ಕೋಲಾರದ ಹಣ್ಣು ತರಕಾರಿಗಳಿಗೆ ಕುಗ್ಗಿದ ಬೇಡಿಕೆ, ಕೆ.ಸಿ.ವ್ಯಾಲಿ ವರವಲ್ಲ ಶಾಪ ಅಂತಿದ್ದಾರೆ ಕೃಷಿಕರು!

ಕೋಲಾರದ ಹಣ್ಣು ತರಕಾರಿಗಳಿಗೆ ಕುಗ್ಗಿದ ಬೇಡಿಕೆ, ಕೆ.ಸಿ.ವ್ಯಾಲಿ ವರವಲ್ಲ ಶಾಪ ಅಂತಿದ್ದಾರೆ ಕೃಷಿಕರು!

Published : Oct 08, 2021, 04:25 PM ISTUpdated : Oct 08, 2021, 05:35 PM IST

- ಕೋಲಾರ ಜಿಲ್ಲೆಯ ತರಕಾರಿಗಳಲ್ಲಿ ಮಾರಕ ರಾಸಾಯನಿಕ ಅಂಶದ ಆತಂಕ!

- ಜಿಲ್ಲೆಯ ಕೆರೆಗಳಲ್ಲಿನ ನೀರಲ್ಲಿ ಮಾರಕ ದ್ರಾವಣಗಳು ಬೆರೆತಿರುವ ಅನುಮಾನ

- 3ನೆ ಹಂತದ ಶುದ್ದೀಕರಣದ ನಂತರ ಕೆ.ಸಿ. ವ್ಯಾಲಿ ನೀರು ಹರಿಸಲು ಒತ್ತಾಯ

ಕೋಲಾರ (ಅ. 08): ಇಲ್ಲಿನ  ಕೃಷಿಕರಲ್ಲಿ ಆತಂಕ ಶುರುವಾಗಿದೆ. ಜಿಲ್ಲೆಯಲ್ಲಿ ಬೆಳೆದ ಹಣ್ಣು-ತರಕಾರಿಗಳಿಗೆ ಹೊರ ರಾಜ್ಯಗಳಲ್ಲಿ ಬೇಡಿಕೆ ಕಡಿಮೆಯಾಗಿದೆ. ಇಲ್ಲಿನ ಹಣ್ಣು-ತರಕಾರಿಗಳಲ್ಲಿ ಮಾರಕವಾದ ರಾಸಾಯನಿಕಗಳು ಬೆರೆತಿರುವ ಅನುಮಾನವೇ ಇದಕ್ಕೆ ಕಾರಣವಾಗಿದೆ. ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೋಲಾರ ಜಿಲ್ಲೆಯಲ್ಲಿ ಬೇಸಾಯಕ್ಕೆ ಬಳಸುತ್ತಿರುವುದೇ ಇದಕ್ಕೆ ಮೂಲವಾಗಿದೆ. 

ಕೆಸಿ ವ್ಯಾಲಿಯ ನೀರನ್ನು ಉಪಯೋಗಿಸಿಕೊಂಡು ತೆಗೆಯುತ್ತಿರುವ ಬೆಳೆಗಳು ಆಹಾರದಲ್ಲಿ ಬಳಸಲು ಯೋಗ್ಯವಲ್ಲ ಎಂದು ಸಣ್ಣದಾಗಿ ಪ್ರಚಾರ ಆರಂಭವಾಗಿದೆ. ಇದರಿಂದಾಗಿ ಜಿಲ್ಲೆಯ ಕೃಷಿ ಉತ್ಪನ್ನಗಳನ್ನು ಖರೀದಿಸಲು ಹೊರ ರಾಜ್ಯಗಳ ವ್ಯಾಪಾರಸ್ಥರು ಆಸಕ್ತಿಯನ್ನು ತೋರಿಸುತ್ತಿಲ್ಲ. ಬೆಂಗಳೂರಿನ ಒಳಚರಂಡಿ ನೀರು ಮತ್ತು ಕೈಗಾರಿಕೆಗಳಿಂದ ಹೊರ ಬರುವ ನೀರಿನಲ್ಲಿ ಮಾರಕ ರಾಸಾಯನಿಕಗಳು ಬೆರೆತಿರುತ್ತದೆ. ಇಂಥಹ ತ್ಯಾಜ್ಯ ನೀರನ್ನು ಮೂರು ಸಲ ಸಂಸ್ಕರಣೆ ಮಾಡಿದಲ್ಲಿ ಮಾತ್ರ ಶುದ್ದವಾಗುತ್ತದೆ. ಈ ಬಗ್ಗೆ ಸರ್ಕಾರವು ಗಮನ ಹರಿಸಿದರೆ ಕೃಷಿ ಉತ್ಪನ್ನಗಳಿಗೂ ಮೊದಲಿನ ಬೇಡಿಕೆ ಸಿಗುತ್ತದ ಅಂತಾರೆ ಕೃಷಿಕರು. 

25:48ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ
26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?