ಹೊಸಪೇಟೆ: ವಿಜಯನಗರ ಉದಯಕ್ಕೆ ಭವ್ಯ ವೇದಿಕೆ..!

Sep 29, 2021, 3:29 PM IST

ವಿಜಯನಗರ(ಸೆ.29): ಗತಕಾಲದ ಇತಿಹಾಸವನ್ನು ಮರುಕಳಿಸುವ ಐತಿಹಾಸಿಕ ವಿಜಯನಗರ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ. ಹೌದು, ವಿಜಯನಗರ ಕಾಲದ ಹಂಪಿಯ ಮಹಾನವಮಿ ದಿಬ್ಬದ ವೇದಿಕೆ ಬೃಹತ್ ರಾಜಗೋಪುರ ಸಿದ್ಧತೆ ಭರದಿಂದ ನಡೆಯುತ್ತಿದೆ. ರಾಜ್ಯದ 31ನೇ ಜಿಲ್ಲೆ ಘೋಷಣೆಗಾಗಿ ಹಂಪಿಯ ಮಹಾನವಮಿ ಮಾದರಿಯ ವೇದಿಕೆ ಸಿದ್ಧಗೊಳ್ಳುತ್ತಿದೆ. ಕಣ್ಮನ ಸೆಳೆಯುವ ವೇದಿಕೆಯ ಬ್ಲೂ ಪ್ರಿಂಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಸಮಾರೋಪ ಸಮಾರಂಭಕ್ಕೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಸಾಕ್ಷಿಯಾಗಲಿದ್ದಾರೆ. ಈ ಕುರಿತು ವಿವರವಾದ ಮಾಹಿತಿ ವಿಡಿಯೋದಲ್ಲಿದೆ.  

ಬಿಜೆಪಿ ಸೇರಲು ಕಾಂಗ್ರೆಸ್ಸಿನ ಹತ್ತಾರು ಜನ ಸಿದ್ಧರಿದ್ದಾರೆ: ಕಟೀಲ್ ಸ್ಫೋಟಕ ಹೇಳಿಕೆ