ಚಾರ್ಮಾಡಿ ಘಾಟ್ ಕಾವಲಿಗೆ ನಿಂತಿರುವ ದೇವಿಯ ಪವಾಡ: ವಾಹನ ಸವಾರರಿಗೆ ಮಹಾತಾಯಿ ಶ್ರೀರಕ್ಷೆ!

ಚಾರ್ಮಾಡಿ ಘಾಟ್ ಕಾವಲಿಗೆ ನಿಂತಿರುವ ದೇವಿಯ ಪವಾಡ: ವಾಹನ ಸವಾರರಿಗೆ ಮಹಾತಾಯಿ ಶ್ರೀರಕ್ಷೆ!

Published : May 14, 2022, 08:17 PM IST

*ಈ ಘಾಟ್ ರಸ್ತೆಯಲ್ಲಿ ವಾಹನ ಓಡಿಸೋದೇ ದೊಡ್ಡ ಸವಾಲು..!
*ಹಾವಿನಾಕಾರದ ರಸ್ತೆಯಲ್ಲಿ ನಡೆಯುತ್ತಲೇ ಇರುತ್ತೆ ಅಪಘಾತ..!
*ವಾಹನ ಸವಾರರಿಗೆ ಕೊಡ್ತಾಳೆ ದೇವಿ ಶ್ರೀರಕ್ಷೆ..!

ಬೆಂಗಳೂರು (ಮೇ 14): ಒಂದಕ್ಕಿಂತ ಒಂದು ಭೀಕರ ಅಪಘಾತಗಳು.. ನೋಡ್ತಾ ನೋಡ್ತಾನೇ ರಸ್ತೆಯಲ್ಲಿ ಕಂಟ್ರೋಲ್​ ತಪ್ಪಿದ ವಾಹನಗಳು. ಇದೆಲ್ಲ ಚಿಕ್ಕ ಚಿಕ್ಕ ಸ್ಯಾಂಪಲ್​. ಇದಕ್ಕಿಂತಲೂ ಭೀಕರ ಅಪಘಾತಗಳು ಘಾಟ್​ದಂತ ಕಿರಿದಾದ ಇಕ್ಕಟ್ಟಾದ ರಸ್ತೆಯಲ್ಲಿ ಪ್ರತಿನಿತ್ಯ ನಡೆಯುತ್ತಲೇ ಇರುತ್ತೆ. ಅದು ಹಾವಿನಾಕಾರದ ಅಂಕುಡೊಂಕಾದ ರಸ್ತೆಗಳು.. ಕಡಿದಾದ ಗುಡ್ಡಗಾಡಿನ ರಸ್ತೆ. ಇಂತಹ ರಸ್ತೆಗಳನ್ನ ಘಾಟ್​ ಸೆಕ್ಷನ್​ ಅಂತ ಸಹ ಹೇಳಲಾಗುತ್ತೆ. ಇಲ್ಲಿ ವಾಹನ ಓಡಿಸೋದೇ ಚಾಲಕನಿಗೆ ಸವಾಲು. ಆದರೂ ವಾಹನ ಸವಾರರು ಜವರಾಯನಿಗೆನೇ ಚಮಕ್​ ಕೊಟ್ಟು ಬಿಂದಾಸ್​ ಆಗಿ ವಾಹನ ಓಡಿಸ್ತಾರೆ.

ಎಷ್ಟೋ ಜನರು ಘಾಟ್​ ಸೆಕ್ಷನ್​ ರಸ್ತೆ ಅಂದ್ರೆ ಸಾಕು, ಅಲ್ಲಿ ಹೋದ್ರೆ ಸಾವೇ ಫಿಕ್ಸ್​ ಅಂತ ಅಂದ್ಕೊಂಡು ಬಿಡ್ತಾರೆ. ಅಂತಹ ಡೆಡ್ಲಿ ಡೆಂಜರಸ್​ ರಸ್ತೆಗಳು ಅವು. ಆದರೆ ಆ ಒಂದು ಘಾಟ್​ ರಸ್ತೆ ಇದೆ. ಅಲ್ಲಿ ಅಪಘಾತಗಳೇ ಸಂಭವಿಸೋದಿಲ್ಲವಂತೆ. ಅಲ್ಲಿರೋ ಅಗೋಚರ ಶಕ್ತಿಯೊಂದು ವಾಹನ ಸವಾರರಿಗೆ ಶ್ರಿರಕ್ಷೆಯಂತೆ ಕಾಪಾಡ್ತಿದೆ.  ಆ ಶಕ್ತಿಯ ಹೆಸರೇ ಗುಳಿಗೆಮ್ಮ ದೇವಿ.

ಇದನ್ನೂ ಓದಿ: 

ಎತ್ತ ನೋಡಿದ್ರೂ ಹಸಿರ ಸಿರಿಯ ಸೊಬಗು, ಹತ್ತಿರ ಹೋಗಿ ನೋಡಿದ್ರೆ ಊಹಿಸಲು ಅಸಾಧ್ಯವಾದಂತಹ ಆಳವಾದ ಪ್ರಪಾತ. ದಟ್ಟಾರಣ್ಯದಿಂದ ಕೂಡಿರುವ ಕಣಿವೆ ಚಾರ್ಮಾಡಿ ಘಾಟ್ ಇರುವುದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ವ್ಯಾಪ್ತಿಯಲ್ಲಿ. ಮೊದಲೇ ಸಾಕಷ್ಟು ತಿರುವುಗಳಿಂದ ಕೂಡಿರುವ ಧರ್ಮಸ್ಥಳದ ಮಾರ್ಗವಾಗಿರುವ ಕೊಟ್ಟಿಗೆರೆಹಾರ ಗ್ರಾಮದಿಂದ ಚಾರ್ಮಾಡಿವರೆಗೂ ಘಾಟ್ ಪ್ರದೇಶವನ್ನು ಕಾಣಬಹುದಾಗಿದೆ. 

ಬೇಸಿಗೆ ಕಾಲವಾದರೆ ಪರವಾಗಿಲ್ಲ.. ರಸ್ತೆಗಳು ಒದ್ದೆಯಾಗಿರುವುದಿಲ್ಲ.. ಕೊಂಚ ಮಟ್ಟಿಗೆ ನಿರಾತಂಕವಾಗಿ ವಾಹನಗಳನ್ನ ಓಡಿಸಬಹುದು. ಆದರೆ ಮಳೆಗಾಲ ಚಳಿಗಾಲದಲ್ಲಿ ವಾತಾವರಣ ಭಯಂಕರವಾಗಿರುತ್ತೆ. ಇದೇ ಕಾರಣಕ್ಕೆ  ಮಳೆಗಾಲದಲ್ಲಿ ರಸ್ತೆ ಸಂಚಾರಕ್ಕೆ ಕೆಲದಿನಗಳು ಬ್ರೇಕ್  ಹಾಕಿರುತ್ತಾರೆ. ಕಾರಣ ಒಂದೇ ಸಮನೆ ಸುರಿಯೋ ಮಳೆಯಿಂದಾಗಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿತ, ರಸ್ತೆಗೆ ಮಣ್ಣು ಬೀಳುವುದರಿಂದ ಅನಾಹುತ ಸಂಭವಿಸೋ ಸಾಧ್ಯತೆಗಳು ಹೆಚ್ಚಾಗಿರುತ್ತೆ. 

ಚಾರ್ಮಾಡಿ ಘಾಟನ್​​ ಈ ಒಂದು ಸ್ಥಳದಲ್ಲಿ ಮಾತ್ರ ಇನ್ನೂವರೆಗೂ ಅಂಥಹದ್ಯಾವುದು ಘಟನೆಯೇ ಸಂಭವಿಸಿಲ್ಲ. ಅದು ಹಗಲಿನ ಸಮಯವಾದರೂ ಅಷ್ಟೆ. ನಡುರಾತ್ರಿಯ ಸಮಯವಾದರೂ ಅಷ್ಟೆ.. ಇಲ್ಲೂ ಯಾವ ದುರಂತಗಳೇ ಸಂಭವಿಸಿಲ್ಲ. ಇದಕ್ಕೆ ಕಾರಣ ದೇವಿಯ ಪವಾಡ ಅಂತ ಸ್ಥಳಿಯರು ಹೇಳುತ್ತಾರೆ.  ಈ ಕುರಿತ ಒಂದು ವರದಿ ಇಲ್ಲಿದೆ 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!