ಪಿಂಕಿ ಈಸ್ ಕಿಲ್ಲಿಂಗ್ ಮೀ, ಶೀ ವಾಂಟ್ ಮೈ ಡೆತ್! ಶವದ ಪೆಟ್ಟಿಗೆ ಮೇಲೂ ಪತ್ನಿ ಕಿರುಕುಳದ ಉಲ್ಲೇಖ!

ಪಿಂಕಿ ಈಸ್ ಕಿಲ್ಲಿಂಗ್ ಮೀ, ಶೀ ವಾಂಟ್ ಮೈ ಡೆತ್! ಶವದ ಪೆಟ್ಟಿಗೆ ಮೇಲೂ ಪತ್ನಿ ಕಿರುಕುಳದ ಉಲ್ಲೇಖ!

Published : Jan 29, 2025, 08:46 PM IST

ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಪೀಟರ್, ಪತ್ನಿಯ ನಿರಂತರ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚರ್ಚ್‌ಗೆ ಹೋದ ಸಮಯದಲ್ಲಿ ಮನೆಯಲ್ಲಿದ್ದ ಪೀಟರ್, ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ. ಡೆತ್‌ನೋಟ್‌ನಲ್ಲಿ ಪತ್ನಿಯ ಕಿರುಕುಳದ ಕಹಾನಿ ಬರೆದಿಟ್ಟಿದ್ದಾನೆ.

ಅದು ಕ್ರಿಶ್ಚಿಯನ್​​ ಫ್ಯಾಮಿಲಿ. ಅಪ್ಪ ಅಮ್ಮ. ಮಗ ಸೊಸೆ. ಎಲ್ಲರೂ ಖುಷಿಖುಷಿಯಾಗಿದ್ರು. ಮಗ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ರೆ. ಸೊಸೆ ಟೀಚರ್​​. ದುಡಿದಿದ್ದರಲ್ಲಿ ನೆಮ್ಮದಿಯಾಗಿದ್ರು. ಆದ್ರೆ ಆವತ್ತೊಂದು ದಿನ ಎಲ್ಲರೂ ಚರ್ಚ್​ಗೆ ಹೋಗಿದ್ದಾಗ. ಮನೆಯಲ್ಲಿ ಮಗನೊಬ್ಬನೇ ಇದ್ದ. ಆದ್ರೆ ಚರ್ಚ್​ನಿಂದ ವಾಪಸ್​ ಬಂದು ನೋಡಿದ್ರೆ ಮಗ ನೇಣಿಗೆ ಶರಣಾಗಿದ್ದ. ಒಂದು ಡೆತ್​ನೋಟ್​ ಬರೆದಿಟ್ಟು ಆತ ಪರಲೋಕ ಸೇರಿದ್ದ. ಅದ್ರೆ ಆ ಡೆತ್​ ನೋಟ್​ ನೋಡಿದಾಗಲೇ ನೋಡಿ ಅಲ್ಲಿಗೆ ಬರೋದು ಸೊಸೆಯ ಟಾರ್ಚರ್​ ಕಹನಿ. ಹೆಂಡತಿಯ ಕಾಟಕ್ಕೆ ಗಂಡ ಅಲ್ಲಿ ಪ್ರಾಣಬಿಟ್ಟಿದ್ದ. ಹೀಗೆ ಹೆಂಡತಿಯ ಕಾಟದಿಂದ ಪ್ರಾಣಬಿಟ್ಟ ಮತ್ತೊಬ್ಬ ಗಂಡಸಿನ ಕಥೆಯೇ ಇವತ್ತಿನ ಎಫ್​.ಐ.ಆರ್​​. 

 ಎಲ್ಲರೂ ಪ್ರಾರ್ಥನೆಗಾಗಿ ಚರ್ಚ್​ಗೆ ಹೋಗಿದ್ರೆ ಪೀಟರ್​​. ಸಾವಿನ ಮನೆಗೆ ಎಂಟ್ರಿ ಕೊಟ್ಟಿದ್ದ. ಆದ್ರೆ ಆತ ಸಾಯೋದಕ್ಕೂ ಮೊದಲು ಒಂದು ಡೆತ್​ನೋಟ್​​ ಬರೆದಿಟ್ಟಿದ್ದ. ಅಷ್ಟೇ ಅಲ್ಲ ತನ್ನ ಕೊನೆಯ ಆಸೆಯನ್ನೂ ಹೇಳಿದ್ದ. ಹಾಗಾದ್ರೆ ಆ ಡೆತ್​ನೋಟ್​ನಲ್ಲಿ ಏನಿತ್ತು.. ಏನು ಆ ಗಂಡ ಹೆಂಡತಿ ಜಗಳ? ಹೇಳ್ತೀನಿ ಚಿಕ್ಕ ಬ್ರೇಕ್​ ಆದ್ಮೇಲೆ. 

ಅವರಿಬ್ಬರು ಮದುವೆಯಾಗಿ 2 ವರ್ಷವಾಗಿದೆ ಅಷ್ಟೇ. ಆದ್ರೆ ಜೊತೆಗಿದ್ದಿದ್ದು ಒಂದು ವರ್ಷ ಮಾತ್ರ. ಟೀಚರ್​ ಕೆಲಸ ಮಾಡ್ತಿದ್ದ ಹೆಂಡತಿ ಬೆಳಗ್ಗೆ 8 ಗಂಟೆಗೆ ಮನೆ ಬಿಟ್ರೆ ವಾಪಸ್​​ ಬರ್ತಿದ್ದಿದ್ದು ತಡರಾತ್ರಿ. ಯಾಕಮ್ಮ ಲೇಟು ಅಂತ ಪೀಟರ್​​ ಹೆತ್ತವರು ಕೇಳಿದ್ರೆ ಯಾಕೆ ಟಾರ್ಚರ್​​ ಕೊಡ್ತೀರಾ. ಇದು ನನ್ನ ಪರ್ಸನಲ್​ ಅಂತ ಆವಾಜ್​ ಹಾಕುತ್ತಿದ್ದಳು. ಅಷ್ಟೇ ಅಲ್ಲ ಕೇಸ್​​ ಹಾಕಿಬಿಡ್ತೀನಿ ಅನ್ನೋ ಬೆದರಿಕೆ. ಇಷ್ಟಲ್ಲದೇ ಒಂದು ದಿನ ಎಲ್ಲರೂ ಹೊರಗೆ ಹೋಗಿದ್ದಾಗ ಈ ಹೆಂಡತಿ ಮತ್ತೊಬ್ಬನ ಜೊತೆ ಏಕಾಂತದಲ್ಲಿದ್ದಳು. ಆಗ ಈಕೆ ರೆಡ್​ ಹ್ಯಾಂಡಾಗೇ ತಗ್ಲಾಕಿಕೊಂಡಿದ್ಲು. ಯಾವಾಗ ತನ್ನ ವಿಚಾರ ಗೊತ್ತಾಯ್ತೋ ಆಕೆ ಸೀದಾ ತವರು ಮನೆಗೆ ಹೋಗಿ ಗಂಡನಿಗೆ ಡಿವೋರ್ಸ್​ ನೋಟೀಸ್​​ ಕಳಿಸಿದ್ಲು. ಅಷ್ಟೇ ಅಲ್ಲ ಗಂಡನಿಗೇ 20 ಲಕ್ಷಕ್ಕೆ ಬೇಡಿಕೆ ಇಟ್ಟಳು. ಆಮೇಲೆ ನಡೆದಿದ್ದೆಲ್ಲಾ ಕೇವಲ ಟಾರ್ಚರ್​​ ಅಷ್ಟೇ. 

 ಪೀಟರ್ ಬಲಿಯಾಗೋದಕ್ಕೆ  ಪಿಂಕಿ​ ಕಾರಣಳಾದಳು. ಆದ್ರೆ ಇಲ್ಲೂಸ್ ವಿವಾಹಿತ ಮಹಿಳೆಯರ ಮೇಲಿನ ದೌರ್ಜನ್ಯವನ್ನ ತಡೆಯಲು ಮಾಡಿದ್ದ ಕಾನೂನಗಳ ದುರ್ಬಳಕೆಯಾಗಿದ್ಯಾ ? ಪಿಂಕಿ ಅವನಿಗೆ ಹೇಗೆಲ್ಲಾ ಟಾರ್ಚರ್​​​ ಕೊಟ್ಟಿದ್ಲು ಅನ್ನೋದು ತನಿಖೆಯಿಂದ ಗೊತ್ತಾಗಬೇಕಿದೆ .

27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
Read more