ಮೈಸೂರು: ನೆರೆಯಿಂದ ಆಸ್ತಿ ಹೋಯ್ತು, ಆದ್ರೆ ಜಾತಿ ಹೋಗಿಲ್ಲ

Aug 13, 2019, 4:27 PM IST

ಕಪಿಲಾ ನದಿ ಪ್ರವಾಹದಲ್ಲಿ ಭೊಕ್ಕಳ್ಳಿ ಗ್ರಾಮದ ಸುಮಾರು 90 ಮನೆಗಳಿಗೆ ನೀರು ನುಗ್ಗಿತ್ತು. 500 ರಷ್ಟು ಮಂದಿ ಗ್ರಾಮದ ಜನ ನಿರಾಶ್ರಿತರಾಗಿದ್ದರು. ಅವರೆಲ್ಲ ಒಂದೇ ಗ್ರಾಮದವರಾದರೂ ಎರಡು ಕಡೆಗಳಲ್ಲಿ ಆಶ್ರಯ ನೀಡಲಾಗಿದೆ. ಎರೆಡೆರಡು ಕಡೆಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ನಾಯಕ ಜನಾಂಗದ ಜನ ದಲಿತ ಜನಾಂಗದ ಜನರ ಜೊತೆ ಬೆರೆಯೋದಿಲ್ಲ ಎನ್ನುವ ಕಾರಣಕ್ಕೆಈ ವ್ಯವಸ್ಥೆ ಮಾಡಲಾಗಿದೆ.