ಕನ್ನಡದ ಮನೆಮನೆಗಳಲ್ಲೂ ನಗು ಉಕ್ಕಿಸಿದ್ದ ವರಲಕ್ಷ್ಮಿ! ಎಲ್ಲೆಲ್ಲೂ ಮಾರ್ದನಿಸುತ್ತಲೇ ಇರಲಿದೆ ಅಪರ್ಣಾ ಕಲರವ!

ಕನ್ನಡದ ಮನೆಮನೆಗಳಲ್ಲೂ ನಗು ಉಕ್ಕಿಸಿದ್ದ ವರಲಕ್ಷ್ಮಿ! ಎಲ್ಲೆಲ್ಲೂ ಮಾರ್ದನಿಸುತ್ತಲೇ ಇರಲಿದೆ ಅಪರ್ಣಾ ಕಲರವ!

Published : Jul 13, 2024, 05:01 PM IST

ಮಸಣದ ಹೂವಿಂದ ಮಜಾ ಟಾಕೀಸ್ ತನಕ..ಅಪರ್ಣಾ ಯಾನ!
ಕನ್ನಡದ ಮನೆಮಗಳು ಬೆಳೆದು ಬಂದ ಹಾದಿ ಹೇಗಿತ್ತು ಗೊತ್ತಾ..? 
ಕರುನಾಡಿನ ಹೆಮ್ಮೆಯ ಹೆಣ್ಣಿನ ಅಂತಿಮ ದಿನಗಳು ಹೇಗಿದ್ದವು..? 

ಅಪ್ಪಟ ಕನ್ನಡತಿಗೆ ಅಂತಿಮ ವಿದಾಯ ಹೇಳೋ ದುರಾದೃಷ್ಟ ನಮ್ಮ ಪಾಲಿಗೆ ಬಂದಿದೆ. ನಿರೂಪಕಿಯಾಗಿ ಮನೆಮಾತಾಗಿದ್ದ ಅಪರ್ಣಾ(Aparna) ಅವರ ಅನನ್ಯ ಸಾಧನೆ, ಒಂದೆರಡಲ್ಲ. ಮಸಣದ ಹೂವಿಂದ ಮಜಾ ಟಾಕೀಸ್ (Majaa Talkies) ತನಕ. ಅಪರ್ಣಾ ಅವರಿಲ್ಲದೆ ಕನ್ನಡ ಕಾರ್ಯಕ್ರಮಗಳು ಅಪೂರ್ಣ ಅನ್ನೋ ಮಾತು ಒಂದು ಕಾಲದಲ್ಲಿತ್ತು. ಆದ್ರೆ, ಈಗ ಕರುನಾಡು ಅಂಥಾ ಮಾತುಗಾರ್ತಿಯನ್ನ ಕಳ್ಕೊಂಡಿದೆ. ನಿಜಕ್ಕೂ ಇದು ಕನ್ನಡಿಗರ ಪಾಲಿಗೆ ದೊಡ್ಡ ನಷ್ಟವೇ. ಮಹಾಮಾರಿ ಕ್ಯಾನ್ಸರ್‌ಗೆ ಅಚ್ಚ ಕನ್ನಡದ ನಿರೂಪಕಿ ಅಪರ್ಣ ಬಲಿಯಾಗಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಶ್ವಾಸಕೋಶ ಕ್ಯಾನ್ಸರ್‌ನಿಂದ(Lung Cancer) ಬಳಲ್ತಾ ಇದ್ರು ಅಪರ್ಣ. ಕಡೆಗೆ, ಆ ಹೋರಾಟ ಮಾಡುತ್ತಾ ಮಾಡುತ್ತಲೇ, ಇಹಲೋಕ ತ್ಯಜಿಸಿದ್ದಾರೆ. ಅಪರ್ಣಾ ರಾಜ್ಯದ ಜನಕ್ಕೆ ಪರಿಚಯವಾಗಿದ್ದೇನೋ ಸಿನಿಮಾ ಮೂಲಕ. ಆದ್ರೆ ಅವರನ್ನ ಜನರ ಹತ್ತಿರಕ್ಕೆ ಕರೆದುಕೊಂಡು ಬಂದಿದ್ದು ಮಾತ್ರ, ಕಿರುತೆರೆ. ತಮ್ಮ ಮಾತಿನ ಮೂಲಕ, ಮಾತಿನ ಶೈಲಿಯ ಮೂಲಕ, ಹುಳುಕಿಲ್ಲ ಸುಲಲಿತ, ಸುಮಧುರ, ಅಸ್ಖಲಿತ ಕನ್ನಡದ ಮೂಲಕ, ಮನೆಮಾತಾದ್ರು ಅಪರ್ಣಾ. ಅಪರ್ಣಾ ವೇದಿಕೆ ಮೇಲೆ ಹತ್ತಿ ಮೈಕ್ ಮುಂದೆ ನಿಂತು ಮಾತಾಡ್ತಾ ಇದಾರೆ ಅಂದ್ರೆ, ಎಂಥಾ ಕಾರ್ಯಕ್ರಮಕ್ಕೂ ಸಾಂಸ್ಕೃತಿಕ ಮೆರುಗು ತಾನೇ ತಾನಾಗಿ ಬಂದುಬಿಡುತ್ತಿತ್ತು.

ಇದನ್ನೂ ವೀಕ್ಷಿಸಿ:  Chaddi gang : ಮಳೆಗಾಲ ಬರ್ತಿದ್ದಂತೆ ಆ್ಯಕ್ಟೀವ್ ಚಡ್ಡಿ ಗ್ಯಾಂಗ್ ! ರಾಬರಿ ಗ್ಯಾಂಗ್‌ನ ಭರ್ಜರಿ ಬೇಟೆ ಹೇಗಿತ್ತು ಗೊತ್ತಾ?

01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
07:24ಪತ್ನಿಯ ಶೀಲ ಶಂಕಿಸಿ ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಭೀಕರ ಹತ್ಯೆ; 'ಹಾರ್ಟ್ ಅಟ್ಯಾಕ್' ಎಂದಿದ್ದ ಪತಿಯ ಬಣ್ಣ ಬಯಲು!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
Read more