ಪಿಂಕಿ ಈಸ್ ಕಿಲ್ಲಿಂಗ್ ಮೀ, ಶೀ ವಾಂಟ್ ಮೈ ಡೆತ್! ಶವದ ಪೆಟ್ಟಿಗೆ ಮೇಲೂ ಪತ್ನಿ ಕಿರುಕುಳದ ಉಲ್ಲೇಖ!

ಪಿಂಕಿ ಈಸ್ ಕಿಲ್ಲಿಂಗ್ ಮೀ, ಶೀ ವಾಂಟ್ ಮೈ ಡೆತ್! ಶವದ ಪೆಟ್ಟಿಗೆ ಮೇಲೂ ಪತ್ನಿ ಕಿರುಕುಳದ ಉಲ್ಲೇಖ!

Published : Jan 29, 2025, 08:46 PM IST

ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಪೀಟರ್, ಪತ್ನಿಯ ನಿರಂತರ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚರ್ಚ್‌ಗೆ ಹೋದ ಸಮಯದಲ್ಲಿ ಮನೆಯಲ್ಲಿದ್ದ ಪೀಟರ್, ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ. ಡೆತ್‌ನೋಟ್‌ನಲ್ಲಿ ಪತ್ನಿಯ ಕಿರುಕುಳದ ಕಹಾನಿ ಬರೆದಿಟ್ಟಿದ್ದಾನೆ.

ಅದು ಕ್ರಿಶ್ಚಿಯನ್​​ ಫ್ಯಾಮಿಲಿ. ಅಪ್ಪ ಅಮ್ಮ. ಮಗ ಸೊಸೆ. ಎಲ್ಲರೂ ಖುಷಿಖುಷಿಯಾಗಿದ್ರು. ಮಗ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ರೆ. ಸೊಸೆ ಟೀಚರ್​​. ದುಡಿದಿದ್ದರಲ್ಲಿ ನೆಮ್ಮದಿಯಾಗಿದ್ರು. ಆದ್ರೆ ಆವತ್ತೊಂದು ದಿನ ಎಲ್ಲರೂ ಚರ್ಚ್​ಗೆ ಹೋಗಿದ್ದಾಗ. ಮನೆಯಲ್ಲಿ ಮಗನೊಬ್ಬನೇ ಇದ್ದ. ಆದ್ರೆ ಚರ್ಚ್​ನಿಂದ ವಾಪಸ್​ ಬಂದು ನೋಡಿದ್ರೆ ಮಗ ನೇಣಿಗೆ ಶರಣಾಗಿದ್ದ. ಒಂದು ಡೆತ್​ನೋಟ್​ ಬರೆದಿಟ್ಟು ಆತ ಪರಲೋಕ ಸೇರಿದ್ದ. ಅದ್ರೆ ಆ ಡೆತ್​ ನೋಟ್​ ನೋಡಿದಾಗಲೇ ನೋಡಿ ಅಲ್ಲಿಗೆ ಬರೋದು ಸೊಸೆಯ ಟಾರ್ಚರ್​ ಕಹನಿ. ಹೆಂಡತಿಯ ಕಾಟಕ್ಕೆ ಗಂಡ ಅಲ್ಲಿ ಪ್ರಾಣಬಿಟ್ಟಿದ್ದ. ಹೀಗೆ ಹೆಂಡತಿಯ ಕಾಟದಿಂದ ಪ್ರಾಣಬಿಟ್ಟ ಮತ್ತೊಬ್ಬ ಗಂಡಸಿನ ಕಥೆಯೇ ಇವತ್ತಿನ ಎಫ್​.ಐ.ಆರ್​​. 

 ಎಲ್ಲರೂ ಪ್ರಾರ್ಥನೆಗಾಗಿ ಚರ್ಚ್​ಗೆ ಹೋಗಿದ್ರೆ ಪೀಟರ್​​. ಸಾವಿನ ಮನೆಗೆ ಎಂಟ್ರಿ ಕೊಟ್ಟಿದ್ದ. ಆದ್ರೆ ಆತ ಸಾಯೋದಕ್ಕೂ ಮೊದಲು ಒಂದು ಡೆತ್​ನೋಟ್​​ ಬರೆದಿಟ್ಟಿದ್ದ. ಅಷ್ಟೇ ಅಲ್ಲ ತನ್ನ ಕೊನೆಯ ಆಸೆಯನ್ನೂ ಹೇಳಿದ್ದ. ಹಾಗಾದ್ರೆ ಆ ಡೆತ್​ನೋಟ್​ನಲ್ಲಿ ಏನಿತ್ತು.. ಏನು ಆ ಗಂಡ ಹೆಂಡತಿ ಜಗಳ? ಹೇಳ್ತೀನಿ ಚಿಕ್ಕ ಬ್ರೇಕ್​ ಆದ್ಮೇಲೆ. 

ಅವರಿಬ್ಬರು ಮದುವೆಯಾಗಿ 2 ವರ್ಷವಾಗಿದೆ ಅಷ್ಟೇ. ಆದ್ರೆ ಜೊತೆಗಿದ್ದಿದ್ದು ಒಂದು ವರ್ಷ ಮಾತ್ರ. ಟೀಚರ್​ ಕೆಲಸ ಮಾಡ್ತಿದ್ದ ಹೆಂಡತಿ ಬೆಳಗ್ಗೆ 8 ಗಂಟೆಗೆ ಮನೆ ಬಿಟ್ರೆ ವಾಪಸ್​​ ಬರ್ತಿದ್ದಿದ್ದು ತಡರಾತ್ರಿ. ಯಾಕಮ್ಮ ಲೇಟು ಅಂತ ಪೀಟರ್​​ ಹೆತ್ತವರು ಕೇಳಿದ್ರೆ ಯಾಕೆ ಟಾರ್ಚರ್​​ ಕೊಡ್ತೀರಾ. ಇದು ನನ್ನ ಪರ್ಸನಲ್​ ಅಂತ ಆವಾಜ್​ ಹಾಕುತ್ತಿದ್ದಳು. ಅಷ್ಟೇ ಅಲ್ಲ ಕೇಸ್​​ ಹಾಕಿಬಿಡ್ತೀನಿ ಅನ್ನೋ ಬೆದರಿಕೆ. ಇಷ್ಟಲ್ಲದೇ ಒಂದು ದಿನ ಎಲ್ಲರೂ ಹೊರಗೆ ಹೋಗಿದ್ದಾಗ ಈ ಹೆಂಡತಿ ಮತ್ತೊಬ್ಬನ ಜೊತೆ ಏಕಾಂತದಲ್ಲಿದ್ದಳು. ಆಗ ಈಕೆ ರೆಡ್​ ಹ್ಯಾಂಡಾಗೇ ತಗ್ಲಾಕಿಕೊಂಡಿದ್ಲು. ಯಾವಾಗ ತನ್ನ ವಿಚಾರ ಗೊತ್ತಾಯ್ತೋ ಆಕೆ ಸೀದಾ ತವರು ಮನೆಗೆ ಹೋಗಿ ಗಂಡನಿಗೆ ಡಿವೋರ್ಸ್​ ನೋಟೀಸ್​​ ಕಳಿಸಿದ್ಲು. ಅಷ್ಟೇ ಅಲ್ಲ ಗಂಡನಿಗೇ 20 ಲಕ್ಷಕ್ಕೆ ಬೇಡಿಕೆ ಇಟ್ಟಳು. ಆಮೇಲೆ ನಡೆದಿದ್ದೆಲ್ಲಾ ಕೇವಲ ಟಾರ್ಚರ್​​ ಅಷ್ಟೇ. 

 ಪೀಟರ್ ಬಲಿಯಾಗೋದಕ್ಕೆ  ಪಿಂಕಿ​ ಕಾರಣಳಾದಳು. ಆದ್ರೆ ಇಲ್ಲೂಸ್ ವಿವಾಹಿತ ಮಹಿಳೆಯರ ಮೇಲಿನ ದೌರ್ಜನ್ಯವನ್ನ ತಡೆಯಲು ಮಾಡಿದ್ದ ಕಾನೂನಗಳ ದುರ್ಬಳಕೆಯಾಗಿದ್ಯಾ ? ಪಿಂಕಿ ಅವನಿಗೆ ಹೇಗೆಲ್ಲಾ ಟಾರ್ಚರ್​​​ ಕೊಟ್ಟಿದ್ಲು ಅನ್ನೋದು ತನಿಖೆಯಿಂದ ಗೊತ್ತಾಗಬೇಕಿದೆ .

23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
Read more