ಕನ್ನಡಪ್ರಭ, ಸುವರ್ಣನ್ಯೂಸ್‌ ‘ರೈತ ರತ್ನ’ ಪ್ರಶಸ್ತಿ : 11 ವಿಭಾಗದಲ್ಲಿ 12 ಸಾಧಕರಿಗೆ ಪ್ರಶಸ್ತಿ ಪ್ರದಾನ

Mar 27, 2023, 10:57 AM IST

ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಅನ್ನದಾತರಿಗೆ ‘ಕನ್ನಡ ಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಸಹಯೋಗದಲ್ಲಿ ‘ರೈತರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ರೈತ ರತ್ನ ಪ್ರಶಸ್ತಿಯ ಮೂರನೇ ಆವೃತ್ತಿ ಇದಾಗಿದ್ದು, ಎಂದಿನಂತೆ ಈ ಬಾರಿಯೂ 11 ವಿಭಾಗದಲ್ಲಿ 12 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.ರೈತರತ್ನ ಪ್ರಶಸ್ತಿಗಾಗಿ 600 ಕ್ಕೂ ಹೆಚ್ಚು ರೈತರು ಹೆಸರುಗಳನ್ನು ಕಳಿಸಿದ್ದು, ಅದರಲ್ಲಿ  12 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸುಸ್ಥಿರ ರೈತ ವಿಭಾಗ,ಸಾವಯವ ರೈತ,ಆಧುನಿಕ ರೈತ,ಯುವ ರೈತ,ರೈತ ಮಹಿಳೆ,ಪಶು ಸಂಗೋಪನೆ,ತೋಟಗಾರಿಕೆ,ವೈದ್ಯ/ವಿಜ್ಞಾನಿ ರೈತ,ಕೃಷ್ಯುತ್ಪನ್ನ ಸಂಸ್ಥೆ/ರೈತ ಸೇರಿದಂತೆ ಕೃಷಿ ತಂತ್ರಜ್ಞಾನಿ/ಸಂಶೋಧಕ ರೈತ ವಿಭಾಗಕ್ಕೆ ಸಾಧಕರನ್ನು ಗೌರವಿಸಲಾಗಿದೆ.