದತಿಯನ್ನು ನೀವು ಉತ್ತರಕರ್ನಾಟಕದ(North Karnataka) ಭಾಗದಲ್ಲಿ ನೋಡಬಹುದು. ದೀಪಾವಳಿ ದೀಪಗಳ ಹಬ್ಬ.. ಮನೆ ಮನೆಯಲ್ಲೂ ಮಣ್ಣಿನ ಹಣತೆಗಳನ್ನು ಬೆಳಗಿಸುತ್ತಾರೆ.. ಮತ್ತೆ ಕೆಲವರು ಪಟಾಕಿ ಹಚ್ಚಿ ಸಂಭ್ರಮಿಸುತ್ತಾರೆ... ಇನ್ನು ದೀಪಾವಳಿಯಲ್ಲಿ ಗೋ ಪೂಜೆಯೇ ವಿಶೇಷ.. ಆದ್ರೆ, ಉತ್ತರ ಕರ್ನಾಟಕ ಭಾಗದಲ್ಲಿ ದೀಪಾವಳಿ ಇನ್ನೂ ವಿಭಿನ್ನ.. ಇಲ್ಲಿ ಗೋವಿನ ಸಗಣಿಗಳಿಂದ ತಯಾರಿಸಿದ ಗೊಂಬೆಗಳಿಗೆ ಪೂಜಿಸುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಸಗಣಿ ಗೊಂಬೆಗಳ ಪೂಜೆಯ ಆಚರಣೆ ಹಿಂದಿನಿಂದಲೂ ಚಾಲ್ತಿಯಲ್ಲಿದೆ.. ನರಕ ಚತುರ್ದಶಿಯಿಂದ ಪಾಡ್ಯವರೆಗೂ 3 ದಿನಗಳ ಕಾಲ ಮನೆ ಎದುರು ಗೋವಿನ ಸಗಣಿಯಲ್ಲಿ ಪಂಚ ಪಾಂಡವರ ಆಕಾರದ ಗೊಂಬೆಗಳನ್ನು ರಚಿಸಿ ಅರಿಶಿಣ, ಕುಂಕುಮ, ಹಳದಿ ಹೂವುಗಳಿಂದ ಸಿಂಗರಿಸಿ ಪೂಜಿಸುತ್ತಾರೆ. ಕೊನೆಯ ದಿನ ಪಾಂಡವರು ವಧೆ ಮಾಡಿದ ದೈತ್ಯಾಸುರನನ್ನು ಸಗಣಿಯಲ್ಲಿ ತಯಾರಿಸಿ ಪೂಜಿಸುವ ಸಂಪ್ರಾದಯವಿದೆ. ವಿಭಿನ್ನ ಆಚರಣೆ ಹಿಂದೆಯೂ ಒಂದು ಧಾರ್ಮಿಕ ನಂಬಿಕೆ ಇದೆ. ಪಾಂಡವರು ವನವಾಸವಿದ್ದ ಸಂದರ್ಭದಲ್ಲಿ ದೈತ್ಯಾಸುರ ಎನ್ನುವ ರಾಕ್ಷಸನ ಕಾಟ ಹೆಚ್ಚಾಗಿತ್ತಂತೆ. ಪಾಂಡವರು ದೈತ್ಯಾಸುರನ ವಧೆ ಮಾಡಿದ ನೆನಪಲ್ಲಿ ಈ ಆಚರಣೆ ಮಾಡಲಾಗುತ್ತೆ. ಇನ್ನೊಂದು ನಂಬಿಕೆಯಂತೆ ಕೈಲಾಸದಲ್ಲಿರುವ ನಂದಾ, ಭದ್ರಾ, ಸುಗುಣಾ, ಶಶಿಲಾ, ಸುರಭಿ ಎನ್ನುವ ಗೋವುಗಳು ಶಿವನ ಬಳಿ ಭೂಮಿಯಲ್ಲಿ ತಮ್ಮ ಪೂಜೆ ಮಾಡಬೇಕೆಂದು ವರ ಕೇಳಿದ್ದವಂತೆ. ಹೀಗಾಗಿ ಶಿವ 5 ಗೋವುಗಳಿಗೆ ದೀಪಾವಳಿಯಂದು  ಪೂಜೆ ಮಾಡಲಾಗುತ್ತೆಂದು  ವರ ನೀಡಿದ್ರಂತೆ. ಅದರ ಪ್ರತೀಕವಾಗಿ ಪಂಚಪಾಂಡವರ ರೂಪದಲ್ಲಿ ಗೋ ಸಗಣಿ ಗೊಂಬೆಗೆ ಪೂಜೆ ಮಾಡಲಾಗುತ್ತೆ ಅನ್ನೋ ನಂಬಿಕೆ ಇದೆ. ದೀಪಾವಳಿಯಂದು 3 ಅಥವಾ 5 ದಿನಗಳ ಕಾಲ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದ ಎಲ್ಲ ಮನೆಗಳಲ್ಲೂ ಈ ಸೆಗಣಿಯಲ್ಲಿ ಮಾಡಲಾದ ಪಾಂಡವರ ಪೂಜೆ ನಡೆಯುತ್ತೆ. ಇನ್ನು ಹಬ್ಬದ ಕಡೆಯ ದಿನ ಪಾಂಡವರ ಸೆಗಣಿಯ ಆಕಾರಗಳನ್ನ ಮನೆ ಮಾಳಿಗೆ ಮೇಲೆ ಇಡೋದು ಇನ್ನೊಂದು ವಿಶೇಷವಾಗಿದೆ. 

ಇದನ್ನೂ ವೀಕ್ಷಿಸಿ:  ವಿಶೇಷವಾಗಿರುತ್ತೆ ಲಂಬಾಣಿ ತಾಂಡದ ಬೆಳಕಿನ ಹಬ್ಬ! ದೀಪಾವಳಿಯಲ್ಲಿ ಬಂಜಾರ ಯುವತಿಯರದ್ದೇ ಮೇಲುಗೈ!

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more