ತಿನ್ನಲು ಬಲು ರುಚಿ, ಆರೋಗ್ಯಕ್ಕೂ ಹಿತ ಸೀತಾಫಲ..!

Oct 2, 2021, 5:12 PM IST

ಯಾದಗಿರಿ (ಅ. 02): ಕಲ್ಯಾಣ ಕರ್ನಾಟಕದಲ್ಲಿ ಯಾದಗಿರಿ ಜಿಲ್ಲೆ ಸೀತಾಫಲ ಹಣ್ಣು ಬೆಳೆಯುವುದಕ್ಕೆ ಫೇಮಸ್. ಕರ್ನಾಟಕದಲ್ಲಿ ಅತೀ ಹೆಚ್ಚು ಸೀತಾಫಲ ಬೆಳೆಯುವುದು ಇಲ್ಲಿಯೇ.  ಈ ವರ್ಷ ಮುಂಗಾರು ಮಳೆ ಉತ್ತಮವಾಗಿದ್ದು, ಸೀತಾಫಲ ಫಸಲು ಉತ್ತಮವಾಗಿದೆ. 

ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು ಕುಡಿಯೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ.?

ಹತ್ತಿಕುಣಿ, ಯರಗೋಳ, ಯಡಳ್ಳಿಯ ವಿಸ್ತಾರವಾದ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತದೆ.  ತಿನ್ನಲು ಸೀತಾಫಲ ಹಣ್ಣು ರುಚಿ ಮಾತ್ರ ಅಲ್ಲ, ಔಷಧೀಯ ಗುಣಗಳನ್ನು ಹೊಂದಿದೆ. ಮಾರ್ಕೆಟ್‌ನಲ್ಲಿ ಎಲ್ಲಿ ನೋಡಿದರೂ ಸೀತಾಫಲ..!