ಬಯಲು ಸೀಮೆ ಸುಬ್ರಮಣ್ಯ ಸನ್ನಿಧಿಯಲ್ಲಿ ವಿಭಿನ್ನ ಆಚರಣೆ: ಬಾಲಕನಿಗೆ ತಲೆ ಬೋಳಿಸಿ ಕತ್ತೆ ಮೇಲೆ ಮೆರವಣಿಗೆ!

ಬಯಲು ಸೀಮೆ ಸುಬ್ರಮಣ್ಯ ಸನ್ನಿಧಿಯಲ್ಲಿ ವಿಭಿನ್ನ ಆಚರಣೆ: ಬಾಲಕನಿಗೆ ತಲೆ ಬೋಳಿಸಿ ಕತ್ತೆ ಮೇಲೆ ಮೆರವಣಿಗೆ!

Published : Nov 13, 2023, 11:42 AM IST

ಬೆಳಕಿನ ಹಬ್ಬ ದೀಪಾವಳಿ.. ಇದು ಬೆಳಕಿನ ಹಬ್ಬ.. ಆದರೆ ದೇಶಾದ್ಯಂತ ದೀಪಾವಳಿಯನ್ನ ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಸಂಪ್ರದಾಯ, ವಿಭಿನ್ನ ಆಚರಣೆಗಳು ನಡೆಯುತ್ತವೆ. ಆದ್ರೆ ಮಂಡ್ಯದ ಒಂದು ಧಾರ್ಮಿಕ ಕ್ಷೇತ್ರದಲ್ಲಿ ಮಾತ್ರ ನಡೆಯುವ ಆಚರಣೆ ನಿಜಕ್ಕೂ ವಿಚಿತ್ರ.
 

ಕತ್ತೆ ಮೇಲೆ ಬಾಲಕನ್ನು ಕೂರಿಸಿ ಮೆರವಣಿಗೆ ಮಾಡುತ್ತಿರುವ ಅರ್ಚಕರು, ಸಗಣಿ ಉಂಡೆಗಳಿಂದ ಹೊಡೆದಾಟ. ಇನ್ನೊಂದೆಡೆ ಭಕ್ತಿಯಿಂದ ದೇವರಿಗೆ ಪೂಜೆ ಸಲ್ಲಿಸುತ್ತಿರುವ ಜನ. ಈ ದೃಶ್ಯ ನೋಡಿದ್ರೆ ಏನೋ ವಿಚಿತ್ರ ಅನಿಸಬಹುದು. ಆದ್ರೆ ಇದು ದೀಪಾವಳಿ(Deepavali) ಹಬ್ಬದ ಆಚರಣೆಯ ಒಂದು ಭಾಗ. ಈ ದೇಗುಲ ಬಯಲು ಸೀಮೆ ಕುಕ್ಕೆ ಸುಬ್ರಹ್ಮಣ್ಯ ಎಂದೇ ಪ್ರಸಿದ್ಧಿ ಪಡೆದುಕೊಂಡಿದೆ. ಮಂಡ್ಯ(Mandya) ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಸಾಸಲು ಕ್ಷೇತ್ರದ ಸೋಮೇಶ್ವರ ಸ್ವಾಮಿದೇವಾಲಯದಲ್ಲಿ, ಬಲಿಪಾಡ್ಯಮಿ(Bali padya) ದಿನ ಈ ರೀತಿ ವಿಚಿತ್ರ ಆಚರಣೆ ಮಾಡಲಾಗುತ್ತದೆ. ಈ ರೀತಿ ಕತ್ತೆ ಮೇಲೆ ಬಾಲಕನನ್ನು ಕೂರಿಸಿ ಮೆರವಣಿಗೆ ಮಾಡುವದರ ಹಿಂದೆ ಒಂದು ಪುರಾಣ ಕಥೆ ಇದೆಯಂತೆ. ದೇವಸ್ಥಾನದಲ್ಲಿ ಕತ್ತೆ ಮೇಲೆ ಕೂರಿಸಿ ಮೆರವಣಿಗೆ ಮಾಡೋ ಆಚರಣೆ ಸಾಮಾನ್ಯವಾಗಿ ಎಲ್ಲೂ ಇಲ್ಲ. ಈ ಸೋಮೇಶ್ವರ ಸ್ವಾಮಿ(Someshwara Swami) ನೆಲೆಸಿರುವ ಸಾಸಲು ಗ್ರಾಮದಲ್ಲಿ ಭೈರವರಾಜ ಎಂಬ ಪವಾಡ ಪುರುಷ ವಾಸ ಇದ್ರಂತೆ. ಸೋಮೇಶ್ವರ ಸ್ವಾಮಿ ಪರಮ ಭಕ್ತರಾಗಿದ್ದ ಭೈರವರಾಜರು ಪವಾಡಳಿಂದ ಪ್ರಸಿದ್ಧಿಗಳಿಸಿದ್ರು. ಈ ವೇಳೆ ಭೈರವರಾಜನ ಭಕ್ತಿ ಪರೀಕ್ಷಿಸಲು ಮುಂದಾದ ಸೋಮೇಶ್ವರ ಸ್ವಾಮಿ, ಜಂಗಮನ ರೂಪದಲ್ಲಿ ಭೈರವರಾಜನ ಬಳಿ ಬಂದು ಯುದ್ಧಕ್ಕೆ ಆಹ್ವಾನ ನೀಡ್ತಾನಂತೆ. ಅಂತಿಮವಾಗಿ ಸೋಮೇಶ್ವರ ಸ್ವಾಮಿಗೆ ಸೋಲಾದಾಗ, ಮೊದಲೇ ಒಪ್ಪಂದ ಮಾಡಿಕೊಂಡಂತೆ ಕತ್ತೆ ಮೇಲೆ ಮೆರವಣಿಗೆ ಮಾಡಿಸಲಾಗಿತ್ತಂತೆ. ಈಗಲೂ ಈ ಭಾಗದ ಜನರಲ್ಲಿ ಈ ನಂಬಿಕೆ ಜೀವಂತವಾಗಿದೆ.ಸೋಮೇಶ್ವರರು ಕತ್ತೆ ಮೇಲೆ ಮೆರವಣಿಗೆ ಮಾಡಿಸಿಕೊಳ್ಳುತ್ತಿರುವುದು ಭೈರವರಾಜನಿಗೆ ಬೇಸರ ತರಿಸುತ್ತದೆ. ಬಳಿಕ ಕತ್ತೆಗೆ ಮಾನಿಗಶೆಟ್ಟಿ ಎಂದು ನಾಮಕರಣ ಮಾಡುತ್ತಾರಂತೆ. ಯಾರಾದರೂ ಶಿವನನ್ನು ಮೆರವಣಿಗೆ ಮಾಡುವ ಕತ್ತೆಯನ್ನು ಕತ್ತೆ ಎಂದರೆ ಅವರ ಬಾಯಿಗೆ ಹುಳು ಬೀಳುತ್ತದೆ ಎಂದು ಶಾಪ ಹಾಕಿದ್ರಂತೆ. ಇಂದಿಗೂ ಅಲ್ಲಿನ ಭಕ್ತರು ಯಾರೂ ಕತ್ತೆ ಎಂದು ಕರೆಯುವುದಿಲ್ಲ. ಮಾನಿಗಶೆಟ್ಟಿ ಎಂದೇ ಕರೆಯುತ್ತಾರೆ. ಅಲ್ಲದೆ  ಪ್ರತೀ ವರ್ಷ ಬಲಿಪಾಡ್ಯಮಿಯಂದು 12 ವರ್ಷದ ಒಳಗಿನ ಬಾಲಕನಿಗೆ ತಲೆ ಬೋಳಿಸಿ, ತೆಂಗಿನ ಗರಿಯಿಂದ ಮಾಡಿದ ಪೇಟ ಹಾಕಿ ಮೆರವಣಿಗೆ ಮಾಡಲಾಗುತ್ತದೆ. ಈ ವೇಳೆ ಆ ಬಾಲಕನ ಮೇಲೆ ಸೋಮೇಶ್ವರ ಬರುತ್ತಾನೆಂಬ ನಂಬಿಕೆ ಭಕ್ತರಲ್ಲಿದೆ.

ಇದನ್ನೂ ವೀಕ್ಷಿಸಿ:  ಬಣ್ಣ ಬಣ್ಣದ ಹಣತೆ..ಒಂದಕ್ಕಿಂತ ಒಂದು ಸುಂದರ: ವಿಶೇಷ ಚೇತನ ಮಕ್ಕಳ ಪ್ರತಿಭೆಗೆ ಭಾರೀ ಪ್ರೋತ್ಸಾಹ

26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
Read more