ಕರ್ನಾಟಕ ಬಂದ್‌ಗೂ ಮುನ್ನ ಪಂತ್‌ ಎಚ್ಚರಿಕೆ, ಹೀಗೆ ಮಾಡಿದ್ರೆ ಜೋಕೆ!

Sep 27, 2020, 6:44 PM IST

ಬೆಂಗಳೂರು(ಸೆ.  27)   ಸೋಮವಾರ ಕರ್ನಾಟಕ ಬಂದ್‌ಗೆ ಅನುಮತಿ ಇಲ್ಲ. ಯಾರಾದರೂ ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚಿಸಲು ಮುಂದಾದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಪೊಲೀಸ್ ಆಯುಕ್ತ ಕಮಲ್  ಪಂತ್ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಬಂದ್ ಈ ಮೂರು ಜಿಲ್ಲೆಗಳಲ್ಲಿ ಇಲ್ಲ

ರೈತ ಮಸೂದೆ ವಿರೋಧಿಸಿ ಸಂಘಟನೆಗಳು ಸೋಮವಾರ ಕರ್ನಾಟಕ ಬಂದ್ ಗೆ ಕರೆ ನೀಡಿವೆ.  ಆದರೆ ಯಾವುದೆ ರೀತಿ ಒತ್ತಾಯಹೇರಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಮರೆಯುವಂತೆ ಇಲ್ಲ.