Chikkamagaluru: ಭರವಸೆ ಮರೆತ ಸಚಿವರು, ಮನೆ ಕಳೆದುಕೊಂಡವರಿಗೆ ಮೂರು ವರ್ಷವಾದ್ರೂ ಮನೆ ಇಲ್ಲ!

Chikkamagaluru: ಭರವಸೆ ಮರೆತ ಸಚಿವರು, ಮನೆ ಕಳೆದುಕೊಂಡವರಿಗೆ ಮೂರು ವರ್ಷವಾದ್ರೂ ಮನೆ ಇಲ್ಲ!

Published : Mar 07, 2022, 04:39 PM IST

 2019ರ ಮಹಾಮಳೆಯಲ್ಲಿ ಮನೆ-ಜಮೀನು ಸೇರಿದಂತೆ ತಮ್ಮ ಶತಮಾನದ ಬದುಕನ್ನೇ ಕಳೆದುಕೊಂಡ ಜನ. 2019ರಲ್ಲಿ ಮೂಡಿಗೆರೆ-ಕಳಸ ಸುತ್ತಮುತ್ತ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆ ಜನರಿಗೆ ನರಕ ತೋರಿಸಿತ್ತು. 

 2019ರ ಮಹಾಮಳೆಯಲ್ಲಿ ಮನೆ-ಜಮೀನು ಸೇರಿದಂತೆ ತಮ್ಮ ಶತಮಾನದ ಬದುಕನ್ನೇ ಕಳೆದುಕೊಂಡ ಜನ. 2019ರಲ್ಲಿ ಮೂಡಿಗೆರೆ-ಕಳಸ ಸುತ್ತಮುತ್ತ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆ ಜನರಿಗೆ ನರಕ ತೋರಿಸಿತ್ತು. ಇತಿಹಾಸದಲ್ಲೇ ಕಂಡು ಕೇಳರಿಯದ ಮಳೆ-ಪ್ರವಾಹ ಕಂಡ ಜನ ಉಟ್ಟ ಬಟ್ಟೆಯಲ್ಲಿ ಮನೆಯನ್ನ ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಿ ಜೀವ ಉಳಿಸಿಕೊಂಡಿದ್ದರು. 

ಮನೆ-ಜಮೀನುಗಳು ಕಣ್ಣೆದುರೇ ಕೊಚ್ಚಿ ಹೋಗಿದ್ವು. ಹತ್ತಾರು ಜನ ಪ್ರಾಣ ಕೂಡ ಕಳೆದುಕೊಂಡಿದ್ದರು. ಈ ವೇಳೆ ಮನೆ-ಜಮೀನು-ತಮ್ಮವರನ್ನ ಕಳೆದುಕೊಂಡು ಸಂತ್ರಸ್ತರಾದ ಜನರಿಗೆ ನಿಮ್ಮೊಂದಿಗೆ ನಾವು ಇದ್ದೇವೆ ಅನ್ನೋ ಭರವಸೆ-ವಿಶ್ವಾಸವನ್ನ ಸರ್ಕಾರ ತುಂಬಿತ್ತು. ಆದ್ರೆ, ಇದೀಗ ಬರೋಬ್ಬರಿ ಮೂರು ವರ್ಷವಾದ್ರು ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಸೂರು ಕಟ್ಟಿಸಿಕೊಡೋ ಕೆಲಸವನ್ನ ಸರ್ಕಾರ ಮಾಡಿಲ್ಲ. ಬಾಡಿಗೆ ಹಣವನ್ನೂ ನೀಡಿಲ್ಲ. ನಾಲ್ಕೈದು ಮಿನಿಸ್ಟ್ರು ಭೇಟಿ ನೀಡಿ ನಾವಿದ್ದೇವೆ., ನಾವಿದ್ದೇವೆ ಅಂದೋರು ಈಗ ಆ ಜನರನ್ನ ಮರೆತಿದ್ದಾರೆ. ಅವರೆಲ್ಲರೂ ಇದೀಗ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ವಿರುದ್ಧ ವಿಧಿಯಿಲ್ಲದೇ ಧಿಕ್ಕಾರ ಕೂಗುತ್ತಿದ್ದು, ದಯಾಮರಣ ಕೊಡಿ ಅಂತ ಸರ್ಕಾರಕ್ಕೆ ಮನವಿ ಸಲ್ಲಿಸುವಂತಾಗಿದೆ.

ಮಲೆನಾಡಲ್ಲಿ ಮಳೆ ಅಬ್ಬರ ಕಂಡು ಅಂದಿನ ಸಿಎಂ ಆಗಿದ್ದ ಯಡಿಯೂರಪ್ಪ ಸೇರಿದಂತೆ ದಿನಕ್ಕೊಬ್ಬರಂತೆ ಸಚಿವರು ಎರಡು ವಾರಗಳ ಕಾಲ ಚಿಕ್ಕಮಗಳೂರು ಪ್ರವಾಸ ಮಾಡಿ ಸಂತ್ರಸ್ತರಿಗೆ ಭರವಸೆ ನೀಡಿದ್ರು. ಸಚಿವ ಅಶೋಕ್,  ಮುಂದಿನ ಮಳೆಗಾಲಕ್ಕೆ ಹೊಸ ಮನೆ ಫಿಕ್ಸ್ ಅಂದಿದ್ರು. ಆದ್ರೆ ಸಿಎಂ-ಸಚಿವರ ಈ ಟ್ರಿಪ್, ಹೋದ ಪುಟ್ಟ-ಬಂದ ಪುಟ್ಟ ಎಂಬಂತಾಯ್ತೇ ವಿನಃ ಇಲ್ಲಿಯವರೆಗೂ ಸಂತ್ರಸ್ತರ ಜೀವನದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಸಂತ್ರಸ್ತರನ್ನ ಬಾಡಿಗೆ ಮನೆಯಲ್ಲಿರಲು ಹೇಳಿದ ಸರ್ಕಾರ, ಕೊನೆ ಪಕ್ಷ ಬಾಡಿಗೆ ಹಣವನ್ನ ಕೂಡ ನೀಡಿಲ್ಲ. ಬಾಡಿಗೆ ಹಣ ಕೊಡಿ, ಮನೆಯನ್ನ ಕಟ್ಟಿಸಿಕೊಡಿ ಅಂತ ಪರಿಪರಿಯಾಗಿ ಬೇಡಿಕೊಂಡರು ಜನಪ್ರತಿನಿಧಿಗಳು-ಅಧಿಕಾರಿಗಳು ಮಾತ್ರ ಕುಂಟು ನೆಪ ಹೇಳುತ್ತಾ ದಿನಗಳನ್ನ ದೂಡ್ತಿದ್ದಾರೆಯೇ ಹೊರತು ಸಮಸ್ಯೆಯನ್ನ ಪರಿಹಾರಿಸೋ ಗೋಜಿಗೆ ಹೋಗಿಲ್ಲ.
 

23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
24:50ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ
23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more