ಚಿಕ್ಕಮಗಳೂರು: ಹೆಣ ಹೂಳುವ ವಿಚಾರಕ್ಕೆ ಒಕ್ಕಲಿಗರು - ದಲಿತರ ನಡುವೆ ಗಲಾಟೆ

ಚಿಕ್ಕಮಗಳೂರು: ಹೆಣ ಹೂಳುವ ವಿಚಾರಕ್ಕೆ ಒಕ್ಕಲಿಗರು - ದಲಿತರ ನಡುವೆ ಗಲಾಟೆ

Published : Dec 07, 2024, 11:44 AM ISTUpdated : Dec 07, 2024, 11:46 AM IST

ವಿವಾದಿತ ಜಾಗ ನ್ಯಾಯಾಲಯದಲ್ಲಿ ಇದೆ ಎಂದು ಒಕ್ಕಲಿಗರ ವಾದಿಸಿದ್ದಾರೆ. ಗುಂಡಿಗೆ ಇಳಿದ ಒಕ್ಕಲಿಗ ಮಹಿಳೆ ಶವ ಹೂಳಲು ಬಿಟ್ಟಿಲ್ಲ. ಇದಕ್ಕೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪೂರ್ಣಿಮಾ ಶ್ರೀನಿವಾಸ್ ವಿರೋಧ ವ್ಯಕ್ತಪಡಿಸಿದ್ದಾರೆ. ಮೂರ್ನಾಲ್ಕು ಮಹಿಳೆಯರು ಗುಂಡಿಯೊಳಗೆ ಇಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 

ಚಿಕ್ಕಮಗಳೂರು(ಡಿ.07): ಕಾಫಿನಾಡಲ್ಲಿ ಒಕ್ಕಲಿಗರು ವರ್ಸಸ್ ದಲಿತರ ಮಧ್ಯೆ ಗಲಾಟೆ ನಡೆದಿದೆ. ಹೆಣ ಹೂಳುವ ವಿಚಾರಕ್ಕೆ ಇಬ್ಬರ ಮಧ್ಯ ಗಲಾಟೆ ನಡೆದಿದ್ದು, ಶವ ಹೂಳುವ ಗುಂಡಿಗೆ ಇಳಿದು ಒಕ್ಕಲಿಗ ಮಹಿಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಒಕ್ಕಲಿಗರ ಸಮುದಾಯ ಭವನ, ದಲಿತರ ಮಧ್ಯೆ ಸ್ಮಶಾನದ ಜಾಗದ ವಿವಾದ ಇದೆ. ಹಲವು ದಶಕಗಳಿಂದ ಜಾಗದ ವಿವಾದ ಬೂದಿ ಮುಚ್ಚಿದ ಕೆಂಡದಂತಿತ್ತು. ಇಂದು ವಿವಾದಿತ ಜಾಗ ನಮ್ಮದೆಂದು ಶವ ಹೂಳಲು ದಲಿತರು ಹೋಗಿದ್ದರು. ಹೀಗಾಗಿ ಒಕ್ಕಲಿಗರ ಸಮುದಾಯ ಇದಕ್ಕೆ ತೀವ್ರ‌ ವಿರೋಧ ವ್ಯಕ್ತಪಡಿಸಿದೆ. 

ಭಾರತ ಗಡಿ ಮುಚ್ಚಿದರೆ ಪತನವಾಗೋದೇಕೆ ಬಾಂಗ್ಲಾ: ಮೌನವಾಗಿದ್ದ ಶೇಖ್ ಹಸೀನಾ ಸಿಡಿದೇಳೋಕೆ ಕಾರಣ ಯಾರು?

ವಿವಾದಿತ ಜಾಗ ನ್ಯಾಯಾಲಯದಲ್ಲಿ ಇದೆ ಎಂದು ಒಕ್ಕಲಿಗರ ವಾದಿಸಿದ್ದಾರೆ. ಗುಂಡಿಗೆ ಇಳಿದ ಒಕ್ಕಲಿಗ ಮಹಿಳೆ ಶವ ಹೂಳಲು ಬಿಟ್ಟಿಲ್ಲ. ಇದಕ್ಕೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪೂರ್ಣಿಮಾ ಶ್ರೀನಿವಾಸ್ ವಿರೋಧ ವ್ಯಕ್ತಪಡಿಸಿದ್ದಾರೆ. ಮೂರ್ನಾಲ್ಕು ಮಹಿಳೆಯರು ಗುಂಡಿಯೊಳಗೆ ಇಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ವೇಳೆ ಆಲ್ದೂರು ಪೊಲೀಸರು ಎಲ್ಲರನ್ನು ಎಳೆದು ಮೇಲೆ ಹಾಕಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾನವಾಗಿತ್ತು. ಹೀಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more