Ramanagara: ಪರಿಸರ ಸ್ನೇಹಿ ಹಣತೆಗೆ ಭಾರೀ ಡಿಮ್ಯಾಂಡ್

Ramanagara: ಪರಿಸರ ಸ್ನೇಹಿ ಹಣತೆಗೆ ಭಾರೀ ಡಿಮ್ಯಾಂಡ್

Published : Nov 05, 2021, 05:42 PM IST
  • ಅಧುನಿಕ ಯಂತ್ರ ಬಳಸದೆ ಕೈಯಲ್ಲೆ ತಯಾರಾಗುವ ಹಣತೆಗಳಿಗೆ(Dia) ಡಿಮ್ಯಾಂಡ್
  • ಮ್ಯಾಜಿಕ್ ದೀಪಾ, ಅಂಬಾರಿ ದೀಪಾ, ನವಿಲು ದೀಪ, ಗಣೇಶ ದೀಪ, ಆನೆ ದೀಪ
  • ಪ್ರವಾಸಿಗರ ಮನ ಸೂರೆಗೊಳ್ಳುವ  ವಿವಿಧ ರೀತಿಯ ನೈಸರ್ಗಿಕ ಮಣ್ಣಿನ ದೀಪಗಳು

ದೀಪಾವಳಿ ಹಬ್ಬ ಬಂತ್ತು ಅಂದ್ರೆ ಪಟಾಕಿ ಸದ್ದು ಕೇಳಿಸುತ್ತದೆ. ಅದೇ ರೀತಿ ಮನೆಗಳ ಮುಂದೆ ಮಣ್ಣಿನ ಹಣತೆಗಳನ್ನ ಬೆಳಗಿಸುವುದು ವಾಡಿಕೆ. ರಾಮನಗರದ ಜಾನಪದ ಕಲೆಗಳ ತವರು ಜಾನಪದ ಲೋಕದಲ್ಲಿ ಅನೂಸುಯ ಬಾಯಿ ಬಹಳ ವರ್ಷಗಳಿಂದ ವಿವಿಧ ಬಗೆಯ ಮಣ್ಣಿನ ಹಣತೆಗಳನ್ನ ಸಿದ್ದಪಡಿಸುತ್ತಾ ಬರುತ್ತಿದ್ದಾರೆ. ಪ್ರತಿ ಮನೆಗಳಲ್ಲಿ ಬೆಳಕು ಚೆಲ್ಲುವ ಸಾಂಪ್ರದಾಯಿಕ ಹಣತೆಗಳನ್ನು ತಲತಲಾಂತರದಿಂದ ತಯಾರಿಸುತ್ತ ಬರುತ್ತಿದ್ದಾರೆ. ಜಾನಪದ ಲೋಕದಲ್ಲಿ ಅನುಸೂಯಮ್ಮ ತಯಾರು ಮಾಡುವ ಮಣ್ಣಿನ ದೀಪಗಳಿಗೆ ದೀಪಾವಳಿ ಬಂದರೆ ಎಲ್ಲಿಲ್ಲದ ಬೇಡಿಕೆ ಶುರುವಾಗುತ್ತೆ.  ಇವರು ಬಗೆ ಬಗೆಯ ಮಣ್ಣಿನ ಹಣತೆಗಳನ್ನು ಸುಲಲಿತವಾಗಿ ತಯಾರು ಮಾಡುತ್ತಾರೆ. ಪೂರ್ವಿಕರ ಕಲೆದಿಂದ ಬಳುವಳಿವಾಗಿ ಬಂದ ಈ ಕುಂಬಾರಿಕೆ ಕಲೆಯನ್ನ ಇವರು 43 ವರ್ಷಗಳಿಂದಲೂ‌ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. 

ಹಣತೆಗೆ ಚಂದದ ಚಿತ್ತಾರ, ವಿದ್ಯಾರ್ಥಿನಿಯ ಬಣ್ಣದ ಹಣತೆಗಳಿಗೆ ಭಾರೀ ಡಿಮ್ಯಾಂಡ್!

 ಅಂದಹಾಗೇ ಬೆಳಕಿನ ಹಬ್ಬ ದೀಪಾವಳಿ ಬಂದಾಗ ಇಲ್ಲಿನ ನೈಸರ್ಗಿಕ ಮಣ್ಣಿನ ಹಣತೆಗಳಿಗೆ ಭಾರಿ ಬೇಡಿಕೆ. ರಾಜ್ಯದ ವಿವಿದೆಡೆಯಿಂದ ಜಾನಪದ ಲೋಕಕ್ಕೆ ಬರುವ ಪ್ರವಾಸಿಗರು ಅನುಸೂಯಮ್ಮ ತಯಾರು ಮಾಡುವ ಹಣತೆಗಳನ್ನು ಕೊಳ್ಳುತ್ತಾರೆ. ಇದಲ್ಲದೆ ಆಂದ್ರ, ತಮಿಳುನಾಡು, ಕೇರಳ ಸೇರಿದಂತೆ ವಿವಿದ ರಾಜ್ಯಗಳಿಗು ರಪ್ತು ಆಗುತ್ತವೆ. ಅನುಸೂಯಮ್ಮ ಅವರ ಕೈಯಲ್ಲಿ ಅರಳುವ  ಮ್ಯಾಜೀಕ್ ದೀಪಾ, ಅಂಬಾರಿ ದೀಪಾ, ನವಿಲು ದೀಪ, ಗಣೇಶ ದೀಪ, ಆನೆ ದೀಪ, ನವ ದೀಪ, ಮಡಿಲು ದೀಪ, ಲಕ್ಷ್ಮಿ ದೀಪ,  ಹೀಗೆ ಹಲವಾರು ಬಗೆ ಬಗೆಯ ಹಣತೆಗಳು ಪ್ರವಾಸಿಗರ ಮನ ಸೂರೆಗೊಳ್ಳಿತ್ತಿವೆ ಅಲ್ಲದೇ ಅವರ ಮನೆ ಬೆಳಗುತ್ತಿವೆ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more