ಸಿಎಂ ಗ್ರಾಮ ವಾಸ್ತವ್ಯದಲ್ಲೂ ಕಾಂಗ್ರೆಸ್ ನಾಯಕರಿಗೆ ಜಾಗವಿಲ್ಲ..!

Jun 20, 2019, 7:29 PM IST

ಯಾದಗಿರಿ, [ಜೂ.20]: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 2ನೇ ಬಾರಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಗ್ರಾಮ ವಾಸ್ತವ್ಯಕ್ಕೆ ಚಾಲನೆ ಸಿಗುತ್ತಿದೆ. ಯಾದಗಿರಿಯಿಂದ ವಾಸ್ತವ್ಯ ಆರಂಭಿಸುತ್ತಿದ್ದಾರೆ. 

ಆದ್ರೆ, ಗ್ರಾಮ ವಾಸ್ತವ್ಯದಲ್ಲಿ ದೋಸ್ತಿ ಪಕ್ಷವಾದ ಕಾಂಗ್ರೆಸ್ ನಾಯಕರನ್ನು ಕಡೆಗಣನೆ ಮಾಡಲಾಗುತ್ತಿದ್ಯಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಯಾಕಂದ್ರೆ ಬ್ಯಾನರ್ ಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಭಾವಚಿತ್ರ ಕಲವು ಕಡೆ ಇರುವುದನ್ನು ಹೊರತುಪಡಿಸಿದರೆ, ಇನ್ನುಳಿದ ಕಾಂಗ್ರೆಸ್ ನಾಯಕರ ಫೋಟೋಗಳು ಬ್ಯಾನರ್ ನಲ್ಲಿ ಇಲ್ಲ. ಕೇವಲ ಜೆಡಿಎಸ್ ನಾಯಕರ ಫೋಟೋಗಳೇ ರಾರಾಜಿಸುತ್ತಿವೆ.