ಆ ಮನೆಯಲ್ಲಿ ನಾಳೆ ಮದುವೆ ಸಂಭ್ರಮ, ಮದುವೆಗಾಗಿ ಸೀರೆ, ಒಡವೆ ಎಲ್ಲವನ್ನೂ ಖರೀದಿ ಮಾಡಲಾಗಿತ್ತು, ಲಗ್ನಪತ್ರಿಕೆ ಹಂಚಿಯಾಗಿತ್ತು. ಇಷ್ಟಪಟ್ಟ ಹುಡುಗನ ಜೊತೆ ಮದುವೆಯೂ ನಡೆಯಬೇಕಿತ್ತು. ಆದರೆ ಆಗಿದ್ದೇ ಬೇರೆ.
ಬೆಂಗಳೂರು (ಜ. 24): ಆ ಮನೆಯಲ್ಲಿ ನಾಳೆ ಮದುವೆ ಸಂಭ್ರಮ, ಮದುವೆಗಾಗಿ ಸೀರೆ, ಒಡವೆ ಎಲ್ಲವನ್ನೂ ಖರೀದಿ ಮಾಡಲಾಗಿತ್ತು, ಲಗ್ನಪತ್ರಿಕೆ ಹಂಚಿಯಾಗಿತ್ತು. ಇಷ್ಟಪಟ್ಟ ಹುಡುಗನ ಜೊತೆ ಮದುವೆಯೂ ನಡೆಯಬೇಕಿತ್ತು. ಆದರೆ ಆಗಿದ್ದೇ ಬೇರೆ.
ಹಾಸನ ಜಿಲ್ಲೆಯ ಅರಕೆರೆ ಗ್ರಾಮದಲ್ಲಿ ಬಲವಂತದ ಮದುವೆ ನಡೆದಿದೆ. ಯುವತಿ ಮದುವೆಯಾಗುತ್ತಿರುವ ವಿಚಾರ ತಿಳಿದು ಮಾಜಿ ಪ್ರೇಮಿ ಸತೀಶ್ ಆತ್ಮಹತ್ಯೆಗೆ ಯತ್ನಿಸಿದ್ದ. ಸ್ನೇಹಿತರ ಜೊತೆ ಯುವತಿಯ ಮನೆಗೆ ಬಂದು ಬಲವಂತವಾಗಿ ತಾಳಿ ಕಟ್ಟಿದ್ದಾನೆ. ಯುವತಿಯ ರಕ್ಷಣೆ ಕೋರಿ, ಪೋಷಕರು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ.