ಸೋಮವಾರಪೇಟೆ ಮೂವತ್ತೊಕ್ಲು ಗ್ರಾಮದಲ್ಲಿದೆ ಮೀನುಕೊಲ್ಲಿ, ಆದ್ರೆ ಹಿಡಿಯುವಂತಿಲ್ಲ.!

ಸೋಮವಾರಪೇಟೆ ಮೂವತ್ತೊಕ್ಲು ಗ್ರಾಮದಲ್ಲಿದೆ ಮೀನುಕೊಲ್ಲಿ, ಆದ್ರೆ ಹಿಡಿಯುವಂತಿಲ್ಲ.!

Suvarna News   | Asianet News
Published : Sep 10, 2021, 03:39 PM ISTUpdated : Sep 10, 2021, 04:22 PM IST

ಸಣ್ಣ ತೊರೆಯಲ್ಲಿ ರಾಶಿ ರಾಶಿ ಮೀನುಗಳು,  ಇದು ಅಂತಿಂತ ಮತ್ಸ್ಯ ಸಮೂಹವಲ್ಲ... ದೇವರ ಮೀನುಗಳು! ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮೂವತ್ತೊಕ್ಲು ಗ್ರಾಮದಲ್ಲಿ ಇಂಥ ಅಪರೂಪದ ಮೀನುಗಳು ಕಾಣೋದಕ್ಕೆ ಸಿಗುತ್ತವೆ. 
 

ಕೊಡಗು (ಸೆ. 10): ಸಣ್ಣ ತೊರೆಯಲ್ಲಿ ರಾಶಿ ರಾಶಿ ಮೀನುಗಳು,  ಇದು ಅಂತಿಂತ ಮತ್ಸ್ಯ ಸಮೂಹವಲ್ಲ... ದೇವರ ಮೀನುಗಳು! ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮೂವತ್ತೊಕ್ಲು ಗ್ರಾಮದಲ್ಲಿ ಇಂಥ ಅಪರೂಪದ ಮೀನುಗಳು ಕಾಣೋದಕ್ಕೆ ಸಿಗುತ್ತವೆ. 

ಈ ಮೀನನ್ನು ಯಾರು ಕೂಡಾ ಹಿಡಿಯೋದಿಲ್ಲ. ಈ ಪುಟ್ಟ ತೊರೆಯ ಪಕ್ಕದಲ್ಲಿ ಭದ್ರಕಾಳಿ ದೇವಾಲಯವಿದ್ದು, ದೇವರಿಗೆ ಸೇರಿದ ಮತ್ಸ್ಯ ರಾಶಿ ಅನ್ನುವ ನಂಬಿಕೆ ಈ ಭಾಗದ ಜನರದ್ದು. ಹೀಗಾಗಿ ಇಂದಿಗೂ ಸಾವಿರಾರು ಮೀನುಗಳು ಈ ಪುಟ್ಟ ತೊರೆಯಲ್ಲಿ ಜೀವಿಸುತ್ತಿವೆ. ಮೀನುಗಳು ಹೆಚ್ಚಿರುವ ಕಾರಣಕ್ಕೆ ಈ ತೊರೆಯನ್ನ ಮೀನುಕೊಲ್ಲಿ ಅಂತ ಕರೆಯಲಾಗುತ್ತದೆ. 

ಈ ಮೀನುಗಳನ್ನ ಹಿಡಿದರೆ ಅವರ ಜೀವನದಲ್ಲಿ ಸಂಕಷ್ಟ ಎದುರಾಗುತ್ತೆ, ಅನಾಹುತ ಸಂಭವಿಸುತ್ತೆ ಅನ್ನುವ ನಂಬಿಕೆ ಬಹಳ ಹಿಂದಿನಿಂದಲೂ ಇದೆ.  ಹೀಗಾಗಿ ಅದರ ಪಾಡಿಗೆ ಬಿಟ್ಟಿದ್ದಾರೆ. ಅವುಗಳನ್ನ ಮುಟ್ಟೋದಕ್ಕೂ ಈ ಭಾಗದ ಜನ ಭಯಪಡ್ತಾರೆ. ನೀರು ಹೆಚ್ಚಾದಾಗ ಹರಿದು ಹೋಗುವ ಮೀನುಗಳು ಬಳಿಕ ನೀರು ಕಡಿಮೆಯಾಗುತ್ತಿದ್ದಂತೆ ಮರಳಿ ಈ ಸ್ಥಳಕ್ಕೆ ಬಂದು ಸೇರುತ್ತವೆ. ಕೊಡಗಿನ ಮೂವತ್ತೊಕ್ಲು ಮೀನುಕೊಲ್ಲಿಯ ಮೀನುಗಳನ್ನ ಉಳಿಸೋದಕ್ಕಾಗಿ ಗ್ರಾಮಸ್ಥರು ಟೊಂಕ ಕಟ್ಟಿದ್ದಾರೆ.

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!