BIG3 ಕೋಟೆನಾಡಿನ ರೈತರಿಗೆ ಸಿಗದ ಹನಿ ನೀರಾವರಿ ಸಹಾಯ ಧನ..

Mar 21, 2023, 3:23 PM IST

ದೇವರು ವರ ಕೊಟ್ರೂ ಪೂಜಾರಿ ಕೊಡ್ಲಿಲ್ಲ ಎಂಬಂತಾಗಿದೆ ಚಿತ್ರದುರ್ಗ ರೈತರ ಸ್ಥಿತಿ. ಹನಿ ನೀರಾವರಿ ಯೋಜನೆಯಡಿ ಸಹಾಯ ಧನ ಸಿಗದೆ ಕೋಟೆನಾಡಿನ 150ಕ್ಕೂ ಹೆಚ್ಚು ರೈತರು ಕಂಗಾಲಾಗಿದ್ದಾರೆ. ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಸುತ್ತಮುತ್ತಲಿನ ಗ್ರಾಮದ ಸುಮಾರು 152 ರೈತರಿಗೆ ಹನಿ ನೀರಾವರಿ ಸಹಾಯಧನ ಬಂದಿಲ್ಲವಾಗಿದ್ದು, 2014-15 ರಲ್ಲಿ ಈ ಕುರಿತು ಅಭಿತ್ ಆಗ್ರೋ ಅಸೋಸಿಯೇಟ್ಸ್ ಏಜೆನ್ಸಿಯು ರೈತರು ನೀಡಿರುವ ದಾಖಲೆಗಳನ್ನು ತಪ್ಪದೆ ತೋಟಗಾರಿಕೆ ಇಲಾಖೆಗೆ ನೀಡಿದೆ. ಆದರೆ ಅಧಿಕಾರಿಗಳು ಮಾತ್ರ ನಮಗೆ ಯಾವ ಕಡತಗಳು ಬಂದಿಲ್ಲ ಹಾಗೆ, ಹೀಗೆ ಎಂದು ಉಡಾಫೆಯ ಉತ್ತರವನ್ನು ನೀಡುತ್ತಾ ರೈತರಿಗೆ ಅನ್ಯಾಯ ಮಾಡ್ತಿದ್ದಾರೆ.