Chitradurga: ಪ್ರಧಾನಿ ಮೋದಿ ಟ್ವೀಟ್‌ ಎಫೆಕ್ಟ್,  ಓಬವ್ವ ಸಮಾಧಿ ಕಾಮಗಾರಿ ಶುರು

Chitradurga: ಪ್ರಧಾನಿ ಮೋದಿ ಟ್ವೀಟ್‌ ಎಫೆಕ್ಟ್, ಓಬವ್ವ ಸಮಾಧಿ ಕಾಮಗಾರಿ ಶುರು

Suvarna News   | Asianet News
Published : Jan 04, 2022, 04:24 PM ISTUpdated : Jan 04, 2022, 04:39 PM IST

 ಕೋಟೆನಾಡು ಅಂದ್ರೆ ಎಲ್ರಿಗೂ ನೆನಪಾಗೋದು ಏಳುಸುತ್ತಿನ ಕಲ್ಲಿನಕೋಟೆ (Chitradurga) ಆ ಕೋಟೆ ರಕ್ಷಿಸಿದ ವೀರವನಿತೆ ಒನಕೆ ಓಬವ್ವ (Onake Obavva) ಆದ್ರೆ ಆ ಮಹಾತಾಯಿಯ ಸಮಾಧಿ ಸ್ಥಳದಲ್ಲಿ ಸ್ಮಾರಕ (Monument) ನಿರ್ಮಾಣ ಕನಸು ನನಸಾಗುವ‌ ದಿನ ಸನಿಹವಾಗಿದೆ. 
 

ಚಿತ್ರದುರ್ಗ (ಜ. 04): ಕೋಟೆನಾಡು ಅಂದ್ರೆ ಎಲ್ರಿಗೂ ನೆನಪಾಗೋದು ಏಳುಸುತ್ತಿನ ಕಲ್ಲಿನಕೋಟೆ (Chitradurga) ಆ ಕೋಟೆ ರಕ್ಷಿಸಿದ ವೀರವನಿತೆ ಒನಕೆ ಓಬವ್ವ (Onake Obavva) ಆದ್ರೆ ಆ ಮಹಾತಾಯಿಯ ಸಮಾಧಿ ಸ್ಥಳದಲ್ಲಿ ಸ್ಮಾರಕ (Monument) ನಿರ್ಮಾಣ ಮಾಡಬೇಕೆನ್ನುವ ಕನಸು ನನಸಾಗುವ‌ ದಿನ ಸನಿಹವಾಗಿದೆ. 

ಚಿತ್ರದುರ್ಗದ ಕಲ್ಲಿನ ಕೋಟೆ., ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..! ಮದಿಸಿದ ಆನೆಯ ಮದವನ್ನಡಗಿಸಿ ಕೆಚ್ಚೆದೆಯ ಪಾಳೆಗಾರ ಎನಿಸಿದ್ದ ಮದಕರಿ ನಾಯಕನ ಅಧಿಕಾರದ ಅವಧಿಯಲ್ಲಿ  ಹೈದರಾಲಿಯ ಸೈನಿಕರೊಂದಿಗೆ ಏಕಾಂಗಿಯಾಗಿ ಸೆಣಸಾಡಿ ಕೋಟೆಯನ್ನು ಸಂರಕ್ಷಿಸಿ, ಶತ್ರುಗಳ ಕುತಂತ್ರಕ್ಕೆ ಬಲಿಯಾದ  ವೀರವನಿತೆ ಒನಕೆ ಓಬವ್ವಳ ಸಾಹಸ ಇಡೀ ನಾಡಿಗೆ ಸ್ಪೂರ್ತಿದಾಯಕ. ಹೀಗಾಗಿ ಆ ವೀರನಾರಿಯ ವಂಶಸ್ಥರು ಹಾಗೂ ಅಭಿಮಾನಿಗಳು ಹಲವು ದಶಕಗಳಿಂದ ಗೌರವಪೂರ್ವಕವಾಗಿ ಕೋಟೆಯಲ್ಲಿರುವ ಸಮಾಧಿಯ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡುವಂತೆ ಆಗ್ರಹಿಸಿ ಹೋರಾಟ ನಡೆಸಿದ್ರೂ ಕೂಡ  ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ತಿಂಗಳು ಒನಕೆ ಓಬವ್ವನ ಜಯಂತಿಯಂದು ಶುಭ ಹಾರೈಸಿದ್ದೇ ತಡ, ಹಲವು ದಶಕಗಳ ಹೋರಾಟಕ್ಕೆ ದಿಢೀರ್ ಅಂತ ಫಲ ಸಿಕ್ಕಿದೆ. 

ಆ ಮೂಲಕ ಚಿತ್ರದುರ್ಗದ ಕೋಟೆಯಲ್ಲಿ ಓಬವ್ವ ಸಮಾಧಿಯ ಸ್ಮಾರಕ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಕಳೆದ 15ದಿನಗಳಿಂದ ಸ್ಮಾರಕದ ಕಾಮಗಾರಿ ಭರದಿಂದ ಸಾಗಿದ್ದು, ಕೇಂದ್ರ ಪುರಾತತ್ವ ಇಲಾಖೆ ಹಾಗೂ ರಾಜ್ಯ ಸರ್ಕಾರ ವಿನಾಶದ ಅಂಚಿಗೆ ತಲುಪಿದ್ದ ಸಮಾಧಿಯನ್ನು ಬೃಹತ್ ಸ್ಮಾರಕವಾಗಿ ಅಭಿವೃದ್ಧಿ ಪಡಿಸುತ್ತಿದೆ. ಹೀಗಾಗಿ ಇಷ್ಟು ದಿನ ಹಾಳಾಗಿ ವಿನಾಶದ ಅಂಚಿಗೆ ತಲುಪಿದ್ದ ಓಬವ್ವನ ಸ್ಮಾರಕ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ಹೊರಹೊಮ್ಮಲಿದೆ.

ಇನ್ನು ಒನಕೆ ಓಬವ್ವಳ ವಂಶಸ್ಥರು ಹಾಗೂ ಸ್ಥಳೀಯ ಹೋರಾಟಗಾರರು ದಶಕಗಳಿಂದ ನಿರಂತರವಾಗಿ ಹೋರಾಟ ಮಾಡಿದ ಪ್ರತಿಫಲವಾಗಿ ಚಿತ್ರದುರ್ಗದಲ್ಲಿ ಸ್ಮಾರಕ ಅಭಿವೃದ್ಧಿಗೆ ಮುಂದಾಗಿರುವುದಕ್ಕೆ ಕೋಟೆನಾಡಿನಾದ್ಯಂತ ಸಂತಸ ವ್ಯಕ್ತವಾಗಿದೆ. ಜೊತೆಗೆ ನಾಡಿನ ಯುವತಿಯರಿಗೆ‌ ಹಾಗು ಮಹಿಳೆಯರಿಗೆ ಸ್ಪೂರ್ತಿದಾಯಕ ಎನಿಸಿದ್ದೂ ಧೈರ್ಯದ ಪ್ರತೀಕವಾಗಿದ್ದ ಒನಕೆ ಓಬವ್ವಳ ಸ್ಮಾರಕವನ್ನು ಜೀವಂತವಾಗಿಡಲು ಪ್ರಯತ್ನ ನಡೆದಿರುವುದು ಎಲ್ಲರಲ್ಲೂ ಬಾರಿ  ಸಂತಸ ಮೂಡಿಸಿದೆ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more