Chikkamagaluru: ಭೂ ಒತ್ತುವರಿದಾರರಿಗೆ ರಿಲೀಫ್?  ಗುತ್ತಿಗೆ ಆಧಾರ ಭೂಮಿ ನೀಡಲು ಮುಂದಾದ ಸರ್ಕಾರ

Chikkamagaluru: ಭೂ ಒತ್ತುವರಿದಾರರಿಗೆ ರಿಲೀಫ್? ಗುತ್ತಿಗೆ ಆಧಾರ ಭೂಮಿ ನೀಡಲು ಮುಂದಾದ ಸರ್ಕಾರ

Published : Apr 29, 2022, 04:25 PM IST

ಚಿಕ್ಕಮಗಳೂರಿನಲ್ಲಿ (Chikkamagaluru) ಸುಮಾರು 11 ಸಾವಿರ ಹೆಕ್ಟೇರ್ಗೂ ಅಧಿಕ ಒತ್ತುವರಿಯಾಗಿದೆ ಎಂಬ ಮಾತಿದೆ. ಅದರಲ್ಲಿ ಬದುಕಿಗಾಗಿ ಮಾಡಿದ ಒತ್ತುವರಿಯಷ್ಟೆ (Land Encrochment) ಭೂಮಿ ಆಸೆಗೆ ಮಾಡಿದ್ದೂ ಇದೆ. ಹಾಗಾಗಿ, ಅರಣ್ಯ ಹಾಗೂ ಕಂದಾಯ ಇಲಾಖೆ ಹಲವು ಬಾರಿ ಒತ್ತುವರಿ ತೆರವಿಗೆ ಮುಂದಾದರೂ ಕೂಡ ಸಾಧ್ಯವಾಗಲಿಲ್ಲ.

ಚಿಕ್ಕಮಗಳೂರು (ಏ. 29): ಕಾಫಿನಾಡಿನಲ್ಲಿ ಹಲವು ದಶಕಗಳಿಂದ ಕಂದಾಯ ಭೂಮಿಯನ್ನ ಆಸೆ ಹಾಗೂ ಬದುಕಿಗಾಗಿ ಒತ್ತುವಾರಿ ಮಾಡಿದ್ದಾರೆ. ಅಕ್ರಮ ಒತ್ತುವರಿಯನ್ನ ಒಕ್ಕಲೆಬ್ಬಿಸೋ ಪ್ರಯತ್ನ ನಡೆಯಿತಾದ್ರು ಅಲ್ಲೊಂದು-ಇಲ್ಲೊಂದು ಬಿಟ್ರೆ ಸಮರ್ಪಕವಾಗಿ ಜಾರಿಯಾಗಿಲ್ಲ. ಹಾಗಾಗಿ, ಸರ್ಕಾರವೇ ಒತ್ತುವರಿದಾರರಿಗೆ ಗುಡ್ ನ್ಯೂಸ ಕೊಡಲು ಮುಂದಾಗಿದ್ದು, ದಶಕಗಳಿಂದ ಆತಂಕದಲ್ಲೇ ಬದುಕುತ್ತಿದ್ದ ಒತ್ತುವರಿದಾರರು ನಿಟ್ಟುಸಿರು ಬಿಟ್ಟಿದ್ದಾರೆ. 

ಸುಮಾರು 11 ಸಾವಿರ ಹೆಕ್ಟೇರ್ಗೂ ಅಧಿಕ ಒತ್ತುವರಿಯಾಗಿದೆ ಎಂಬ ಮಾತಿದೆ. ಅದರಲ್ಲಿ ಬದುಕಿಗಾಗಿ ಮಾಡಿದ ಒತ್ತುವರಿಯಷ್ಟೆ ಭೂಮಿ (land Encrochment) ಆಸೆಗೆ ಮಾಡಿದ್ದೂ ಇದೆ. ಹಾಗಾಗಿ, ಅರಣ್ಯ ಹಾಗೂ ಕಂದಾಯ ಇಲಾಖೆ (Revenue Department) ಹಲವು ಬಾರಿ ಒತ್ತುವರಿ ತೆರವಿಗೆ ಮುಂದಾದರೂ ಕೂಡ ಸಾಧ್ಯವಾಗಲಿಲ್ಲ. ಆದರೂ, ಒತ್ತುವರಿದಾರರು ನಾಳೆ-ನಾಡಿದ್ದು ನಮ್ಮ ಬದುಕು ಏನಾಗುತ್ತೋ ಎಂದು ಆತಂಕದಲ್ಲೆ ಬದುಕುತ್ತಿದ್ದರು. ಅದರಲ್ಲೂ ಕಾಫಿ ಬೆಳೆಯುವ ಮಲೆನಾಡು ಭಾಗದಲ್ಲೇ ಒತ್ತುವರಿ ಒಂದು ದೊಡ್ಡ ಸಮಸ್ಯೆಯಾಗಿತ್ತು.

ಆದ್ರೀಗ, ಕಂದಾಯ ಇಲಾಖೆ ಒತ್ತುವರಿಗೊಂದು ಫುಲ್ಸ್ಟಾಪ್ ಇಡೋದಕ್ಕೆ ಮುಂದಾಗಿರೋದು ಒತ್ತುವರಿದಾರರ ನಿರಾಳತೆಗೆ ಕಾರಣವಾಗಿದೆ. 10 ಎಕರೆಯೊಳಗಿನ ಜಮೀನನ್ನ ಒತ್ತುವರಿ ಮಾಡಿರುವ ರೈತರಿಗೆ ಅದೇ ಜಮೀನನ್ನ ಗುತ್ತಿಗೆ ಆಧಾರದಲ್ಲಿ ನೀಡುವ ತೀರ್ಮಾನಕ್ಕೆ ಸರ್ಕಾರ ಬದ್ಧವಾಗಿದೆ ಎನ್ನಲಾಗಿದ್ದು, ಒತ್ತುವರಿದಾರರು ನಿಟ್ಟುಸಿರು ಬಿಡುವಂತಾಗಿದೆ. ಕೇರಳ ಮಾದರಿಯಲ್ಲೇ ಎಕರೆಗೆ ವಾರ್ಷಿಕ 3 ಸಾವಿರ ಶುಲ್ಕ ವಿಧಿಸಲು ಮುಂದಾಗಿರೋದು ಸರ್ಕಾರದ ಬೊಕ್ಕಸಕ್ಕೂ ಲಾಭ ತರಲಿದೆ ಎಂದು ಹೇಳಲಾಗ್ತಿದೆ. 

ಚಿಕ್ಕಮಗಳೂರು 45 ಸಾವಿರ, ಹಾಸನ 25 ಸಾವಿರ ಹೆಕ್ಟೇರ್ ಹಾಗೂ ಕೊಡಗಿನಲ್ಲೂ ಕೂಡ ಕಂದಾಯ ಭೂಮಿಯನ್ನ ರೈತರು ಒತ್ತುವರಿ ಮಾಡಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ರೈತರಿಗೆ ರಿಲೀಫ್ ಸಿಕ್ಕಿದಂತಾಗಿದೆ. ಆದರೆ, ಈ ಆಫರ್ ಅರಣ್ಯವನ್ನ ಒತ್ತುವರಿ ಮಾಡಿದವರಿಗೆ ಇಲ್ಲ. ಅರಣ್ಯ ಭೂಮಿಯನ್ನ ಒತ್ತುವರಿ ಮಾಡಿ ಕೃಷಿ ಮಾಡುತ್ತಿರುವವರ ಜಮೀನನ್ನ ತೆರವು ಮಾಡುವುದು ಅನಿವಾರ್ಯವಾಗಿದೆ. ಕಂದಾಯ ಭೂಮಿಯನ್ನ ಒತ್ತುವರಿ ಮಾಡಿದವರಿಗೆ ಲೀಸ್ ಸೌಲಭ್ಯ ಸಿಗಲಿದೆ. ಸರ್ಕಾರದ ಈ ಗುತ್ತಿಗೆ ಭೂಮಿ ಬಗ್ಗೆ ಜನನಾಯಕರು ಹೇಳಿಕೆ ಕೊಡ್ತಿದ್ದಾರೆ. ಆದರೆ, ಜಿಲ್ಲಾಧಿಕಾರಿ ಮಾತ್ರ ಈ ಬಗ್ಗೆ ಮಾಹಿತಿ ಬಿಟ್ಟುಕೊಡ್ತಿಲ್ಲ. ಈ ಕುರಿತು ಸರ್ಕಾರದ ಮಟ್ಟದಲ್ಲಿ ನಿರ್ಧಾರ ಆಗಿರಬಹುದು. ಸದ್ಯಕ್ಕೆ ನಮ್ಮ ಗಮನಕ್ಕೆ ಬಂದಿಲ್ಲ ಅಂತಾರೆ.

ಒಟ್ಟಾರೆ, ದಶಕಗಳಿಂದ ಒತ್ತುವರಿ ಮಾಡಿ ಬದುಕು ಕಟ್ಟಿಕೊಂಡಿದ್ದ ರೈತರು ಆತಂಕದಿಂದಲೇ ಜೀವಿಸುತ್ತಿದ್ದರು. ಆದ್ರೀಗ, ಸರ್ಕಾರದ ಈ ನಿರ್ಧಾರ ರೈತರಿಗೆ ಕೊಂಚ ರಿಲೀಫ್ ತಂದಿದೆ. ಏಪ್ರಿಲ್ 29ಕ್ಕೆ ಚಿಕ್ಕಮಗಳೂರಿಗೆ ಆಗಮಿಸುವ ಕಂದಾಯ ಸಚಿವರು ಅದೇ ದಿನ ಸರ್ಕಾರದ ಈ ಮಹಾತ್ವಾಕಾಂಕ್ಷೆಯ ಯೋಜನೆಯನ್ನ ಘೋಷಣೆ ಮಾಡುವುದು ಬಹುತೇಕ ಖಚಿತವಾಗಿದ್ದು, ಸರ್ಕಾರ ರೈತರಿಗೆ ಭೂಮಿಯನ್ನ ಲೀಸ್ ಕೊಡೋದು ಪಕ್ಕಾ ಆದಂತಾಗಿದೆ. ಕೊಡಲಿ ಅನ್ನೋದು ನಮ್ಮ ಉದ್ದೇಶ. ರೈತ ಚೆನ್ನಾಗಿದ್ರೆ ಎಲ್ಲರೂ ಚೆನ್ನಾಗಿರ್ತಾರೆ. 
 

23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
Read more