ಆಂಜನೇಯ ದೇವಸ್ಥಾನವಾಗಿತ್ತಾ ಮಸೀದಿ? ಮಂಡ್ಯದ ಜಾಮಿಯಾ ಮಸೀದಿ ಕಟ್ಟಡ ಹೇಳಿದ ಕಥೆ ಏನು?

ಆಂಜನೇಯ ದೇವಸ್ಥಾನವಾಗಿತ್ತಾ ಮಸೀದಿ? ಮಂಡ್ಯದ ಜಾಮಿಯಾ ಮಸೀದಿ ಕಟ್ಟಡ ಹೇಳಿದ ಕಥೆ ಏನು?

Published : May 25, 2022, 07:57 PM IST

*ಈಗಲೂ ಸರ್ಕಾರಿ ಗೆಜೆಟ್​​​​ನಲ್ಲಿರೋ ಉಲ್ಲೇಖವೇನು..? 
*ಜ್ಞಾನವಾಪಿ ಬೆನ್ನಲ್ಲೇ ಶುರುವಾಯ್ತು ಜಾಮಿಯಾ ಗದ್ದಲ
*ನಮ್ಮ ದೇವಸ್ಥಾನ ನಮ್ಮ ಹಕ್ಕು ಎನ್ನುತ್ತಿರೋ ಸಂಘಟನೆಗಳು

ಮಂಡ್ಯ (ಮೇ 25): ದೇಶದಲ್ಲಿರುವ ಎಲ್ಲ ಮಸೀದಿಗಳು (Masjid) ಒಂದೊಂದು ರಹಸ್ಯವನ್ನು ತುಳಿದಿಟ್ಟುಕೊಂಡಿದ್ದಾವಾ ಅನ್ನೋ ಅನುಮಾನ ಇತ್ತೀಚಿನ ವಿವಾದದಿಂದ ಬರುತ್ತಿದೆ. ದೇಶದಲ್ಲಿರುವ ಅನೇಕ ಮಸೀದಿಗಳ ಕಟ್ಟಡಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ನಿಜಾ ಕೂಡ ಅನಿಸುತ್ತದೆ. ಈಗ ಎದ್ದಿರೋ ವಿವಾದಗಳಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ (Mandya Jamia Masjid) ಕೂಡ ಸೇರಿಕೊಂಡಿದೆ. ಹಾಗಿದ್ರೆ ಏನಿದು ಜಾಮಿಯಾ ಮಸೀದಿ ವಿವಾದ?

ಶ್ರೀರಂಗ ಪಟ್ಟಣದ (Srirangapatna) ಜಾಮಿಯಾ ಮಸೀದಿ ವಿವಾದವನ್ನು ಕೋರ್ಟ್​​ ಅಂಗಳಕ್ಕೆ ತೆಗೆದುಕೊಂಡು ಹೋಗಲು ಎಲ್ಲ ಸಿದ್ಧತೆ ನಡೆದಿದೆಯಂತೆ. ಅದು ಮಸೀದಿನೇ ಅಲ್ಲ. ಈ ಹಿಂದೆ ಅದು ಹನುಮಂತನ ದೇವಸ್ಥಾನವಾಗಿತ್ತು. ಹಿಂದೂಗಳ ಆಂಜನೇಯ ದೇವಸ್ಥಾನವನ್ನು ಅಕ್ರಮವಾಗಿ ನುಗ್ಗಿ ಮಸೀದಿ ಮಾಡಲಾಗಿದೆ ಎಂದು ಮುತಾಲಿಕ್ (Pramod Muthalik)​​​ ಹೇಳ್ತಾರೆ. ಈ ವಿವಾದ ಮತ್ತು ಆರೋಪ ತುಂಬಾ ವರ್ಷಗಳಿಂದಲೂ ಇದೆ.

ಇದನ್ನೂ ನೋಡಿ: ಜ್ಞಾನವಾಪಿ ಮಸೀದಿ ಒಳಗೇನಿದೆ: ರಿಪೋರ್ಟ್ ಹೇಳಿದ 12 ಸತ್ಯಗಳು!

ಆದರೆ ಈ ಹಿಂದೆ ಯಾರೋ ಒಬ್ಬರು, ಜಾಮಿಯಾ ಮಸೀದಿ ಬಗ್ಗೆ, ಇದು ಮಸೀದಿ ಅಲ್ಲ ದೇವಸ್ಥಾನ ಅಂತ ಒಂದು ಕೂಗು ಹಾಕಿ ಸುಮ್ಮನಾಗುತ್ತಿದ್ದರು. ಕೂಗು ಹಾಕಿದ ಸಂದರ್ಭದಲ್ಲಿ ಒಂದಿಷ್ಟು ಸುದ್ದಿಯಾಗಿ ನಂತರ ಮತ್ತೆ ಯಥಾಸ್ಥಿತಿಯಲ್ಲಿ ಇಲ್ಲಿ ನಡೆಯಬೇಕಾದರ ಕಾರ್ಯಗಳು ನಡೆಯುತ್ತಲೇ ಇದ್ದವು. 

ಆದ್ರೆ ಈ ಬಾರಿ ಇಲ್ಲಿರೋದು ಮಸೀದಿಯಲ್ಲ, ಅದು ಆಂಜನೇಯ ದೇವಸ್ಥಾನ ಎಂದು ಕೂಗುವ ಧ್ವನಿಗಳು ಹೆಚ್ಚಾಗಿವೆ. ಕೇವಲ ಕೂಗು ಮಾತ್ರವಲ್ಲ, ಅಲ್ಲಿ ಪೂಜೆಗೆ ಅವಕಾಶಕ್ಕಾಗಿ ಕೋರ್ಟ್​ ಮೆಟ್ಟಿಲೇರುವ ಎಲ್ಲ ಸಿದ್ಧತೆಗೆಳು ನಡೆದಿವೆ ಎಂದು ಹೇಳಲಾಗುತ್ತಿದೆ. ಈ ಕುರಿತ ಕಂಪ್ಲೀಟ್‌ ವರದಿ ಇಲ್ಲಿದೆ 

23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
24:50ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ
23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more