ಆಲಮಟ್ಟಿ ರಾಕ್ ಗಾರ್ಡನ್.. ಅಮಾವಾಸ್ಯೆ ದಿನ ತನ್ನಿಂದ ತಾನೇ ತೂಗಿದ ಜೋಕಾಲಿ!

ಆಲಮಟ್ಟಿ ರಾಕ್ ಗಾರ್ಡನ್.. ಅಮಾವಾಸ್ಯೆ ದಿನ ತನ್ನಿಂದ ತಾನೇ ತೂಗಿದ ಜೋಕಾಲಿ!

Published : Aug 31, 2019, 06:53 PM ISTUpdated : Aug 31, 2019, 06:56 PM IST

ಎಲ್ಲಿಂದ ಎಲ್ಲಿಗೆ ಸಂಬಂಧವೋ ಗೊತ್ತಿಲ್ಲ. ಆದರೆ ಈ ಘಟನೆ ಜನರಲ್ಲಿ ಒಂದು ಹಂತದ ಭಯ ಮೂಡಿಸಿರುವುದೆಂತೂ ಸುಳ್ಳಲ್ಲ. ಶುಕ್ರವಾರ ಅಮಾವಾಸ್ಯೆಯ ದಿನ ಸಂಜೆ ಜೋಕಾಲಿಗಳೆರಡು ತನ್ನಿಂದ ತಾನೆ ತೂಗಿಕೊಂಡು ಆಡುತ್ತಿರುವುದು ಭಯ ಮೂಡಿಸಿದೆ. ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿನ ರಾಕ್ ಗಾರ್ಡನ್ ನಲ್ಲಿ ಘಟನೆ ನಡೆದಿದೆ.

ಎಲ್ಲಿಂದ ಎಲ್ಲಿಗೆ ಸಂಬಂಧವೋ ಗೊತ್ತಿಲ್ಲ. ಆದರೆ ಈ ಘಟನೆ ಜನರಲ್ಲಿ ಒಂದು ಹಂತದ ಭಯ ಮೂಡಿಸಿರುವುದೆಂತೂ ಸುಳ್ಳಲ್ಲ. ಶುಕ್ರವಾರ ಅಮಾವಾಸ್ಯೆಯ ದಿನ ಸಂಜೆ ಜೋಕಾಲಿಗಳೆರಡು ತನ್ನಿಂದ ತಾನೆ ತೂಗಿಕೊಂಡು ಆಡುತ್ತಿರುವುದು ಭಯ ಮೂಡಿಸಿದೆ. ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿನ ರಾಕ್ ಗಾರ್ಡನ್ ನಲ್ಲಿ ಘಟನೆ ನಡೆದಿದೆ.

ನಿನ್ನೆ ಸಾಯಂಕಾಲ 6.30 ಗಂಟೆ ವೇಳೆಗೆ ರಾಕ್ ಗಾರ್ಡನ್ ನಲ್ಲಿನ ಎಂಟು ಜೋಕಾಲಿಗಳಲ್ಲಿ ಕೇವಲ ಎರಡು ಜೋಕಾಲಿಗಳು ಮಾತ್ರ ತನ್ನಿಂದ ತಾನೇ ತೂಗಾಡಿವೆ. ಜೋಕಾಲಿಯಲ್ಲಿ ಒಬ್ಬರು ಕುಳಿತು ಮತ್ತೊಬ್ಬರು ತೂಗಿದಾಗ ಹೇಗೆ ಅಲುಗಾಡುತ್ತವೋ ಹಾಗೆ ಆಗಿದೆ. ಸುಮಾರು ಎರಡ್ಮೂರು ನಿಮಿಷಗಳ ವರೆಗೆ ಹೀಗೆ ಜೋಕಾಲಿಗಳು ತೂಗಿವೆ.

ಎಂಟರಲ್ಲಿ ಕೇವಲ ಎರಡು ಜೋಕಾಲಿಗಳು ಮಾತ್ರ ತೂಗಿದ್ದು, ಇನ್ನುಳಿದವುಗಳು ಅಲುಗಾಡಿಲ್ಲ. ಗಾಳಿಗೆ ಜೋಕಾಲಿಗಳು ತೂಗಿದ್ರೆ ಎಲ್ಲವೂ ಅಲುಗಾಡಬೇಕಿತ್ತು ಎಂಬುದು ಯೋಚಿಸಬೇಕಾದ ಅಂಶ. ಇನ್ನು ಗಾರ್ಡನ್ ನಲ್ಲಿ ಅಂಗಡಿ ಇಟ್ಟುಕೊಂಡಿದ್ದ ಮಂಜುನಾಥ ಎಂಬುವವರು ನಿನ್ನೆ ಸಂಜೆ ಅಂಗಡಿ ಬಂದ್ ಮಾಡಿಕೊಂಡು ಬರುತ್ತಿದ್ದ ವೇಳೆ ಯಾರೂ ಇಲ್ಲದೆ ಜೋಕಾಲಿಗಳು ತೂಗುತ್ತಿರುವುದನ್ನು ಕಂಡು ತಮ್ಮ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.

ನಂತರ ಭಯಬಿದ್ದು ಅವರು ಸಹ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಕಬ್ಬಿಣ ಸರಳಿನಿಂದ ತಯಾರಾದ ಮಣಭಾರದ ಜೋಕಾಲಿಗಳು ಹೀಗೆ ಮನುಷ್ಯರು ಇಲ್ಲದೆ ತೂಗುತ್ತಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಇದನ್ನು ನೋಡಿದ ಕೆಲವರು ನಿನ್ನೆ ಅಮಾವಾಸ್ಯೆ ಆಗಿದ್ದು ಇದು ನಿಗೂಢ ಶಕ್ತಿಗಳ ಆಟ ಇರಬಹುದು ಎಂದರೆ,,,ಇನ್ನು ಕೆಲವರು ಯಾರೂ ಹೀಗೆ ಜೋಕಾಲಿಗಳನ್ನು ತೂಗಿ ಬಳಿಕ ವಿಡಿಯೋ ಮಾಡಿರಬಹುದು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಜೋಕಾಲಿಗಳ ತೂಗೂಯ್ಯಾಲೆ ಅಸಲಿ ಸತ್ಯದ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.

03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!