ಯಕ್ಷಗಾನ ಕಲೆಗೆ ಮೋಹಿತರಾಗಿ ವೇಷ ಧರಿಸಿದ ಆರೋಗ್ಯ ಸಚಿವ ಸುಧಾಕರ್

ಯಕ್ಷಗಾನ ಕಲೆಗೆ ಮೋಹಿತರಾಗಿ ವೇಷ ಧರಿಸಿದ ಆರೋಗ್ಯ ಸಚಿವ ಸುಧಾಕರ್

Published : Oct 12, 2022, 07:45 PM IST

ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಯಕ್ಷಗಾನ ಕಲೆಗೆ ಮಾರು ಹೋಗಿ  ಕಲೆಯ ಕಲಾಕಾರರು ಧರಿಸುವ ವೇಷ ಧರಿಸಿ ಮಿಂಚಿದ ಅಪರೂಪದ ಘಟನೆ ಭಟ್ಕಳದಲ್ಲಿ ನಡೆಯಿತು. ಬಡಗುತಿಟ್ಟು ಯಕ್ಷಗಾನದ ಪೋಷಾಕು ಧರಿಸಿ  ಸಚಿವ ಡಾ. ಸುಧಾಕರ್ ಸನ್ಮಾನ ಸ್ವೀಕರಿಸಿದರು.

ಉತ್ತರಕನ್ನಡ(ಕಾರವಾರ): ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಯಕ್ಷಗಾನ ಕಲೆಗೆ ಮಾರು ಹೋಗಿ  ಕಲೆಯ ಕಲಾಕಾರರು ಧರಿಸುವ ವೇಷ ಧರಿಸಿ ಮಿಂಚಿದ ಅಪರೂಪದ ಘಟನೆ ಭಟ್ಕಳದಲ್ಲಿ ನಡೆಯಿತು. ಬಡಗುತಿಟ್ಟು ಯಕ್ಷಗಾನದ ಪೋಷಾಕು ಧರಿಸಿ  ಸಚಿವ ಡಾ. ಸುಧಾಕರ್ ಸನ್ಮಾನ ಸ್ವೀಕರಿಸಿದರು.


ನಿನ್ನೆ ಉತ್ತರಕನ್ನಡ (Uttara Kannada) ಜಿಲ್ಲೆಯ ಕಾರವಾರ (Karawara) ಹಾಗೂ ಕುಮುಟಾಕ್ಕೆ (Kumta)ಭೇಟಿ ನೀಡಿದ್ದ ಡಾ‌‌. ಸುಧಾಕರ್ (Dr. Sudhakar) ರಾತ್ರಿ ಭಟ್ಕಳದ ಸಮುದಾಯ ಆಸ್ಪತ್ರೆಗೆ (Bhatkala Comunity Hospital) ಭೇಟಿ ನೀಡಿದ್ದರು. ಅಲ್ಲಿಂದ ತೆರಳಿದ ಸಚಿವ ಡಾ.‌ಸುಧಾಕರ್, ಭಟ್ಕಳ ಶಾಸಕ ಸುನೀಲ್ ನಾಯ್ಕ್ (Sunil Naik) ಅವರ ಮನೆಯಲ್ಲಿ ತಂಗಿದ್ದರು. ಆರೋಗ್ಯ ಸಚಿವರಿಗೆ (Health Minister) ಭರ್ಜರಿ ಸ್ವಾಗತ ನೀಡಿದ್ದ ಸುನೀಲ್ ನಾಯ್ಕ್, ರಾತ್ರಿ ಮನೆಯಲ್ಲಿ ಬಡಗುತಿಟ್ಟು ಯಕ್ಷಗಾನ (Badagutittu Yakshagana)ಆಯೋಜಿಸಿದ್ದರು. 

ಭಟ್ಕಳದಲ್ಲಿ ನಿನ್ನೆ ರಾತ್ರಿ ಭಾರೀ ಮಳೆ ಸುರಿದಿದ್ದರೂ ಯಕ್ಷಗಾನ ಮುಗಿಯುವರೆಗೆ ಕುಳಿತು ನೋಡಿದ್ದ ಆರೋಗ್ಯ ಸಚಿವರು ಯಕ್ಷಗಾನ ಕಲೆಗೆ ಮರು ಹೋಗಿದ್ದಾರೆ. ಆರೋಗ್ಯ ಸಚಿವರಿಗೆ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ್ ನಾಯ್ಕ್ ಸಾಥ್‌ ನೀಡಿದ್ದರು. ಯಕ್ಷಗಾನ ಮುಗಿದ ಬಳಿಕ ಇತರರ ಸಹಾಯದಿಂದ ಸಚಿವ ಸುಧಾಕರ್ ಕಲಾವಿದರ ಪೋಷಾಕು ಧರಿಸಿದರು. ಅಲ್ಲದೇ ಆ ಪೋಷಾಕಿನಲ್ಲಿಯೇ ಸನ್ಮಾನ ಸ್ವೀಕರಿಸಿದರು. 

ಯಕ್ಷಗಾನದ ವೇದಿಕೆಯಲ್ಲಿ ಬಡಗುತಿಟ್ಟು ಪೋಷಾಕು ಧರಿಸಿ ಮಿಂಚಿದ ಆರೋಗ್ಯ ಸಚಿವ ಡಾ.‌ಸುಧಾಕರ್ ಅವರು ನಂತರ ಇಂದು ಇಂದು ಬೆಳಗ್ಗೆ ಮಂಗಳೂರು ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more