Chikkamagaluru: ಭರವಸೆ ಮರೆತ ಸಚಿವರು, ಮನೆ ಕಳೆದುಕೊಂಡವರಿಗೆ ಮೂರು ವರ್ಷವಾದ್ರೂ ಮನೆ ಇಲ್ಲ!

Chikkamagaluru: ಭರವಸೆ ಮರೆತ ಸಚಿವರು, ಮನೆ ಕಳೆದುಕೊಂಡವರಿಗೆ ಮೂರು ವರ್ಷವಾದ್ರೂ ಮನೆ ಇಲ್ಲ!

Published : Mar 07, 2022, 04:39 PM IST

 2019ರ ಮಹಾಮಳೆಯಲ್ಲಿ ಮನೆ-ಜಮೀನು ಸೇರಿದಂತೆ ತಮ್ಮ ಶತಮಾನದ ಬದುಕನ್ನೇ ಕಳೆದುಕೊಂಡ ಜನ. 2019ರಲ್ಲಿ ಮೂಡಿಗೆರೆ-ಕಳಸ ಸುತ್ತಮುತ್ತ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆ ಜನರಿಗೆ ನರಕ ತೋರಿಸಿತ್ತು. 

 2019ರ ಮಹಾಮಳೆಯಲ್ಲಿ ಮನೆ-ಜಮೀನು ಸೇರಿದಂತೆ ತಮ್ಮ ಶತಮಾನದ ಬದುಕನ್ನೇ ಕಳೆದುಕೊಂಡ ಜನ. 2019ರಲ್ಲಿ ಮೂಡಿಗೆರೆ-ಕಳಸ ಸುತ್ತಮುತ್ತ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆ ಜನರಿಗೆ ನರಕ ತೋರಿಸಿತ್ತು. ಇತಿಹಾಸದಲ್ಲೇ ಕಂಡು ಕೇಳರಿಯದ ಮಳೆ-ಪ್ರವಾಹ ಕಂಡ ಜನ ಉಟ್ಟ ಬಟ್ಟೆಯಲ್ಲಿ ಮನೆಯನ್ನ ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಿ ಜೀವ ಉಳಿಸಿಕೊಂಡಿದ್ದರು. 

ಮನೆ-ಜಮೀನುಗಳು ಕಣ್ಣೆದುರೇ ಕೊಚ್ಚಿ ಹೋಗಿದ್ವು. ಹತ್ತಾರು ಜನ ಪ್ರಾಣ ಕೂಡ ಕಳೆದುಕೊಂಡಿದ್ದರು. ಈ ವೇಳೆ ಮನೆ-ಜಮೀನು-ತಮ್ಮವರನ್ನ ಕಳೆದುಕೊಂಡು ಸಂತ್ರಸ್ತರಾದ ಜನರಿಗೆ ನಿಮ್ಮೊಂದಿಗೆ ನಾವು ಇದ್ದೇವೆ ಅನ್ನೋ ಭರವಸೆ-ವಿಶ್ವಾಸವನ್ನ ಸರ್ಕಾರ ತುಂಬಿತ್ತು. ಆದ್ರೆ, ಇದೀಗ ಬರೋಬ್ಬರಿ ಮೂರು ವರ್ಷವಾದ್ರು ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಸೂರು ಕಟ್ಟಿಸಿಕೊಡೋ ಕೆಲಸವನ್ನ ಸರ್ಕಾರ ಮಾಡಿಲ್ಲ. ಬಾಡಿಗೆ ಹಣವನ್ನೂ ನೀಡಿಲ್ಲ. ನಾಲ್ಕೈದು ಮಿನಿಸ್ಟ್ರು ಭೇಟಿ ನೀಡಿ ನಾವಿದ್ದೇವೆ., ನಾವಿದ್ದೇವೆ ಅಂದೋರು ಈಗ ಆ ಜನರನ್ನ ಮರೆತಿದ್ದಾರೆ. ಅವರೆಲ್ಲರೂ ಇದೀಗ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ವಿರುದ್ಧ ವಿಧಿಯಿಲ್ಲದೇ ಧಿಕ್ಕಾರ ಕೂಗುತ್ತಿದ್ದು, ದಯಾಮರಣ ಕೊಡಿ ಅಂತ ಸರ್ಕಾರಕ್ಕೆ ಮನವಿ ಸಲ್ಲಿಸುವಂತಾಗಿದೆ.

ಮಲೆನಾಡಲ್ಲಿ ಮಳೆ ಅಬ್ಬರ ಕಂಡು ಅಂದಿನ ಸಿಎಂ ಆಗಿದ್ದ ಯಡಿಯೂರಪ್ಪ ಸೇರಿದಂತೆ ದಿನಕ್ಕೊಬ್ಬರಂತೆ ಸಚಿವರು ಎರಡು ವಾರಗಳ ಕಾಲ ಚಿಕ್ಕಮಗಳೂರು ಪ್ರವಾಸ ಮಾಡಿ ಸಂತ್ರಸ್ತರಿಗೆ ಭರವಸೆ ನೀಡಿದ್ರು. ಸಚಿವ ಅಶೋಕ್,  ಮುಂದಿನ ಮಳೆಗಾಲಕ್ಕೆ ಹೊಸ ಮನೆ ಫಿಕ್ಸ್ ಅಂದಿದ್ರು. ಆದ್ರೆ ಸಿಎಂ-ಸಚಿವರ ಈ ಟ್ರಿಪ್, ಹೋದ ಪುಟ್ಟ-ಬಂದ ಪುಟ್ಟ ಎಂಬಂತಾಯ್ತೇ ವಿನಃ ಇಲ್ಲಿಯವರೆಗೂ ಸಂತ್ರಸ್ತರ ಜೀವನದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಸಂತ್ರಸ್ತರನ್ನ ಬಾಡಿಗೆ ಮನೆಯಲ್ಲಿರಲು ಹೇಳಿದ ಸರ್ಕಾರ, ಕೊನೆ ಪಕ್ಷ ಬಾಡಿಗೆ ಹಣವನ್ನ ಕೂಡ ನೀಡಿಲ್ಲ. ಬಾಡಿಗೆ ಹಣ ಕೊಡಿ, ಮನೆಯನ್ನ ಕಟ್ಟಿಸಿಕೊಡಿ ಅಂತ ಪರಿಪರಿಯಾಗಿ ಬೇಡಿಕೊಂಡರು ಜನಪ್ರತಿನಿಧಿಗಳು-ಅಧಿಕಾರಿಗಳು ಮಾತ್ರ ಕುಂಟು ನೆಪ ಹೇಳುತ್ತಾ ದಿನಗಳನ್ನ ದೂಡ್ತಿದ್ದಾರೆಯೇ ಹೊರತು ಸಮಸ್ಯೆಯನ್ನ ಪರಿಹಾರಿಸೋ ಗೋಜಿಗೆ ಹೋಗಿಲ್ಲ.
 

23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
24:04ಭೀಮಾತೀರದ ಮರ್ಡರ್​​ ರಹಸ್ಯ! : ಜಮೀನಿಗಾಗಿ ನಡೆದಿಲ್ಲ 6 ಜನರ ಕೊಲೆ, ಆ ದಂಧೆಯೇ ಕಾರಣವಂತೆ!
Read more