ಮಾಜಿ ಸಿಎಂ ಯಡಿಯೂರಪ್ಪ ಆಪ್ತನಿಗೆ ಐಟಿ ಶಾಕ್‌..!

Oct 7, 2021, 11:44 AM IST

ಬೆಂಗಳೂರು(ಅ.07): ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಆಪ್ತ ಉಮೇಶ್‌ ಮನೆ, ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ಇಂದು(ಗುರುವಾರ) ದಾಳಿ ನಡೆಸಿದ್ದಾರೆ. ನಗರದ ರಾಮಮಂದಿರದಲ್ಲಿರವ ಉಮೇಶ್‌ ಮನೆ ಮೇಲೆ ಐಟಿ ದಾಳಿ ನಡೆಸಲಾಗಿದೆ. ಉಮೇಶ್‌ ವಿರುದ್ಧ ತೆರಿಗೆ ವಂಚನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಈ ದಾಳಿಯಾಗಿದೆ. ಈ ಮೂಲಕ ಬಿಎಸ್‌ವೈ ಆಪ್ತ ಸಹಾಯಕನಿಗೆ ಐಟಿ ಬಿಗ್ ಶಾಕ್‌ ನೀಡಿದೆ. ಉಮೇಶ್‌ಗೆ ಸೇರಿದ ನಾಲ್ಕು ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಎಸ್‌ವೈ ಆಪ್ತ ಉಮೇಶ್‌ ಶಿವಮೊಗ್ಗ ಜಿಲ್ಲೆಯ ಆಯನೂರು ಮೂಲದವರು ಎಂದು ತಿಳಿದು ಬಂದಿದೆ.  

ಬೆಂಗಳೂರಿನ ಇತಿಹಾಸದಲ್ಲೇ ಅತೀ ದೊಡ್ಡ ಐಟಿ ಬೇಟೆ: ಏಕಕಾಲದಲ್ಲಿ 50 ಕಡೆ ದಾಳಿ!