ಸಿದ್ದರಾಮಯ್ಯ ನೇತೃತ್ವದಲ್ಲಿ 'ಹಿಂದ' ಹೋರಾಟ: ಜಾರಕಿಹೊಳಿ ಪ್ರತಿಕ್ರಿಯೆ

Feb 9, 2021, 3:22 PM IST

ದಾವಣಗೆರೆ(ಫೆ.09):  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ 'ಹಿಂದ' ಹೋರಾಟ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಕುರುಬರ ಎಸ್‌ಟಿ ಹೋರಾಟವೇ ಬೇರೆ, ಸಿದ್ದರಾಮಯ್ಯ ಅವರ 'ಅಹಿಂದ' ಹೋರಾಟವೇ ಬೇರೆ ಎಂದು ಹೇಳಿದ್ದಾರೆ. 

ಮೀಸಲಾತಿ ಕಗ್ಗಂಟಿನಿಂದ ಪಾರಾಗ್ತಾರಾ ಸಿಎಂ ಬಿಎಸ್‌ವೈ?

ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಈಗಾಗಲೇ ಅಹಿಂದ ಹೋರಾಟದಲ್ಲಿ ಗುರುತಿಸಿಕೊಂಡಿದ್ದಾರೆ. ಹೊಸದಾಗಿ ಹಿಂದ ಹೋರಾಟದ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.