BIG 3: ದಾವಣಗೆರೆ: ಅನ್ನದಾತರ ಬದುಕಿನ ಜೊತೆ ಅಧಿಕಾರಿಗಳ ಚೆಲ್ಲಾಟ

BIG 3: ದಾವಣಗೆರೆ: ಅನ್ನದಾತರ ಬದುಕಿನ ಜೊತೆ ಅಧಿಕಾರಿಗಳ ಚೆಲ್ಲಾಟ

Published : Sep 12, 2022, 02:48 PM IST

Big 3 Davanagere Agriculture Story: ದಾವಣಗೆರೆ ತಾಲ್ಲೂಕಿನ ಶಿರಾಗನಹಳ್ಳಿ, ಕನಗೊಂಡನಹಳ್ಳೀ, ಬಲ್ಲೂರು, ವಡೇರಹಳ್ಳಿ, ಮುದಹದಡಿ, ಬಟ್ಲಕಟ್ಟೆ, ಜರೇಕಟ್ಟೆ,  ಜಡಗನಹಳ್ಳಿ, ಗ್ರಾಮಗಳ 500ಕ್ಕೂ ಹೆಚ್ಚು ರೈತರು ಜಲಾಶಯದ ಹಿನ್ನೀರಿನಲ್ಲಿ ಭತ್ತದ ಬೆಳೆ ಮುಳುಗಡೆಯಾಗಿವೆ

ದಾವಣಗೆರೆ (ಸೆ. 12): ಜಲಾಶಯದ ಮೇಲೆ ನಿಂತು ನೋಡಿದ್ರೆ ಎಲ್ಲೆಲ್ಲೂ ನೀರು ಕಾಣುತ್ತಿದೆ. ಆದ್ರೆ, ಜಲಾಶಯದ ನೀರು ಎಷ್ಟೋ ರೈತರ ಬದುಕನ್ನು ಕಿತ್ತುಕೊಳ್ಳುತ್ತಿದೆ. ದೇವರಬೆಳಕೆರೆ ಪಿಕಪ್ ಹಿನ್ನೀರಿನಲ್ಲಿ ಬರುವ 13 ಹಳ್ಳಿಗಳ 500 ಕ್ಕೂ ಹೆಚ್ಚು ರೈತರು ತಮ್ಮ ಭತ್ತದ ಗದ್ದೆ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.  ಜಲಾಶಯದ ಹಿನ್ನೀರು ಜಾಸ್ತಿಯಾಗಿ ರೈತರು ಹೇಳುವ ಪ್ರಕಾರ 4 ಸಾವಿರ ಎಕರೆ ಭತ್ತ ಮುಳುಗಡೆಯಾಗಿದೆ.  ಈ ದೃಶ್ಯ ಕಂಡು ಬಂದಿದ್ದು ದಾವಣಗೆರೆ (Davanagere) ಹರಿಹರ ತಾಲ್ಲೂಕಿನ ಸಂಕ್ಲೀಪುರ ಗುಳ್ಳದ ಹಳ್ಳಿ ಬೂದಿಹಾಳ್ ದೇವರಬೆಳಕೆರೆಯಲ್ಲಿ. ದಾವಣಗೆರೆ ತಾಲ್ಲೂಕಿನ ಶಿರಾಗನಹಳ್ಳಿ, ಕನಗೊಂಡನಹಳ್ಳೀ, ಬಲ್ಲೂರು ವಡೇರಹಳ್ಳಿ, ಮುದಹದಡಿ ಬಟ್ಲಕಟ್ಟೆ, ಜರೇಕಟ್ಟೆ  ಜಡಗನಹಳ್ಳಿ , ಗ್ರಾಮಗಳ 500ಕ್ಕೂ ಹೆಚ್ಚು ರೈತರು ಜಲಾಶಯದ ಹಿನ್ನೀರಿನಲ್ಲಿ ಭತ್ತದ ಬೆಳೆ ಮುಳುಗಡೆಯಾಗಿವೆ. 

ಜಲಾಶಯದ ಹಿನ್ನೀರಿನಲ್ಲಿ 4 ಸಾವಿರ ಎಕರೆ ಭತ್ತ ಬೆಳೆ ಮುಳುಗಡೆಯಾಗಲು ಕ್ರೈಸ್ಟ್ ಗೇಟ್ಗಳಲ್ಲಿ ಕಟ್ಟಿಕೊಂಡಿರುವ ಕಸ ಕಾರಣ. ಒಟ್ಟು 14 ಗೇಟ್ಗಳಿದ್ದು ಅದರಲ್ಲಿ ನಾಲ್ಕು ಗೇಟ್ಗಳಲ್ಲಿ ಕಟ್ಟಿಕೊಂಡಿರುವ ಕಸ ತೆಗೆಯಲಾಗಿದ್ದು ಉಳಿದ 10 ಗೇಟ್ಗಳಲ್ಲಿ ನೀರಿನಲ್ಲಿ ಬೆಳೆಯುವ ಜೊಂಡು ಕಳೆ ಹಾಗೇ ಇದೆ. 

BIG 3: ಕೋಟಿ ಕೋಟಿ ಹಣದಲ್ಲಿ ಕಟ್ಟಿದ ಆಸ್ಪತ್ರೆಯಲ್ಲಿಲ್ಲ ಶವಾಗಾರ: ಸುರಪುರದ ಕೆಂಭಾವಿಯ ನರಕಯಾತನೆ

ಜಲಾಶಯದ ಹೆಚ್ಚುವರಿ ನೀರು ಹೊರಗೆ ಹರಿದು ಹೋಗಲು ಇದು ಅಡ್ಡಿ ಆಗಿ ನಿಂತಿದೆ. ಇದರಿಂದ ಯಥೇಚ್ಛವಾಗಿ ಸುರಿಯುತ್ತಿರುವ ಮಳೆ ನೀರು ಜಲಾಶಯದಲ್ಲಿ ಹೆಚ್ಚಾಗಿ ರೈತರ ಜಮೀನು ಮುಳುಗಡೆಯಾಗುತ್ತಿದೆ. ಕಳೆದ ಎರಡು ತಿಂಗಳಲ್ಲಿ ಮೂರು ಬಾರಿ ಬೆಳೆ ಮುಳುಗಡೆಯಾಗಿದ್ದು ರೈತರು ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ .

ಏಷ್ಯಾನೆಟ್ ಸುವರ್ಣನ್ಯೂಸ್ ಬಿಗ್3 (Big 3) ಇದಕ್ಕೆ ಒಂದೇ ಪರಿಹಾರ ಎಂದು ಆ ಭಾಗದ ರೈತರು ನಂಬಿಕೆ ಇಟ್ಟು ಮನವಿ ಮಾಡಿದ್ದಾರೆ.  ವರದಿ ಪ್ರಸಾರ ಆದ್ಮೇಲಾದ್ರೂ  ಈ ಸಮಸ್ಯೆ ಬಗೆ ಹರಿಸ್ತಾರಾ ಅಂತ ನೋಡೋಣ 

26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
Read more