Chikkamagaluru: ಭರವಸೆ ಮರೆತ ಸಚಿವರು, ಮನೆ ಕಳೆದುಕೊಂಡವರಿಗೆ ಮೂರು ವರ್ಷವಾದ್ರೂ ಮನೆ ಇಲ್ಲ!

Chikkamagaluru: ಭರವಸೆ ಮರೆತ ಸಚಿವರು, ಮನೆ ಕಳೆದುಕೊಂಡವರಿಗೆ ಮೂರು ವರ್ಷವಾದ್ರೂ ಮನೆ ಇಲ್ಲ!

Published : Mar 07, 2022, 04:39 PM IST

 2019ರ ಮಹಾಮಳೆಯಲ್ಲಿ ಮನೆ-ಜಮೀನು ಸೇರಿದಂತೆ ತಮ್ಮ ಶತಮಾನದ ಬದುಕನ್ನೇ ಕಳೆದುಕೊಂಡ ಜನ. 2019ರಲ್ಲಿ ಮೂಡಿಗೆರೆ-ಕಳಸ ಸುತ್ತಮುತ್ತ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆ ಜನರಿಗೆ ನರಕ ತೋರಿಸಿತ್ತು. 

 2019ರ ಮಹಾಮಳೆಯಲ್ಲಿ ಮನೆ-ಜಮೀನು ಸೇರಿದಂತೆ ತಮ್ಮ ಶತಮಾನದ ಬದುಕನ್ನೇ ಕಳೆದುಕೊಂಡ ಜನ. 2019ರಲ್ಲಿ ಮೂಡಿಗೆರೆ-ಕಳಸ ಸುತ್ತಮುತ್ತ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆ ಜನರಿಗೆ ನರಕ ತೋರಿಸಿತ್ತು. ಇತಿಹಾಸದಲ್ಲೇ ಕಂಡು ಕೇಳರಿಯದ ಮಳೆ-ಪ್ರವಾಹ ಕಂಡ ಜನ ಉಟ್ಟ ಬಟ್ಟೆಯಲ್ಲಿ ಮನೆಯನ್ನ ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಿ ಜೀವ ಉಳಿಸಿಕೊಂಡಿದ್ದರು. 

ಮನೆ-ಜಮೀನುಗಳು ಕಣ್ಣೆದುರೇ ಕೊಚ್ಚಿ ಹೋಗಿದ್ವು. ಹತ್ತಾರು ಜನ ಪ್ರಾಣ ಕೂಡ ಕಳೆದುಕೊಂಡಿದ್ದರು. ಈ ವೇಳೆ ಮನೆ-ಜಮೀನು-ತಮ್ಮವರನ್ನ ಕಳೆದುಕೊಂಡು ಸಂತ್ರಸ್ತರಾದ ಜನರಿಗೆ ನಿಮ್ಮೊಂದಿಗೆ ನಾವು ಇದ್ದೇವೆ ಅನ್ನೋ ಭರವಸೆ-ವಿಶ್ವಾಸವನ್ನ ಸರ್ಕಾರ ತುಂಬಿತ್ತು. ಆದ್ರೆ, ಇದೀಗ ಬರೋಬ್ಬರಿ ಮೂರು ವರ್ಷವಾದ್ರು ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಸೂರು ಕಟ್ಟಿಸಿಕೊಡೋ ಕೆಲಸವನ್ನ ಸರ್ಕಾರ ಮಾಡಿಲ್ಲ. ಬಾಡಿಗೆ ಹಣವನ್ನೂ ನೀಡಿಲ್ಲ. ನಾಲ್ಕೈದು ಮಿನಿಸ್ಟ್ರು ಭೇಟಿ ನೀಡಿ ನಾವಿದ್ದೇವೆ., ನಾವಿದ್ದೇವೆ ಅಂದೋರು ಈಗ ಆ ಜನರನ್ನ ಮರೆತಿದ್ದಾರೆ. ಅವರೆಲ್ಲರೂ ಇದೀಗ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ವಿರುದ್ಧ ವಿಧಿಯಿಲ್ಲದೇ ಧಿಕ್ಕಾರ ಕೂಗುತ್ತಿದ್ದು, ದಯಾಮರಣ ಕೊಡಿ ಅಂತ ಸರ್ಕಾರಕ್ಕೆ ಮನವಿ ಸಲ್ಲಿಸುವಂತಾಗಿದೆ.

ಮಲೆನಾಡಲ್ಲಿ ಮಳೆ ಅಬ್ಬರ ಕಂಡು ಅಂದಿನ ಸಿಎಂ ಆಗಿದ್ದ ಯಡಿಯೂರಪ್ಪ ಸೇರಿದಂತೆ ದಿನಕ್ಕೊಬ್ಬರಂತೆ ಸಚಿವರು ಎರಡು ವಾರಗಳ ಕಾಲ ಚಿಕ್ಕಮಗಳೂರು ಪ್ರವಾಸ ಮಾಡಿ ಸಂತ್ರಸ್ತರಿಗೆ ಭರವಸೆ ನೀಡಿದ್ರು. ಸಚಿವ ಅಶೋಕ್,  ಮುಂದಿನ ಮಳೆಗಾಲಕ್ಕೆ ಹೊಸ ಮನೆ ಫಿಕ್ಸ್ ಅಂದಿದ್ರು. ಆದ್ರೆ ಸಿಎಂ-ಸಚಿವರ ಈ ಟ್ರಿಪ್, ಹೋದ ಪುಟ್ಟ-ಬಂದ ಪುಟ್ಟ ಎಂಬಂತಾಯ್ತೇ ವಿನಃ ಇಲ್ಲಿಯವರೆಗೂ ಸಂತ್ರಸ್ತರ ಜೀವನದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಸಂತ್ರಸ್ತರನ್ನ ಬಾಡಿಗೆ ಮನೆಯಲ್ಲಿರಲು ಹೇಳಿದ ಸರ್ಕಾರ, ಕೊನೆ ಪಕ್ಷ ಬಾಡಿಗೆ ಹಣವನ್ನ ಕೂಡ ನೀಡಿಲ್ಲ. ಬಾಡಿಗೆ ಹಣ ಕೊಡಿ, ಮನೆಯನ್ನ ಕಟ್ಟಿಸಿಕೊಡಿ ಅಂತ ಪರಿಪರಿಯಾಗಿ ಬೇಡಿಕೊಂಡರು ಜನಪ್ರತಿನಿಧಿಗಳು-ಅಧಿಕಾರಿಗಳು ಮಾತ್ರ ಕುಂಟು ನೆಪ ಹೇಳುತ್ತಾ ದಿನಗಳನ್ನ ದೂಡ್ತಿದ್ದಾರೆಯೇ ಹೊರತು ಸಮಸ್ಯೆಯನ್ನ ಪರಿಹಾರಿಸೋ ಗೋಜಿಗೆ ಹೋಗಿಲ್ಲ.
 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more