News Hour: ಸ್ಪಾಟ್ 13 ರಲ್ಲಿ GPR ಬಳಸಲು ಎಸ್​ಐಟಿ ನಿರ್ಧಾರ? ಹೊಸ ಜಾಗ, ಹೊಸ ಗುರುತು, ಎಸ್​ಐಟಿ ನಡೆ ನಿಗೂಢ!

News Hour: ಸ್ಪಾಟ್ 13 ರಲ್ಲಿ GPR ಬಳಸಲು ಎಸ್​ಐಟಿ ನಿರ್ಧಾರ? ಹೊಸ ಜಾಗ, ಹೊಸ ಗುರುತು, ಎಸ್​ಐಟಿ ನಡೆ ನಿಗೂಢ!

Published : Aug 09, 2025, 03:40 PM IST
ಧರ್ಮಸ್ಥಳ ಪ್ರಕರಣದ ತನಿಖೆಯಲ್ಲಿ ಎಸ್‌ಐಟಿ ಹೊಸ ಸ್ಥಳಗಳಲ್ಲಿ ಶೋಧ ಮುಂದುವರಿಸಿದೆ. ಜಿಪಿಆರ್ ತಂತ್ರಜ್ಞಾನ ಬಳಸಲು ನಿರ್ಧರಿಸಿದ್ದು, ಉಪ್ಪಿನ ಮೂಟೆಗಳ ಬಳಕೆ ಕುತೂಹಲ ಮೂಡಿಸಿದೆ. ಅಸ್ಥಿಪಂಜರದ ಡಿಎನ್‌ಎ ವರದಿಗಾಗಿ ಕಾಯಲಾಗುತ್ತಿದೆ.

ಮಂಗಳೂರು (ಆ,9): ಧರ್ಮಸ್ಥಳ ಪ್ರಕರಣಗಳ ತನಿಖೆ ನಡೆಸುತ್ತಿರುವ ಎಸ್‌ಐಟಿ, ನಿಗೂಢ ಹೆಜ್ಜೆಗಳನ್ನು ಇಡುತ್ತಿದ್ದು, ಹೊಸ ಸ್ಥಳಗಳಲ್ಲಿ ಶೋಧಕಾರ್ಯ ಮುಂದುವರಿಸಿದೆ. ಪ್ರಮುಖವಾಗಿ, ಬೆಂಗಳೂರಿನಿಂದ ಜಿಪಿಆರ್ (Ground Penetrating Radar) ತಂತ್ರಜ್ಞಾನವನ್ನು ತರಿಸಲು ನಿರ್ಧರಿಸಿದೆ. ಇದು ಅತ್ಯಂತ ದುಬಾರಿ ತಂತ್ರಜ್ಞಾನವಾಗಿದ್ದು, ಮಳೆಗಾಲದ ಕಾರಣ ಜೌಗು ಪ್ರದೇಶಗಳಲ್ಲಿ ಇದರ ಬಳಕೆಗೆ ಸವಾಲು ಎದುರಾಗಬಹುದು ಎನ್ನಲಾಗಿದೆ.

ಇತ್ತ, 14ನೇ ಸ್ಪಾಟ್‌ನಲ್ಲಿ ಸಿಕ್ಕಿದ ಅಸ್ಥಿಪಂಜರದ ಕುರಿತು ತನಿಖೆ ಚುರುಕುಗೊಂಡಿದ್ದು, ಡಿಎನ್‌ಎ ವರದಿಗಾಗಿ ಕಾಯಲಾಗುತ್ತಿದೆ. ಮತ್ತೊಂದೆಡೆ, ಧರ್ಮಸ್ಥಳದಿಂದ 2 ಕಿ.ಮೀ ದೂರದಲ್ಲಿರುವ ಬೊಳಿಯಾರ್ ಅರಣ್ಯ ಪ್ರದೇಶದ 15ನೇ ಪಾಯಿಂಟ್‌ನಲ್ಲಿ ಎಸ್‌ಐಟಿ ಶೋಧ ನಡೆಸುತ್ತಿದೆ. ಈ ಪ್ರದೇಶದಲ್ಲಿ 1986ರಲ್ಲಿ ಕೊಲೆಯಾದ ಪದ್ಮಲತಾ ಅಥವಾ 2010ರಲ್ಲಿ ಅತ್ಯಾಚಾರಕ್ಕೊಳಗಾದ ಶಾಲಾ ಬಾಲಕಿಯ ಮೃತದೇಹ ಹೂತಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ಶೋಧ ಕಾರ್ಯಕ್ಕಾಗಿ ಎಸ್‌ಐಟಿ ಉಪ್ಪಿನ ಮೂಟೆಗಳನ್ನು ಬಳಸುತ್ತಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಮೂಲಕ, ಹೊಸ ಸುಳಿವುಗಳ ಆಧಾರದ ಮೇಲೆ ಎಸ್‌ಐಟಿ ತನ್ನ ತನಿಖೆಯನ್ನು ನಿಗೂಢವಾಗಿ ಮುಂದುವರಿಸಿದೆ.

23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
24:50ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ
23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more