ಯಕ್ಷಗಾನ ಕಲೆಗೆ ಮೋಹಿತರಾಗಿ ವೇಷ ಧರಿಸಿದ ಆರೋಗ್ಯ ಸಚಿವ ಸುಧಾಕರ್

ಯಕ್ಷಗಾನ ಕಲೆಗೆ ಮೋಹಿತರಾಗಿ ವೇಷ ಧರಿಸಿದ ಆರೋಗ್ಯ ಸಚಿವ ಸುಧಾಕರ್

Published : Oct 12, 2022, 07:45 PM IST

ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಯಕ್ಷಗಾನ ಕಲೆಗೆ ಮಾರು ಹೋಗಿ  ಕಲೆಯ ಕಲಾಕಾರರು ಧರಿಸುವ ವೇಷ ಧರಿಸಿ ಮಿಂಚಿದ ಅಪರೂಪದ ಘಟನೆ ಭಟ್ಕಳದಲ್ಲಿ ನಡೆಯಿತು. ಬಡಗುತಿಟ್ಟು ಯಕ್ಷಗಾನದ ಪೋಷಾಕು ಧರಿಸಿ  ಸಚಿವ ಡಾ. ಸುಧಾಕರ್ ಸನ್ಮಾನ ಸ್ವೀಕರಿಸಿದರು.

ಉತ್ತರಕನ್ನಡ(ಕಾರವಾರ): ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಯಕ್ಷಗಾನ ಕಲೆಗೆ ಮಾರು ಹೋಗಿ  ಕಲೆಯ ಕಲಾಕಾರರು ಧರಿಸುವ ವೇಷ ಧರಿಸಿ ಮಿಂಚಿದ ಅಪರೂಪದ ಘಟನೆ ಭಟ್ಕಳದಲ್ಲಿ ನಡೆಯಿತು. ಬಡಗುತಿಟ್ಟು ಯಕ್ಷಗಾನದ ಪೋಷಾಕು ಧರಿಸಿ  ಸಚಿವ ಡಾ. ಸುಧಾಕರ್ ಸನ್ಮಾನ ಸ್ವೀಕರಿಸಿದರು.


ನಿನ್ನೆ ಉತ್ತರಕನ್ನಡ (Uttara Kannada) ಜಿಲ್ಲೆಯ ಕಾರವಾರ (Karawara) ಹಾಗೂ ಕುಮುಟಾಕ್ಕೆ (Kumta)ಭೇಟಿ ನೀಡಿದ್ದ ಡಾ‌‌. ಸುಧಾಕರ್ (Dr. Sudhakar) ರಾತ್ರಿ ಭಟ್ಕಳದ ಸಮುದಾಯ ಆಸ್ಪತ್ರೆಗೆ (Bhatkala Comunity Hospital) ಭೇಟಿ ನೀಡಿದ್ದರು. ಅಲ್ಲಿಂದ ತೆರಳಿದ ಸಚಿವ ಡಾ.‌ಸುಧಾಕರ್, ಭಟ್ಕಳ ಶಾಸಕ ಸುನೀಲ್ ನಾಯ್ಕ್ (Sunil Naik) ಅವರ ಮನೆಯಲ್ಲಿ ತಂಗಿದ್ದರು. ಆರೋಗ್ಯ ಸಚಿವರಿಗೆ (Health Minister) ಭರ್ಜರಿ ಸ್ವಾಗತ ನೀಡಿದ್ದ ಸುನೀಲ್ ನಾಯ್ಕ್, ರಾತ್ರಿ ಮನೆಯಲ್ಲಿ ಬಡಗುತಿಟ್ಟು ಯಕ್ಷಗಾನ (Badagutittu Yakshagana)ಆಯೋಜಿಸಿದ್ದರು. 

ಭಟ್ಕಳದಲ್ಲಿ ನಿನ್ನೆ ರಾತ್ರಿ ಭಾರೀ ಮಳೆ ಸುರಿದಿದ್ದರೂ ಯಕ್ಷಗಾನ ಮುಗಿಯುವರೆಗೆ ಕುಳಿತು ನೋಡಿದ್ದ ಆರೋಗ್ಯ ಸಚಿವರು ಯಕ್ಷಗಾನ ಕಲೆಗೆ ಮರು ಹೋಗಿದ್ದಾರೆ. ಆರೋಗ್ಯ ಸಚಿವರಿಗೆ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ್ ನಾಯ್ಕ್ ಸಾಥ್‌ ನೀಡಿದ್ದರು. ಯಕ್ಷಗಾನ ಮುಗಿದ ಬಳಿಕ ಇತರರ ಸಹಾಯದಿಂದ ಸಚಿವ ಸುಧಾಕರ್ ಕಲಾವಿದರ ಪೋಷಾಕು ಧರಿಸಿದರು. ಅಲ್ಲದೇ ಆ ಪೋಷಾಕಿನಲ್ಲಿಯೇ ಸನ್ಮಾನ ಸ್ವೀಕರಿಸಿದರು. 

ಯಕ್ಷಗಾನದ ವೇದಿಕೆಯಲ್ಲಿ ಬಡಗುತಿಟ್ಟು ಪೋಷಾಕು ಧರಿಸಿ ಮಿಂಚಿದ ಆರೋಗ್ಯ ಸಚಿವ ಡಾ.‌ಸುಧಾಕರ್ ಅವರು ನಂತರ ಇಂದು ಇಂದು ಬೆಳಗ್ಗೆ ಮಂಗಳೂರು ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more