ಬಾಗಲಕೋಟೆ: ಗಾಯಗೊಂಡ ಮರಿ ರಕ್ಷಣೆಗೆ ಇಡೀ ದಿನ ಹೆದ್ದಾರಿಯಲ್ಲಿ ನಿಂತ ‘ಮಹಾತಾಯಿ’

ಬಾಗಲಕೋಟೆ: ಗಾಯಗೊಂಡ ಮರಿ ರಕ್ಷಣೆಗೆ ಇಡೀ ದಿನ ಹೆದ್ದಾರಿಯಲ್ಲಿ ನಿಂತ ‘ಮಹಾತಾಯಿ’

Published : Jul 21, 2019, 09:41 PM ISTUpdated : Jul 21, 2019, 09:57 PM IST

ತಾಯಿ ಪ್ರೀತಿಯೇ ಹಾಗೆ.. ಅದು ಮಾನವರಿರಲಿ.. ಪ್ರಾಣಿಗಳಿರಲಿ.. ಮಾತಿನಲ್ಲಿ ಹೇಳಲು ಅಸಾಧ್ಯ. ಇಲ್ಲೊಂದು ತಾಯಿ ಕುದುರೆ ತನ್ನ ಮರಿಗಾಗಿ  24 ಗಂಟೆಗಳ ಘೋರ ತಪಸ್ಸು ಮಾಡಿದೆ. ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮರಿ ಕುದುರೆಯೊಂದು ತೀವ್ರವಾಗಿ ಗಾಯಗೊಂಡು ಕಳೆದ 24 ಗಂಟೆಗಳಿಂದ ನರಳಾಡುತ್ತಿದ್ದರೆ, ಇದರ ಪಕ್ಕದಲ್ಲೇ ಕುದುರೆಯ ತಾಯಿ ಜಾಗ ಬಿಟ್ಟು ಕದಲದೇ  ರೋದಿಸುತ್ತಿತ್ತು.

ತಾಯಿ ಪ್ರೀತಿಯೇ ಹಾಗೆ.. ಅದು ಮಾನವರಿರಲಿ.. ಪ್ರಾಣಿಗಳಿರಲಿ.. ಮಾತಿನಲ್ಲಿ ಹೇಳಲು ಅಸಾಧ್ಯ. ಇಲ್ಲೊಂದು ತಾಯಿ ಕುದುರೆ ತನ್ನ ಮರಿಗಾಗಿ  24 ಗಂಟೆಗಳ ಘೋರ ತಪಸ್ಸು ಮಾಡಿದೆ. ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮರಿ ಕುದುರೆಯೊಂದು ತೀವ್ರವಾಗಿ ಗಾಯಗೊಂಡು ಕಳೆದ 24 ಗಂಟೆಗಳಿಂದ ನರಳಾಡುತ್ತಿದ್ದರೆ, ಇದರ ಪಕ್ಕದಲ್ಲೇ ಕುದುರೆಯ ತಾಯಿ ಜಾಗ ಬಿಟ್ಟು ಕದಲದೇ  ರೋದಿಸುತ್ತಿತ್ತು.

ರಾಜ್ಯ ಹೆದ್ದಾರಿ ಸೇತುವೆಯ ಮೇಲೆ ಕುದುರೆ ಮರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ.  ಇದರ ಪರಿಣಾಮ ಕುದುರೆ ಮರಿಯ ಕಾಲು ಮುರಿದಿದ್ದು ತೀವ್ರವಾಗಿ ಗಾಯಗೊಂಡಿತ್ತು, ಇದನ್ನು ಗಮನಿಸಿದ ವಾಹನ ಸವಾರರು ನೀರು ಹಾಕಿ ಹೋಗಿದ್ದಾರೆ. ಘಟನೆ ನಡೆದು 30 ಗಂಟೆಗಳಿಗೂ ಹೆಚ್ಚು ಸಮಯವಾದ್ರೂ  ಕುದುರೆ ಮರಿಯನ್ನ ತಾಯಿ ಕುದುರೆ ಬಿಟ್ಟು ಹೋಗಿಲ್ಲ. ಕದಲದೇ ತನ್ನ ಮರಿಯ ನರಳಾಟವನ್ನು ನೋಡುತ್ತಲೇ ನಿಂತಿದೆ.

ಅಪಾಯಕಾರಿ ಸೇತುವೆ ಮೇಲೆ ಸತತವಾಗಿ ವಾಹನಗಳು ಓಡಾಡುತ್ತಿದ್ದರೂ ಮರಿಯನ್ನ ಬಿಟ್ಟು ದೂರ ಹೋಗದೇ 24 ಗಂಟೆಗಳಿಂದ ನಿಂತಲ್ಲೇ ನಿಂತಿದೆ.  ಇನ್ನು ಕುದುರೆಯನ್ನ ಗಮನಿಸಿದ ಕೆಲವರು ಸತ್ತಿರಬಹುದು ಎಂದು ಹಾಗೆ ಬಿಟ್ಟು ಹೋಗಿದ್ದಾರೆ. ಆದ್ರೆ ಜನ್ಮ ಕೊಟ್ಟ ತಾಯಿ ತನ್ನ ಮಗುವಿನ ರೋದನೆಯನ್ನ ಕಂಡು ಮರುಗುತ್ತಲೇ ಇತ್ತು. ಇನ್ನು ಇಂದು ಸಂಜೆ ಇದೇ ರಸ್ತೆಯಲ್ಲಿ ತೆರಳುತ್ತಿದ್ದ ಬಾಗಲಕೋಟೆ ಜಿಲ್ಲೆಯ ನಿರ್ಮಿತಿ ಕೇಂದ್ರದ ಅಧಿಕಾರಿ ಶಂಕರಲಿಂಗ ಗೂಗಿ, ಕುದುರೆ ಸ್ಥಿತಿಯನ್ನ ಕಂಡು ಮಾನವಿಯತೆ ಮೆರೆದಿದ್ದಾರೆ. ಕುದುರೆಗೆ ನೀರು ಕುಡಿಸಿ ರಸ್ತೆಯಿಂದ ಪಕ್ಕಕೆ ಹಾಕಿ ಪಶುಸಂಗೋಪನೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇದೀಗ ಕುದುರೆ ಮರಿಗೆ ಚಿಕಿತ್ಸೆ ನೀಡಲಾಗಿದೆ.

21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!