ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು

ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು

Published : Dec 26, 2025, 02:29 PM IST

ಚಿತ್ರದುರ್ಗದ ಬಳಿ ನಡೆದ 'ಸೀ ಬರ್ಡ್' ಸ್ಲೀಪರ್ ಬಸ್‌ನ ಭೀಕರ ಅಗ್ನಿ ಅವಘಡದಲ್ಲಿ ಹಲವರು ಸಜೀವ ದಹನವಾಗಿದ್ದಾರೆ. ಈ ದುರಂತವು ಸ್ಲೀಪರ್ ಬಸ್‌ಗಳ ವಿನ್ಯಾಸದಲ್ಲಿನ ಸುರಕ್ಷತಾ ಲೋಪಗಳನ್ನು ಮತ್ತು ಅವು ಏಕೆ ಹೆಚ್ಚು ಅಪಾಯಕಾರಿ ಎಂಬುದನ್ನು ಬಯಲಿಗೆಳೆದಿದೆ.

ಚಿತ್ರದುರ್ಗ/ಬೆಂಗಳೂರು (ಡಿ.26): ಸಿಲಿಕಾನ್ ಸಿಟಿಯಲ್ಲಿ ಕ್ರಿಸ್‌ಮಸ್‌ ಸಂಭ್ರಮ ಮುಗಿಸಿ, ಸಾವಿರಾರು ಕನಸುಗಳನ್ನು ಹೊತ್ತು ಬಸ್ ಏರಿದ್ದ ಆ ಪ್ರಯಾಣಿಕರಿಗೆ ವಿಧಿ ಅಕ್ಷರಶಃ 'ಭಸ್ಮಾಸುರ'ನಾಗಿ ಬಂದೆರಗಿದೆ. ಚಿತ್ರದುರ್ಗದ ಬಳಿ ನಡೆದ 'ಸೀ ಬರ್ಡ್' ಸ್ಲೀಪರ್ ಬಸ್‌ನ ಭೀಕರ ಅಗ್ನಿ ಅವಘಡ ಇಡೀ ರಾಜ್ಯವನ್ನೇ ನಡುಗಿಸಿದೆ. ಗಾಢ ನಿದ್ದೆಯಲ್ಲಿದ್ದವರು ಎಚ್ಚರವಾಗುವಷ್ಟರಲ್ಲೇ ಬೆಂಕಿಯ ಜ್ವಾಲೆಗೆ ಸಜೀವ ದಹನವಾಗಿದ್ದಾರೆ.

ದುರಂತ ನಡೆದಿದ್ದು ಹೇಗೆ?

ಬೆಂಗಳೂರಿನಿಂದ ಹೊರಟಿದ್ದ ಬಸ್‌ಗೆ ಡಿವೈಡರ್ ಹಾರಿ ಬಂದ ಲಾರಿಯೊಂದು ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಡೀಸೆಲ್ ಟ್ಯಾಂಕ್ ಒಡೆದು ಕ್ಷಣಾರ್ಧದಲ್ಲಿ ಬೆಂಕಿ ಇಡೀ ಬಸ್ಸನ್ನು ಆವರಿಸಿದೆ. ಚಾಣಾಕ್ಷ ಚಾಲಕನ ಸಮಯಪ್ರಜ್ಞೆಯಿಂದ ಕೆಲವು ಜೀವಗಳು ಉಳಿದವೆಯಾದರೂ, ಗಾಢ ನಿದ್ದೆಯಲ್ಲಿದ್ದ ಹಲವರು ಬೆಂಕಿಯ ಉಂಡೆಯೊಳಗೆ ಕರಗಿ ಹೋಗಿದ್ದಾರೆ. ಈ ಕರುಣಾಜನಕ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಸಂತ್ರಸ್ತರಿಗೆ ಪರಿಹಾರ ಘೋಷಿಸಿದ್ದಾರೆ.

ಸ್ಲೀಪರ್ ಬಸ್‌ಗಳೇ ಏಕೆ ಟಾರ್ಗೆಟ್?: ಇತ್ತೀಚಿನ ದಿನಗಳಲ್ಲಿ ಕರ್ನೂಲ್, ಜೈಸಲ್ಮೇರ್ ಹಾಗೂ ಈಗ ಚಿತ್ರದುರ್ಗದ ಘಟನೆಗಳನ್ನು ಗಮನಿಸಿದರೆ ಸ್ಲೀಪರ್ ಬಸ್‌ಗಳೇ ಹೆಚ್ಚಾಗಿ ಅಗ್ನಿ ಅವಘಡಕ್ಕೆ ತುತ್ತಾಗುತ್ತಿವೆ. ಇದಕ್ಕೆ ಮುಖ್ಯ ಕಾರಣಗಳು ಇಲ್ಲಿವೆ:

ಕಿರಿದಾದ ದಾರಿ: ಸ್ಲೀಪರ್ ಬಸ್‌ಗಳ ಒಳಾಂಗಣ ವಿನ್ಯಾಸ ಅತ್ಯಂತ ಕಿರಿದಾಗಿರುತ್ತದೆ. ತುರ್ತು ಸಂದರ್ಭದಲ್ಲಿ ಹೊರಬರಲು ದಾರಿ ಸಿಗದೆ ಪ್ರಯಾಣಿಕರು ಒದ್ದಾಡುತ್ತಾರೆ.

ಪರದ್ರೆ ಮತ್ತು ಬೆಡ್‌ಶೀಟ್‌ಗಳು: ಬಸ್‌ನಲ್ಲಿರುವ ಪಾಲಿಯೆಸ್ಟರ್ ಪರದೆಗಳು ಮತ್ತು ಬೆಡ್‌ಶೀಟ್‌ಗಳು ಬೆಂಕಿಯನ್ನು ಬೇಗನೆ ಹೀರಿಕೊಳ್ಳುತ್ತವೆ, ಇದರಿಂದ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸುತ್ತದೆ.

ಗ್ಲಾಸ್ ವಿಂಡೋಗಳು: ಸ್ಲೀಪರ್ ಬಸ್‌ಗಳು ಹೆಚ್ಚಾಗಿ ಎಸಿ (AC) ಆಗಿರುವುದರಿಂದ ಗಾಜುಗಳನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿರುತ್ತದೆ. ಬೆಂಕಿ ಹೊತ್ತಿಕೊಂಡಾಗ ಗಾಜು ಒಡೆಯಲು ಹ್ಯಾಮರ್ ಸಿಗದೆ ಪ್ರಯಾಣಿಕರು ಉಸಿರುಗಟ್ಟಿ ಸಾವನ್ನಪ್ಪುತ್ತಾರೆ.

ವಿದೇಶಗಳಲ್ಲಿ ಸ್ಲೀಪರ್ ಬಸ್‌ಗಳಿಗೆ ನಿಷೇಧ ಏಕೆ?

ಅಭಿವೃದ್ಧಿ ಹೊಂದಿದ ಬಹುತೇಕ ವಿದೇಶಗಳಲ್ಲಿ ಸ್ಲೀಪರ್ ಬಸ್‌ಗಳನ್ನು ರಸ್ತೆಗೆ ಇಳಿಸಲು ಅವಕಾಶವಿಲ್ಲ. ಅಲ್ಲಿ ಕೇವಲ ಕುಳಿತು ಪ್ರಯಾಣಿಸುವ (Seater) ಬಸ್‌ಗಳಿಗೆ ಮಾತ್ರ ಪ್ರಾಶಸ್ತ್ಯ. ಸ್ಲೀಪರ್ ಬಸ್‌ಗಳಲ್ಲಿ ಪ್ರಯಾಣಿಕರು ಬೆಲ್ಟ್ ಧರಿಸಲು ಸಾಧ್ಯವಿಲ್ಲ ಮತ್ತು ಬೆಂಕಿ ಅವಘಡ ಸಂಭವಿಸಿದರೆ ಸುರಕ್ಷಿತವಾಗಿ ಹೊರಬರಲು ತಾಂತ್ರಿಕವಾಗಿ ಅಸಾಧ್ಯ ಎಂಬ ಕಾರಣಕ್ಕೆ ಅಲ್ಲಿ ಇವುಗಳನ್ನು ನಿಷೇಧಿಸಲಾಗಿದೆ. ಭಾರತದಲ್ಲೂ ಇಂತಹ 'ಚಲಿಸುವ ಚಿತಾಗಾರ'ಗಳ ಬಗ್ಗೆ ಸರ್ಕಾರ ಕಠಿಣ ನಿಯಮಗಳನ್ನು ರೂಪಿಸಬೇಕಿದೆ. ಇಲ್ಲದಿದ್ದರೆ ಪ್ರತಿ ಹಬ್ಬದ ರಜೆಯೂ ಇಂತಹ ರಕ್ತಸಿಕ್ತ ಕಥೆಗಳನ್ನೇ ಬರೆಯುತ್ತಾ ಹೋಗುತ್ತದೆ.

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more