ಡಾನ್ ಪಟ್ಟಕ್ಕಾಗಿ ಕುಚುಕು ಗೆಳೆಯನಿಂದಲೇ ಬಿಜೆಪಿ ಯುವಮೋರ್ಚಾ ಅಧ್ಯಕ್ಷನ ಬರ್ಬರ ಕೊಲೆ!

ಡಾನ್ ಪಟ್ಟಕ್ಕಾಗಿ ಕುಚುಕು ಗೆಳೆಯನಿಂದಲೇ ಬಿಜೆಪಿ ಯುವಮೋರ್ಚಾ ಅಧ್ಯಕ್ಷನ ಬರ್ಬರ ಕೊಲೆ!

Published : Oct 09, 2025, 10:14 PM ISTUpdated : Oct 09, 2025, 10:16 PM IST
ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಅವರನ್ನು ಅವರ ಮಾಜಿ ಸ್ನೇಹಿತ ರವಿಯ ಗ್ಯಾಂಗ್ ಬರ್ಬರವಾಗಿ ಹತ್ಯೆ ಮಾಡಿದೆ. ಎರಡು ವರ್ಷಗಳ ಹಿಂದಿನ ಹಲ್ಲೆ ಪ್ರಕರಣದ ಸೇಡು ಮತ್ತು ಇಸ್ಪೀಟ್ ಅಡ್ಡೆಯ ಹಣದ ವಿಚಾರದಲ್ಲಿನ ದ್ವೇಷವೇ ಈ ಕೊಲೆಗೆ ಪ್ರಮುಖ ಕಾರಣವಾಗಿದೆ.

ಕೊಪ್ಪಳ (ಅ.09): ಒಂದು ಕಾಲದ ಅತ್ಯಾಪ್ತ ಸ್ನೇಹಿತರು, ಒಂದೇ ತಂಡದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ನಡುವಿನ ಫೈಟ್ ಅಂತಿಮವಾಗಿ ಬರ್ಬರ ಕೊಲೆಯಲ್ಲಿ ಅಂತ್ಯ ಕಂಡಿದೆ. ಹಳೆಯ ಸೇಡಿನ ಕಾರಣಕ್ಕಾಗಿ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷನಾಗಿದ್ದ ವೆಂಕಟೇಶ್ ಎಂಬಾತನನ್ನು ಆತನದೇ ತಂಡದಲ್ಲಿದ್ದ ರವಿಯ ನೇತೃತ್ವದ ಗ್ಯಾಂಗ್ ಮಾರಕಾಸ್ತ್ರಗಳಿಂದ ಕೊಲೆಗೈದಿದೆ.

ಮಧ್ಯರಾತ್ರಿ ನಡೆದ ಡೆಡ್ಲಿ ಅಟ್ಯಾಕ್
ಘಟನೆ ಗಂಗಾವತಿ ನಗರದ ಸುತ್ತಮುತ್ತ ನಡೆದಿದ್ದು, ಮೃತರಾದ ವೆಂಕಟೇಶ್ ಅವರು ಮಧ್ಯರಾತ್ರಿ ತಮ್ಮ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ರವಿ ಮತ್ತು ಆತನ ಸಹಚರರ ತಂಡ ಅಟ್ಯಾಕ್ ಮಾಡಿದೆ. ದಾಳಿಯ ತೀವ್ರತೆಗೆ ವೆಂಕಟೇಶ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆ ಕುರಿತು ತನಿಖೆ ಕೈಗೊಂಡ ಪೊಲೀಸರಿಗೆ ಇದು ಕೇವಲ ವೈಯಕ್ತಿಕ ದ್ವೇಷವಲ್ಲ, ಬದಲಿಗೆ ಎರಡು ವರ್ಷಗಳ ಹಳೆಯ ಕೊಲೆ ಯತ್ನ ಪ್ರಕರಣದ ಸೇಡು ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.

ಇಸ್ಪೀಟ್ ಅಡ್ಡೆಗಳಿಂದ ಪ್ರಾರಂಭವಾದ ದ್ವೇಷ
ಕೊಲೆಯಾದ ವೆಂಕಟೇಶ್ ಮತ್ತು ಮುಖ್ಯ ಆರೋಪಿ ರವಿ ಇಬ್ಬರೂ ಹಿಂದೆ ಒಂದೇ ಗ್ಯಾಂಗ್‌ನಲ್ಲಿ ಕೆಲಸ ಮಾಡುತ್ತಿದ್ದರು. ಗ್ಯಾಂಗ್‌ಗೆ ಲೀಡರ್ ಆಗಿದ್ದ ವೆಂಕಟೇಶ್, ಗಂಗಾವತಿ ಸುತ್ತಮುತ್ತ ಇಸ್ಪೀಟ್ ಅಡ್ಡೆಗಳನ್ನು ನಡೆಸಿಕೊಂಡು ದೊಡ್ಡ ಪ್ರಮಾಣದಲ್ಲಿ ಹಣ ಗಳಿಸುತ್ತಿದ್ದ. ಈ ಹಣಗಳಿಕೆ ರವಿ ಮತ್ತು ಉಳಿದ ಸದಸ್ಯರ ಕಣ್ಣು ಕುಕ್ಕಿತ್ತು. 'ವೆಂಕಟೇಶ ಮಾತ್ರ ಲಕ್ಷ ಲಕ್ಷ ಹಣ ತೆಗೆದುಕೊಳ್ಳುತ್ತಾನೆ, ನಮಗೆ ಮಾತ್ರ ಪುಡಿಗಾಸು ಕೊಡುತ್ತಾನೆ' ಎಂಬ ಸಿಟ್ಟು ರವಿ ಮನಸ್ಸಿನಲ್ಲಿತ್ತು. ಇದರಿಂದಾಗಿ ರವಿ ಸೈಲೆಂಟ್ ಆಗಿ ತನ್ನದೇ ಆದ ಪ್ರತ್ಯೇಕ ತಂಡವನ್ನು ಕಟ್ಟಿಕೊಂಡು ತಾನೂ ಇಸ್ಪೀಟ್ ಅಡ್ಡೆಗಳನ್ನು ನಡೆಸಲು ಪ್ರಾರಂಭಿಸಿದ. ಇದೇ ಇಬ್ಬರು ಗೆಳೆಯರ ನಡುವೆ ಬಿರುಕು ಮೂಡಲು ಮತ್ತು ಆಗಾಗ ಗ್ಯಾಂಗ್‌ವಾರ್‌ಗಳು ನಡೆಯಲು ಮುಖ್ಯ ಕಾರಣವಾಯಿತು.

ಸೇಡಿಗೆ ಕಾರಣವಾದ ಹಳೆಯ ಕೇಸು
ಈ ವೈಷಮ್ಯ ತಾರಕಕ್ಕೇರಿದ್ದು ಎರಡು ವರ್ಷಗಳ ಹಿಂದೆ. ಆಗ ರವಿ ತಂಡದವರು ವೆಂಕಟೇಶ್ ತಂಡದಲ್ಲಿದ್ದ ಮಾರುತಿ ಎಂಬುವವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಆ ಸಂದರ್ಭದಲ್ಲಿ ವೆಂಕಟೇಶನೇ ನೇರವಾಗಿ ಪೊಲೀಸರ ಮುಂದೆ ನಿಂತು, ಹಲ್ಲೆ ನಡೆಸಿದ್ದ ರವಿ ತಂಡದ ಎಲ್ಲಾ ಆರೋಪಿಗಳ ಮಾಹಿತಿಯನ್ನು ನೀಡಿದ್ದರು. ಇದರಿಂದ ರವಿ ತಂಡವು ಬಂಧಿಯಾಗಿ ಜೈಲು ಸೇರುವಂತಾಯಿತು. ವೆಂಕಟೇಶನ ಈ ವರ್ತನೆಯಿಂದ ರವಿ ಕೋಪ ಮತ್ತಷ್ಟು ಹೆಚ್ಚಾಯಿತು. ಜೈಲಿನಿಂದ ಹೊರಬಂದ ನಂತರ ವೆಂಕಟೇಶ್‌ನನ್ನು ಹೇಗಾದರೂ ಮುಗಿಸಿಯೇ ತೀರಬೇಕು ಎಂದು ಸ್ಕೆಚ್ ಹಾಕಿದ್ದ ರವಿ, ಅಂತಿಮವಾಗಿ ಮಧ್ಯರಾತ್ರಿ ಹೊಂಚು ಹಾಕಿ ಹಳೆ ಬಾಸ್‌ನ ಪ್ರಾಣ ತೆಗೆದಿದ್ದಾನೆ.

ಪ್ರಸ್ತುತ ಈ ಕೊಲೆ ಪ್ರಕರಣದ ಮುಖ್ಯ ಆರೋಪಿ ರವಿ ತಲೆಮರೆಸಿಕೊಂಡಿದ್ದಾನೆ (ಅಪ್‌ಸ್ಕಾಂಡಿಂಗ್). ಆದಾಗ್ಯೂ, ಪೊಲೀಸರು ರವಿಯನ್ನು ಶೀಘ್ರದಲ್ಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಭರವಸೆ ನೀಡಿದ್ದಾರೆ. ಒಟ್ಟಿಗೆ ಬೆಳೆದ, ಒಂದೇ ತಟ್ಟೆಯಲ್ಲಿ ಅನ್ನ ತಿಂದ ಸ್ನೇಹಿತರೇ ಹಣ ಮತ್ತು ದ್ವೇಷಕ್ಕಾಗಿ ಪರಸ್ಪರ ಕೊಂದಿರುವುದು ಗಂಗಾವತಿ ವಲಯದಲ್ಲಿ ದೊಡ್ಡ ದುರಂತಕ್ಕೆ ಕಾರಣವಾಗಿದೆ.

01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
07:24ಪತ್ನಿಯ ಶೀಲ ಶಂಕಿಸಿ ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಭೀಕರ ಹತ್ಯೆ; 'ಹಾರ್ಟ್ ಅಟ್ಯಾಕ್' ಎಂದಿದ್ದ ಪತಿಯ ಬಣ್ಣ ಬಯಲು!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
Read more