ಸೋಮವಾರಪೇಟೆ ಮೂವತ್ತೊಕ್ಲು ಗ್ರಾಮದಲ್ಲಿದೆ ಮೀನುಕೊಲ್ಲಿ, ಆದ್ರೆ ಹಿಡಿಯುವಂತಿಲ್ಲ.!

ಸೋಮವಾರಪೇಟೆ ಮೂವತ್ತೊಕ್ಲು ಗ್ರಾಮದಲ್ಲಿದೆ ಮೀನುಕೊಲ್ಲಿ, ಆದ್ರೆ ಹಿಡಿಯುವಂತಿಲ್ಲ.!

Suvarna News   | Asianet News
Published : Sep 10, 2021, 03:39 PM ISTUpdated : Sep 10, 2021, 04:22 PM IST

ಸಣ್ಣ ತೊರೆಯಲ್ಲಿ ರಾಶಿ ರಾಶಿ ಮೀನುಗಳು,  ಇದು ಅಂತಿಂತ ಮತ್ಸ್ಯ ಸಮೂಹವಲ್ಲ... ದೇವರ ಮೀನುಗಳು! ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮೂವತ್ತೊಕ್ಲು ಗ್ರಾಮದಲ್ಲಿ ಇಂಥ ಅಪರೂಪದ ಮೀನುಗಳು ಕಾಣೋದಕ್ಕೆ ಸಿಗುತ್ತವೆ. 
 

ಕೊಡಗು (ಸೆ. 10): ಸಣ್ಣ ತೊರೆಯಲ್ಲಿ ರಾಶಿ ರಾಶಿ ಮೀನುಗಳು,  ಇದು ಅಂತಿಂತ ಮತ್ಸ್ಯ ಸಮೂಹವಲ್ಲ... ದೇವರ ಮೀನುಗಳು! ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮೂವತ್ತೊಕ್ಲು ಗ್ರಾಮದಲ್ಲಿ ಇಂಥ ಅಪರೂಪದ ಮೀನುಗಳು ಕಾಣೋದಕ್ಕೆ ಸಿಗುತ್ತವೆ. 

ಈ ಮೀನನ್ನು ಯಾರು ಕೂಡಾ ಹಿಡಿಯೋದಿಲ್ಲ. ಈ ಪುಟ್ಟ ತೊರೆಯ ಪಕ್ಕದಲ್ಲಿ ಭದ್ರಕಾಳಿ ದೇವಾಲಯವಿದ್ದು, ದೇವರಿಗೆ ಸೇರಿದ ಮತ್ಸ್ಯ ರಾಶಿ ಅನ್ನುವ ನಂಬಿಕೆ ಈ ಭಾಗದ ಜನರದ್ದು. ಹೀಗಾಗಿ ಇಂದಿಗೂ ಸಾವಿರಾರು ಮೀನುಗಳು ಈ ಪುಟ್ಟ ತೊರೆಯಲ್ಲಿ ಜೀವಿಸುತ್ತಿವೆ. ಮೀನುಗಳು ಹೆಚ್ಚಿರುವ ಕಾರಣಕ್ಕೆ ಈ ತೊರೆಯನ್ನ ಮೀನುಕೊಲ್ಲಿ ಅಂತ ಕರೆಯಲಾಗುತ್ತದೆ. 

ಈ ಮೀನುಗಳನ್ನ ಹಿಡಿದರೆ ಅವರ ಜೀವನದಲ್ಲಿ ಸಂಕಷ್ಟ ಎದುರಾಗುತ್ತೆ, ಅನಾಹುತ ಸಂಭವಿಸುತ್ತೆ ಅನ್ನುವ ನಂಬಿಕೆ ಬಹಳ ಹಿಂದಿನಿಂದಲೂ ಇದೆ.  ಹೀಗಾಗಿ ಅದರ ಪಾಡಿಗೆ ಬಿಟ್ಟಿದ್ದಾರೆ. ಅವುಗಳನ್ನ ಮುಟ್ಟೋದಕ್ಕೂ ಈ ಭಾಗದ ಜನ ಭಯಪಡ್ತಾರೆ. ನೀರು ಹೆಚ್ಚಾದಾಗ ಹರಿದು ಹೋಗುವ ಮೀನುಗಳು ಬಳಿಕ ನೀರು ಕಡಿಮೆಯಾಗುತ್ತಿದ್ದಂತೆ ಮರಳಿ ಈ ಸ್ಥಳಕ್ಕೆ ಬಂದು ಸೇರುತ್ತವೆ. ಕೊಡಗಿನ ಮೂವತ್ತೊಕ್ಲು ಮೀನುಕೊಲ್ಲಿಯ ಮೀನುಗಳನ್ನ ಉಳಿಸೋದಕ್ಕಾಗಿ ಗ್ರಾಮಸ್ಥರು ಟೊಂಕ ಕಟ್ಟಿದ್ದಾರೆ.

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?