ಅನುಮತಿ ಕೊಟ್ರೂ‌ ಬಳ್ಳಾರಿಗೆ ಬಾರದ ಜನಾರ್ದನ ರೆಡ್ಡಿ..!

Aug 20, 2021, 10:41 AM IST

ಬಳ್ಳಾರಿ(ಆ.20):  ಸುಪ್ರೀಂಕೋರ್ಟ್ ಅನುಮತಿ ಕೊಟ್ರೂ‌ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿಗಿಂದು‌ ಬರುತ್ತಿಲ್ಲ. ಹೌದು, ಐದು ವರ್ಷಗಳ ವನವಾಸ ಅನುಭವಿಸಿರುವ ಜನಾರ್ದನ ರೆಡ್ಡಿ ಒಳ್ಳೆಯ ಮೂಹೂರ್ತ ಸ್ವಾಮೀಜಿಗಳ ಜೊತೆ ಸಮಾಲೋಚನೆ ಮಾಡಿದ ಬಳಿಕ ಬಳ್ಳಾರಿಗೆ ಬರುತ್ತಾರಂತೆ. ಹೀಗಾಗಿ ಈ ವರ್ಷವೂ ಜನಾರ್ದನ ರೆಡ್ಡಿ ‌ನಿವಾಸದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದ ವಾತಾವರಣವಿಲ್ಲ. ಜನಾರ್ದನ ಇವತ್ತು ಬಳ್ಳಾರಿಗೆ ಬಂದೇ ಬರುತ್ತಾರೆ ಎನ್ನುವ ನಿರೀಕ್ಷೆ ನಿರೀಕ್ಷೆಯಾಗಿಯೇ ಉಳಿದಿದೆ. ಜನಾರ್ದನ ರೆಡ್ಡಿ ‌ನೋಡಬೇಕೆನ್ನುವ ಅಭಿಮಾನಿಗಳ ಕಾತರ ಇವತ್ತೂ ಕೂಡ ಹುಸಿಯಾಗಿದೆ. ಸದ್ಯ ಯಾವುದೇ ರಾಜಕೀಯ ‌ಚಟುವಟಿಕೆ ಮಾಡದಿರಲು‌‌ ನಿರ್ಧಾರ ಮಾಡಿರೋ ರೆಡ್ಡಿ ಸದ್ಯ ಕುಟುಂಬದ ಜೊತೆಗೆ ಕಾಲ ಕಳೆಯುತ್ತಾರೆ ಅಂತ ತಿಳಿದು ಬಂದಿದೆ. 

ವರಮಹಾಲಕ್ಷ್ಮೀ ಸಂಭ್ರಮದಲ್ಲಿ ಕೊರೋನಾ ಮರೆತ ಜನ : ಬಿತ್ತು ದಂಡ