ಪಿಂಕಿ ಈಸ್ ಕಿಲ್ಲಿಂಗ್ ಮೀ, ಶೀ ವಾಂಟ್ ಮೈ ಡೆತ್! ಶವದ ಪೆಟ್ಟಿಗೆ ಮೇಲೂ ಪತ್ನಿ ಕಿರುಕುಳದ ಉಲ್ಲೇಖ!

ಪಿಂಕಿ ಈಸ್ ಕಿಲ್ಲಿಂಗ್ ಮೀ, ಶೀ ವಾಂಟ್ ಮೈ ಡೆತ್! ಶವದ ಪೆಟ್ಟಿಗೆ ಮೇಲೂ ಪತ್ನಿ ಕಿರುಕುಳದ ಉಲ್ಲೇಖ!

Published : Jan 29, 2025, 08:46 PM IST

ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಪೀಟರ್, ಪತ್ನಿಯ ನಿರಂತರ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚರ್ಚ್‌ಗೆ ಹೋದ ಸಮಯದಲ್ಲಿ ಮನೆಯಲ್ಲಿದ್ದ ಪೀಟರ್, ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ. ಡೆತ್‌ನೋಟ್‌ನಲ್ಲಿ ಪತ್ನಿಯ ಕಿರುಕುಳದ ಕಹಾನಿ ಬರೆದಿಟ್ಟಿದ್ದಾನೆ.

ಅದು ಕ್ರಿಶ್ಚಿಯನ್​​ ಫ್ಯಾಮಿಲಿ. ಅಪ್ಪ ಅಮ್ಮ. ಮಗ ಸೊಸೆ. ಎಲ್ಲರೂ ಖುಷಿಖುಷಿಯಾಗಿದ್ರು. ಮಗ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ರೆ. ಸೊಸೆ ಟೀಚರ್​​. ದುಡಿದಿದ್ದರಲ್ಲಿ ನೆಮ್ಮದಿಯಾಗಿದ್ರು. ಆದ್ರೆ ಆವತ್ತೊಂದು ದಿನ ಎಲ್ಲರೂ ಚರ್ಚ್​ಗೆ ಹೋಗಿದ್ದಾಗ. ಮನೆಯಲ್ಲಿ ಮಗನೊಬ್ಬನೇ ಇದ್ದ. ಆದ್ರೆ ಚರ್ಚ್​ನಿಂದ ವಾಪಸ್​ ಬಂದು ನೋಡಿದ್ರೆ ಮಗ ನೇಣಿಗೆ ಶರಣಾಗಿದ್ದ. ಒಂದು ಡೆತ್​ನೋಟ್​ ಬರೆದಿಟ್ಟು ಆತ ಪರಲೋಕ ಸೇರಿದ್ದ. ಅದ್ರೆ ಆ ಡೆತ್​ ನೋಟ್​ ನೋಡಿದಾಗಲೇ ನೋಡಿ ಅಲ್ಲಿಗೆ ಬರೋದು ಸೊಸೆಯ ಟಾರ್ಚರ್​ ಕಹನಿ. ಹೆಂಡತಿಯ ಕಾಟಕ್ಕೆ ಗಂಡ ಅಲ್ಲಿ ಪ್ರಾಣಬಿಟ್ಟಿದ್ದ. ಹೀಗೆ ಹೆಂಡತಿಯ ಕಾಟದಿಂದ ಪ್ರಾಣಬಿಟ್ಟ ಮತ್ತೊಬ್ಬ ಗಂಡಸಿನ ಕಥೆಯೇ ಇವತ್ತಿನ ಎಫ್​.ಐ.ಆರ್​​. 

 ಎಲ್ಲರೂ ಪ್ರಾರ್ಥನೆಗಾಗಿ ಚರ್ಚ್​ಗೆ ಹೋಗಿದ್ರೆ ಪೀಟರ್​​. ಸಾವಿನ ಮನೆಗೆ ಎಂಟ್ರಿ ಕೊಟ್ಟಿದ್ದ. ಆದ್ರೆ ಆತ ಸಾಯೋದಕ್ಕೂ ಮೊದಲು ಒಂದು ಡೆತ್​ನೋಟ್​​ ಬರೆದಿಟ್ಟಿದ್ದ. ಅಷ್ಟೇ ಅಲ್ಲ ತನ್ನ ಕೊನೆಯ ಆಸೆಯನ್ನೂ ಹೇಳಿದ್ದ. ಹಾಗಾದ್ರೆ ಆ ಡೆತ್​ನೋಟ್​ನಲ್ಲಿ ಏನಿತ್ತು.. ಏನು ಆ ಗಂಡ ಹೆಂಡತಿ ಜಗಳ? ಹೇಳ್ತೀನಿ ಚಿಕ್ಕ ಬ್ರೇಕ್​ ಆದ್ಮೇಲೆ. 

ಅವರಿಬ್ಬರು ಮದುವೆಯಾಗಿ 2 ವರ್ಷವಾಗಿದೆ ಅಷ್ಟೇ. ಆದ್ರೆ ಜೊತೆಗಿದ್ದಿದ್ದು ಒಂದು ವರ್ಷ ಮಾತ್ರ. ಟೀಚರ್​ ಕೆಲಸ ಮಾಡ್ತಿದ್ದ ಹೆಂಡತಿ ಬೆಳಗ್ಗೆ 8 ಗಂಟೆಗೆ ಮನೆ ಬಿಟ್ರೆ ವಾಪಸ್​​ ಬರ್ತಿದ್ದಿದ್ದು ತಡರಾತ್ರಿ. ಯಾಕಮ್ಮ ಲೇಟು ಅಂತ ಪೀಟರ್​​ ಹೆತ್ತವರು ಕೇಳಿದ್ರೆ ಯಾಕೆ ಟಾರ್ಚರ್​​ ಕೊಡ್ತೀರಾ. ಇದು ನನ್ನ ಪರ್ಸನಲ್​ ಅಂತ ಆವಾಜ್​ ಹಾಕುತ್ತಿದ್ದಳು. ಅಷ್ಟೇ ಅಲ್ಲ ಕೇಸ್​​ ಹಾಕಿಬಿಡ್ತೀನಿ ಅನ್ನೋ ಬೆದರಿಕೆ. ಇಷ್ಟಲ್ಲದೇ ಒಂದು ದಿನ ಎಲ್ಲರೂ ಹೊರಗೆ ಹೋಗಿದ್ದಾಗ ಈ ಹೆಂಡತಿ ಮತ್ತೊಬ್ಬನ ಜೊತೆ ಏಕಾಂತದಲ್ಲಿದ್ದಳು. ಆಗ ಈಕೆ ರೆಡ್​ ಹ್ಯಾಂಡಾಗೇ ತಗ್ಲಾಕಿಕೊಂಡಿದ್ಲು. ಯಾವಾಗ ತನ್ನ ವಿಚಾರ ಗೊತ್ತಾಯ್ತೋ ಆಕೆ ಸೀದಾ ತವರು ಮನೆಗೆ ಹೋಗಿ ಗಂಡನಿಗೆ ಡಿವೋರ್ಸ್​ ನೋಟೀಸ್​​ ಕಳಿಸಿದ್ಲು. ಅಷ್ಟೇ ಅಲ್ಲ ಗಂಡನಿಗೇ 20 ಲಕ್ಷಕ್ಕೆ ಬೇಡಿಕೆ ಇಟ್ಟಳು. ಆಮೇಲೆ ನಡೆದಿದ್ದೆಲ್ಲಾ ಕೇವಲ ಟಾರ್ಚರ್​​ ಅಷ್ಟೇ. 

 ಪೀಟರ್ ಬಲಿಯಾಗೋದಕ್ಕೆ  ಪಿಂಕಿ​ ಕಾರಣಳಾದಳು. ಆದ್ರೆ ಇಲ್ಲೂಸ್ ವಿವಾಹಿತ ಮಹಿಳೆಯರ ಮೇಲಿನ ದೌರ್ಜನ್ಯವನ್ನ ತಡೆಯಲು ಮಾಡಿದ್ದ ಕಾನೂನಗಳ ದುರ್ಬಳಕೆಯಾಗಿದ್ಯಾ ? ಪಿಂಕಿ ಅವನಿಗೆ ಹೇಗೆಲ್ಲಾ ಟಾರ್ಚರ್​​​ ಕೊಟ್ಟಿದ್ಲು ಅನ್ನೋದು ತನಿಖೆಯಿಂದ ಗೊತ್ತಾಗಬೇಕಿದೆ .

20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
Read more