ಬಯಲು ಸೀಮೆ ಸುಬ್ರಮಣ್ಯ ಸನ್ನಿಧಿಯಲ್ಲಿ ವಿಭಿನ್ನ ಆಚರಣೆ: ಬಾಲಕನಿಗೆ ತಲೆ ಬೋಳಿಸಿ ಕತ್ತೆ ಮೇಲೆ ಮೆರವಣಿಗೆ!

ಬಯಲು ಸೀಮೆ ಸುಬ್ರಮಣ್ಯ ಸನ್ನಿಧಿಯಲ್ಲಿ ವಿಭಿನ್ನ ಆಚರಣೆ: ಬಾಲಕನಿಗೆ ತಲೆ ಬೋಳಿಸಿ ಕತ್ತೆ ಮೇಲೆ ಮೆರವಣಿಗೆ!

Published : Nov 13, 2023, 11:42 AM IST

ಬೆಳಕಿನ ಹಬ್ಬ ದೀಪಾವಳಿ.. ಇದು ಬೆಳಕಿನ ಹಬ್ಬ.. ಆದರೆ ದೇಶಾದ್ಯಂತ ದೀಪಾವಳಿಯನ್ನ ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಸಂಪ್ರದಾಯ, ವಿಭಿನ್ನ ಆಚರಣೆಗಳು ನಡೆಯುತ್ತವೆ. ಆದ್ರೆ ಮಂಡ್ಯದ ಒಂದು ಧಾರ್ಮಿಕ ಕ್ಷೇತ್ರದಲ್ಲಿ ಮಾತ್ರ ನಡೆಯುವ ಆಚರಣೆ ನಿಜಕ್ಕೂ ವಿಚಿತ್ರ.
 

ಕತ್ತೆ ಮೇಲೆ ಬಾಲಕನ್ನು ಕೂರಿಸಿ ಮೆರವಣಿಗೆ ಮಾಡುತ್ತಿರುವ ಅರ್ಚಕರು, ಸಗಣಿ ಉಂಡೆಗಳಿಂದ ಹೊಡೆದಾಟ. ಇನ್ನೊಂದೆಡೆ ಭಕ್ತಿಯಿಂದ ದೇವರಿಗೆ ಪೂಜೆ ಸಲ್ಲಿಸುತ್ತಿರುವ ಜನ. ಈ ದೃಶ್ಯ ನೋಡಿದ್ರೆ ಏನೋ ವಿಚಿತ್ರ ಅನಿಸಬಹುದು. ಆದ್ರೆ ಇದು ದೀಪಾವಳಿ(Deepavali) ಹಬ್ಬದ ಆಚರಣೆಯ ಒಂದು ಭಾಗ. ಈ ದೇಗುಲ ಬಯಲು ಸೀಮೆ ಕುಕ್ಕೆ ಸುಬ್ರಹ್ಮಣ್ಯ ಎಂದೇ ಪ್ರಸಿದ್ಧಿ ಪಡೆದುಕೊಂಡಿದೆ. ಮಂಡ್ಯ(Mandya) ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಸಾಸಲು ಕ್ಷೇತ್ರದ ಸೋಮೇಶ್ವರ ಸ್ವಾಮಿದೇವಾಲಯದಲ್ಲಿ, ಬಲಿಪಾಡ್ಯಮಿ(Bali padya) ದಿನ ಈ ರೀತಿ ವಿಚಿತ್ರ ಆಚರಣೆ ಮಾಡಲಾಗುತ್ತದೆ. ಈ ರೀತಿ ಕತ್ತೆ ಮೇಲೆ ಬಾಲಕನನ್ನು ಕೂರಿಸಿ ಮೆರವಣಿಗೆ ಮಾಡುವದರ ಹಿಂದೆ ಒಂದು ಪುರಾಣ ಕಥೆ ಇದೆಯಂತೆ. ದೇವಸ್ಥಾನದಲ್ಲಿ ಕತ್ತೆ ಮೇಲೆ ಕೂರಿಸಿ ಮೆರವಣಿಗೆ ಮಾಡೋ ಆಚರಣೆ ಸಾಮಾನ್ಯವಾಗಿ ಎಲ್ಲೂ ಇಲ್ಲ. ಈ ಸೋಮೇಶ್ವರ ಸ್ವಾಮಿ(Someshwara Swami) ನೆಲೆಸಿರುವ ಸಾಸಲು ಗ್ರಾಮದಲ್ಲಿ ಭೈರವರಾಜ ಎಂಬ ಪವಾಡ ಪುರುಷ ವಾಸ ಇದ್ರಂತೆ. ಸೋಮೇಶ್ವರ ಸ್ವಾಮಿ ಪರಮ ಭಕ್ತರಾಗಿದ್ದ ಭೈರವರಾಜರು ಪವಾಡಳಿಂದ ಪ್ರಸಿದ್ಧಿಗಳಿಸಿದ್ರು. ಈ ವೇಳೆ ಭೈರವರಾಜನ ಭಕ್ತಿ ಪರೀಕ್ಷಿಸಲು ಮುಂದಾದ ಸೋಮೇಶ್ವರ ಸ್ವಾಮಿ, ಜಂಗಮನ ರೂಪದಲ್ಲಿ ಭೈರವರಾಜನ ಬಳಿ ಬಂದು ಯುದ್ಧಕ್ಕೆ ಆಹ್ವಾನ ನೀಡ್ತಾನಂತೆ. ಅಂತಿಮವಾಗಿ ಸೋಮೇಶ್ವರ ಸ್ವಾಮಿಗೆ ಸೋಲಾದಾಗ, ಮೊದಲೇ ಒಪ್ಪಂದ ಮಾಡಿಕೊಂಡಂತೆ ಕತ್ತೆ ಮೇಲೆ ಮೆರವಣಿಗೆ ಮಾಡಿಸಲಾಗಿತ್ತಂತೆ. ಈಗಲೂ ಈ ಭಾಗದ ಜನರಲ್ಲಿ ಈ ನಂಬಿಕೆ ಜೀವಂತವಾಗಿದೆ.ಸೋಮೇಶ್ವರರು ಕತ್ತೆ ಮೇಲೆ ಮೆರವಣಿಗೆ ಮಾಡಿಸಿಕೊಳ್ಳುತ್ತಿರುವುದು ಭೈರವರಾಜನಿಗೆ ಬೇಸರ ತರಿಸುತ್ತದೆ. ಬಳಿಕ ಕತ್ತೆಗೆ ಮಾನಿಗಶೆಟ್ಟಿ ಎಂದು ನಾಮಕರಣ ಮಾಡುತ್ತಾರಂತೆ. ಯಾರಾದರೂ ಶಿವನನ್ನು ಮೆರವಣಿಗೆ ಮಾಡುವ ಕತ್ತೆಯನ್ನು ಕತ್ತೆ ಎಂದರೆ ಅವರ ಬಾಯಿಗೆ ಹುಳು ಬೀಳುತ್ತದೆ ಎಂದು ಶಾಪ ಹಾಕಿದ್ರಂತೆ. ಇಂದಿಗೂ ಅಲ್ಲಿನ ಭಕ್ತರು ಯಾರೂ ಕತ್ತೆ ಎಂದು ಕರೆಯುವುದಿಲ್ಲ. ಮಾನಿಗಶೆಟ್ಟಿ ಎಂದೇ ಕರೆಯುತ್ತಾರೆ. ಅಲ್ಲದೆ  ಪ್ರತೀ ವರ್ಷ ಬಲಿಪಾಡ್ಯಮಿಯಂದು 12 ವರ್ಷದ ಒಳಗಿನ ಬಾಲಕನಿಗೆ ತಲೆ ಬೋಳಿಸಿ, ತೆಂಗಿನ ಗರಿಯಿಂದ ಮಾಡಿದ ಪೇಟ ಹಾಕಿ ಮೆರವಣಿಗೆ ಮಾಡಲಾಗುತ್ತದೆ. ಈ ವೇಳೆ ಆ ಬಾಲಕನ ಮೇಲೆ ಸೋಮೇಶ್ವರ ಬರುತ್ತಾನೆಂಬ ನಂಬಿಕೆ ಭಕ್ತರಲ್ಲಿದೆ.

ಇದನ್ನೂ ವೀಕ್ಷಿಸಿ:  ಬಣ್ಣ ಬಣ್ಣದ ಹಣತೆ..ಒಂದಕ್ಕಿಂತ ಒಂದು ಸುಂದರ: ವಿಶೇಷ ಚೇತನ ಮಕ್ಕಳ ಪ್ರತಿಭೆಗೆ ಭಾರೀ ಪ್ರೋತ್ಸಾಹ

25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
07:24ಪತ್ನಿಯ ಶೀಲ ಶಂಕಿಸಿ ಮಕ್ಕಳ ಮುಂದೆಯೇ ಬೆತ್ತಲೆಗೊಳಿಸಿ ಭೀಕರ ಹತ್ಯೆ; 'ಹಾರ್ಟ್ ಅಟ್ಯಾಕ್' ಎಂದಿದ್ದ ಪತಿಯ ಬಣ್ಣ ಬಯಲು!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
Read more