ಆಲಮಟ್ಟಿ ರಾಕ್ ಗಾರ್ಡನ್.. ಅಮಾವಾಸ್ಯೆ ದಿನ ತನ್ನಿಂದ ತಾನೇ ತೂಗಿದ ಜೋಕಾಲಿ!

ಆಲಮಟ್ಟಿ ರಾಕ್ ಗಾರ್ಡನ್.. ಅಮಾವಾಸ್ಯೆ ದಿನ ತನ್ನಿಂದ ತಾನೇ ತೂಗಿದ ಜೋಕಾಲಿ!

Published : Aug 31, 2019, 06:53 PM ISTUpdated : Aug 31, 2019, 06:56 PM IST

ಎಲ್ಲಿಂದ ಎಲ್ಲಿಗೆ ಸಂಬಂಧವೋ ಗೊತ್ತಿಲ್ಲ. ಆದರೆ ಈ ಘಟನೆ ಜನರಲ್ಲಿ ಒಂದು ಹಂತದ ಭಯ ಮೂಡಿಸಿರುವುದೆಂತೂ ಸುಳ್ಳಲ್ಲ. ಶುಕ್ರವಾರ ಅಮಾವಾಸ್ಯೆಯ ದಿನ ಸಂಜೆ ಜೋಕಾಲಿಗಳೆರಡು ತನ್ನಿಂದ ತಾನೆ ತೂಗಿಕೊಂಡು ಆಡುತ್ತಿರುವುದು ಭಯ ಮೂಡಿಸಿದೆ. ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿನ ರಾಕ್ ಗಾರ್ಡನ್ ನಲ್ಲಿ ಘಟನೆ ನಡೆದಿದೆ.

ಎಲ್ಲಿಂದ ಎಲ್ಲಿಗೆ ಸಂಬಂಧವೋ ಗೊತ್ತಿಲ್ಲ. ಆದರೆ ಈ ಘಟನೆ ಜನರಲ್ಲಿ ಒಂದು ಹಂತದ ಭಯ ಮೂಡಿಸಿರುವುದೆಂತೂ ಸುಳ್ಳಲ್ಲ. ಶುಕ್ರವಾರ ಅಮಾವಾಸ್ಯೆಯ ದಿನ ಸಂಜೆ ಜೋಕಾಲಿಗಳೆರಡು ತನ್ನಿಂದ ತಾನೆ ತೂಗಿಕೊಂಡು ಆಡುತ್ತಿರುವುದು ಭಯ ಮೂಡಿಸಿದೆ. ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿನ ರಾಕ್ ಗಾರ್ಡನ್ ನಲ್ಲಿ ಘಟನೆ ನಡೆದಿದೆ.

ನಿನ್ನೆ ಸಾಯಂಕಾಲ 6.30 ಗಂಟೆ ವೇಳೆಗೆ ರಾಕ್ ಗಾರ್ಡನ್ ನಲ್ಲಿನ ಎಂಟು ಜೋಕಾಲಿಗಳಲ್ಲಿ ಕೇವಲ ಎರಡು ಜೋಕಾಲಿಗಳು ಮಾತ್ರ ತನ್ನಿಂದ ತಾನೇ ತೂಗಾಡಿವೆ. ಜೋಕಾಲಿಯಲ್ಲಿ ಒಬ್ಬರು ಕುಳಿತು ಮತ್ತೊಬ್ಬರು ತೂಗಿದಾಗ ಹೇಗೆ ಅಲುಗಾಡುತ್ತವೋ ಹಾಗೆ ಆಗಿದೆ. ಸುಮಾರು ಎರಡ್ಮೂರು ನಿಮಿಷಗಳ ವರೆಗೆ ಹೀಗೆ ಜೋಕಾಲಿಗಳು ತೂಗಿವೆ.

ಎಂಟರಲ್ಲಿ ಕೇವಲ ಎರಡು ಜೋಕಾಲಿಗಳು ಮಾತ್ರ ತೂಗಿದ್ದು, ಇನ್ನುಳಿದವುಗಳು ಅಲುಗಾಡಿಲ್ಲ. ಗಾಳಿಗೆ ಜೋಕಾಲಿಗಳು ತೂಗಿದ್ರೆ ಎಲ್ಲವೂ ಅಲುಗಾಡಬೇಕಿತ್ತು ಎಂಬುದು ಯೋಚಿಸಬೇಕಾದ ಅಂಶ. ಇನ್ನು ಗಾರ್ಡನ್ ನಲ್ಲಿ ಅಂಗಡಿ ಇಟ್ಟುಕೊಂಡಿದ್ದ ಮಂಜುನಾಥ ಎಂಬುವವರು ನಿನ್ನೆ ಸಂಜೆ ಅಂಗಡಿ ಬಂದ್ ಮಾಡಿಕೊಂಡು ಬರುತ್ತಿದ್ದ ವೇಳೆ ಯಾರೂ ಇಲ್ಲದೆ ಜೋಕಾಲಿಗಳು ತೂಗುತ್ತಿರುವುದನ್ನು ಕಂಡು ತಮ್ಮ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.

ನಂತರ ಭಯಬಿದ್ದು ಅವರು ಸಹ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಕಬ್ಬಿಣ ಸರಳಿನಿಂದ ತಯಾರಾದ ಮಣಭಾರದ ಜೋಕಾಲಿಗಳು ಹೀಗೆ ಮನುಷ್ಯರು ಇಲ್ಲದೆ ತೂಗುತ್ತಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಇದನ್ನು ನೋಡಿದ ಕೆಲವರು ನಿನ್ನೆ ಅಮಾವಾಸ್ಯೆ ಆಗಿದ್ದು ಇದು ನಿಗೂಢ ಶಕ್ತಿಗಳ ಆಟ ಇರಬಹುದು ಎಂದರೆ,,,ಇನ್ನು ಕೆಲವರು ಯಾರೂ ಹೀಗೆ ಜೋಕಾಲಿಗಳನ್ನು ತೂಗಿ ಬಳಿಕ ವಿಡಿಯೋ ಮಾಡಿರಬಹುದು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಜೋಕಾಲಿಗಳ ತೂಗೂಯ್ಯಾಲೆ ಅಸಲಿ ಸತ್ಯದ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!