ಜ್ಯೋತಿ ನಿವಾಸ ಕಾಲೇಜು ಗಲಾಟೆಗೆ ಕಾರಣ ಹೇಳಿದ ಡಿಸಿಎಂ ಅಶ್ವಥ್ ನಾರಾಯಣ

Jan 9, 2020, 8:54 PM IST

ಬೆಂಗಳೂರು[ಜ. 09 ] ಸಿಎಎಗೆ ಒತ್ತಾಯಿಸಿದ್ದ ಪ್ರತಿಪಕ್ಷಗಳು ಈಗ ರಿವರ್ಸ್‌ ಗೇರ್‌ ಹಾಕಿವೆ ಎಂದು ಡಿಸಿಎಂ ಡಾ. ಸಿ ಎನ್‌ ಅಶ್ವತ್ಥನಾರಾಯಣ ಲೇವಡಿ ಮಾಡಿದ್ದಾರೆ.

ಬೇರೆ ದೇಶಗಳಲ್ಲಿ ಕಿರುಕುಳ ಸಹಿಸಲಾಗದೇ ದೇಶಕ್ಕೆ ವಲಸೆ ಬಂದ ಭಾರತೀಯ ಮೂಲದವರಿಗೆ ಕಾನೂನಿನ ರಕ್ಷಣೆ ನೀಡಬೇಕು ಎಂಬುದು ಎಲ್ಲ ಪಕ್ಷಗಳ ಒತ್ತಾಯವಾಗಿತ್ತು. ಈ ನಿಟ್ಟಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ತರಲಾಯಿತು. ಆದರೆ, ಈಗ ಪ್ರತಿಪಕ್ಷಗಳೇ ರಿವರ್ಸ್‌ ಗೇರ್‌ ಹಾಕಿವೆ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.