Hassan Mixi Blast: ನಿನ್ನೆ ಪತ್ನಿಗೆ ಅವಳಿ ಜವಳಿ ಮಕ್ಕಳಾಗಿದ್ದರೂ ಮುಖ ನೋಡಲಾಗಿಲ್ಲ: ಗಾಯಾಳು ಶಶಿ ಅಳಲು

Hassan Mixi Blast: ನಿನ್ನೆ ಪತ್ನಿಗೆ ಅವಳಿ ಜವಳಿ ಮಕ್ಕಳಾಗಿದ್ದರೂ ಮುಖ ನೋಡಲಾಗಿಲ್ಲ: ಗಾಯಾಳು ಶಶಿ ಅಳಲು

Published : Dec 28, 2022, 06:06 PM ISTUpdated : Dec 28, 2022, 06:07 PM IST

ಮಿಕ್ಸಿ ಸ್ಪೋಟ ಪ್ರಕರಣದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಆದರೆ, ನನ್ನ ಪತ್ನಿಗೆ ನಿನ್ನೆ ಬೇರೊಂದು ಆಸ್ಪತ್ರೆಯಲ್ಲಿ ಹೆರಿಗೆ ಆಗಿದ್ದು, ಅವಳಿ ಜವಳಿ ಮಕ್ಕಳು ಜನಿಸಿವೆ. ನಾನು ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಹೆಂಡತಿ ಮತ್ತು ಮಕ್ಕಳ ಮುಖ ನೋಡಲಾಗಿಲ್ಲ ಎಂದು ಗಾಯಾಳು ಶಶಿ ಅಳಲು ತೋಡಿಕೊಂಡಿದ್ದಾನೆ.

ಹಾಸನ (ಡಿ.28): ಕಳೆದ ಮೂರು ದಿನಗಳ ಹಿಂದೆ ಹಾಸನದಲ್ಲಿ ನಡೆದಿದ್ದ ಮಿಕ್ಸಿ ಸ್ಪೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಕೋರಿಯರ್‌ ಮಳಿಗೆ ಮಾಲೀಕ ಶಶಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತನ ಕೈಗೆ ದೊಡ್ಡ ತೀವ್ರ ಗಾಯವಾಗಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುವುದು ಅಗತ್ಯವಾಗಿದೆ. ಆದರೆ, ತನ್ನ ಪತ್ನಿಗೆ ನಿನ್ನೆ ಹೆರಿಗೆ ಆಗಿದ್ದು, ಅವಳಿ ಜವಳಿ ಮಕ್ಕಳು ಜನಿಸಿವೆ. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಹೆಂಡತಿ ಮತ್ತು ಮಕ್ಕಳ ಮುಖ ನೋಡಲಾಗಿಲ್ಲ ಎಂದು ಶಶಿ ಅಳಲು ತೋಡಿಕೊಂಡಿದ್ದಾನೆ.

ಹಾಸನ ನಗರದಲ್ಲಿ ಕೋರಿಯರ್‌ ಅಂಗಡಿಯೊಂದರಲ್ಲಿ ಡಿಸೆಂಬರ್ 26 ರಂದು ಮಿಕ್ಸಿ ಬ್ಲಾಸ್ಟ್‌ ಆಗಿತ್ತು. ಈ ಪ್ರಕರಣದ ಬಗ್ಗೆ ಮಾತನಾಡಿದ ಗಾಯಾಳು ಶಶಿ ಘಟನೆ ಬಗ್ಗೆ ಪೂರ್ಣ ವಿವರವನ್ನು ತಿಳಿಸಿದ್ದಾನೆ. ಬೆಂಗಳೂರಿನ ಪೀಣ್ಯದಿಂದ ಫ್ರಮ್ ಅಡ್ರೆಸ್ ಇಲ್ಲದೆ  ಕೊರಿಯರ್ ಬಂದಿತ್ತು. ಪಾರ್ಸೆಲ್ ಓಪನ್ ಮಾಡಿ ನಂತರ ನಮಗೆ ರಿಟರ್ನ್ ಮಾಡೋದಿಕ್ಕೆ ತಂದು ಕೊಟ್ಟರು. ಆಗ ಶಾಪ್‌ ಬಾಗಿಲು ಹಾಕಿ ಮನೆಗೆ ಹೋಗಬೇಕೆಂದುಕೊಂಡೆ. ಆಚೆ ಬರುವಾಗ ಟೇಬಲ್ ಮೇಲಿಂದ ಮಿಕ್ಸಿ ಕೆಳಗೆ ಬಿದ್ದು ಬ್ಲಾಸ್ಟ್ ಆಯಿತು ಎಂದು ಹೇಳಿದ್ದಾನೆ.

ಮಕ್ಕಳ ಮುಖ ನೋಡಲಾಗಿಲ್ಲ: ಡಿಸೆಂಬರ್ 17 ರಂದು ಬಂದಿತ್ತು. ಅದನ್ನು ಮಹಿಳೆಯ ಮನೆಗೂ ತಲುಪಿಸಲಾಗಿತ್ತು. ಆದರೆ, ಮಹಿಳೆ ವಸಂತಾ ಫ್ರಮ್‌ ವಿಳಾಸವಿಲ್ಲದ ಬಾಕ್ಸ್ ಅನ್ನು  26 ರ ಸಂಜೆ ರಿಟರ್ನ್ ಮಾಡಿದರು. ಜೊತೆಗೆ ಕೋರಿಯರ್‌ ವಾಪಸ್‌ ಕಳಿಸಲು 300 ರೂಪಾಯಿ ರಿಟರ್ನ್ ಚಾರ್ಚ್ ಕೇಳಿದರೂ ಕೊಡದೇ ಅದನ್ನು ಇಲ್ಲಿ ಬಿಟ್ಟು ಹೋದರು.  ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ನನ್ನ ಜೀವಕ್ಕೆ ಅಪಾಯ ಆಗುತ್ತಿತ್ತು. ಈಗ ನನ್ನ ಜೀವನ ಹಾಳಾಯಿತು. ನನ್ನ ಪತ್ನಿಗೆ ನಿನ್ನೆ ಹೆರಿಗೆ ಆಗಿದೆ, ಅವಳಿ ಜವಳಿ ಮಕ್ಕಳು ಜನಿಸಿವೆ. ಮಕ್ಕಳ ಮುಖ ನೋಡಲಾಗಿಲ್ಲ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಗಾಯಾಳು ಶಶಿ ನೋವು ತೋಡಿಕೊಂಡಿದ್ದಾನೆ.

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more