Bagalkot: ಖಗೋಳ, ಭೂಗೋಳ ಶಾಸ್ತ್ರದ ಜ್ಞಾನ ಭಂಡಾರ 2ನೇ ತರಗತಿ ಬಾಲಕ

Bagalkot: ಖಗೋಳ, ಭೂಗೋಳ ಶಾಸ್ತ್ರದ ಜ್ಞಾನ ಭಂಡಾರ 2ನೇ ತರಗತಿ ಬಾಲಕ

Suvarna News   | Asianet News
Published : Nov 14, 2021, 10:22 AM ISTUpdated : Nov 14, 2021, 10:32 AM IST

- ಖಗೋಳ, ಭೂಗೋಳ ಶಾಸ್ತ್ರ ಅಗಾಧ ಪಾಂಡಿತ್ಯ ಹೊಂದಿರೋ  ಬಾಲಕ

- ಯೂಟ್ಯೂಬ್‌​ನಲ್ಲಿ ನೋಡಿಯೇ ಸಾಕಷ್ಟು ವಿಷಯ ಅರಿತಿರೋ ಪುಟಾಣಿ

- ಪದವಿ ಪೂರ್ವ, ಪದವಿ ಹಂತದ ವಿಷಯಗಳನ್ನೂ ಸುಲಲಿತವಾಗಿ ಹೇಳುವ ಬಾಲಕ

ಬಾಗಲಕೋಟೆ (ನ. 14): ಸಾಮಾನ್ಯವಾಗಿ ಮಕ್ಕಳು ಮೊಬೈಲ್​ (Mobile) ನೋಡಿ ಹಾಳಾಗ್ತಾರೆ, ಓದು ಕಲಿಯೋದಿಲ್ಲ, ನಿರಾಸಕ್ತರಾಗ್ತಾರೆ, ಓದಿನಿಂದ ದೂರ ಉಳಿತಾರೆ ಅನ್ನೋ ಮಾತನ್ನ ನಾವು ಕೇಳ್ತಿವಿ, ಆದ್ರೆ ಇಲ್ಲೊಬ್ಬ ಬಾಲಕ ಮಾತ್ರ ಮೊಬೈಲ್​ನಲ್ಲೇ ಇಡೀ ಜಗತ್ತಿನ ವಿಷಯ ತಿಳಿಯುತ್ತ, ಇಂದು ಅಗಾಧ ಪಾಂಡಿತ್ಯದೊಂದಿಗೆ ಬೆಳೆಯುತ್ತಿದ್ದಾನೆ. 

ನಗರದ ಇಂಜಿನಿಯರಿಂಗ್ ಕಾಲೇಜ್​ನ ಉಪನ್ಯಾಸಕ ರಾಮ್​ ಪ್ರಸಾದ್​ ಎಂಬುವವರ ಪುತ್ರ. ಈತನಿಗೆ ಇನ್ನೂ 7 ವರ್ಷ 10 ತಿಂಗಳು ವಯಸ್ಸು. ಈತ ತನ್ನ 4 ನೇ ವಯಸ್ಸಿನಲ್ಲಿಯೇ ಅಗಾಧ ಪಾಂಡಿತ್ಯ ಹೊಂದುತ್ತಾ ಬಂದಿದ್ದಾನೆ. ಇನ್ನೂ ಈ ಎಲ್ಲಾ ವಿಷಯಗಳನ್ನು ಯಾರಿಂದಲೋ ಕಲಿತಿದ್ದಲ್ಲ, ಬದಲಾಗಿ ಮೊಬೈಲ್​, ಟ್ಯಾಬ್, ಯೂಟ್ಯೂಬ್ ಬಳಕೆಯಿಂದ. ಬಹುತೇಕ ಮಕ್ಕಳು ಮೊಬೈಲ್​ ಹಿಡಿದು ಓದಿನಿಂದ ದೂರ ಉಳಿದರೆ ಇತ್ತ ಬಾಲಕ ವೆಂಕಟ ರಾಘವೇಂದ್ರ ಮಾತ್ರ ಅದರಿಂದಲೇ ಇಡೀ ಜಗತ್ತಿನ ಖಗೋಳ, ಭೂಗೋಳ ಮಾಹಿತಿ ಪಡೆಯತ್ತಾ ಜೊತೆಗೆ ಸೈನ್ಸ್​, ಮ್ಯಾಥ್ಸ್​ ಸೇರಿದಂತೆ ಎಲ್ಲ ವಿಧಧ ವಿಷಯಗಳನ್ನ ಸರಾಗವಾಗಿ ಸೈಂಟಿಸ್ಟ್​ಗಳಂತೆ ನಿರರ್ಗಳವಾಗಿ ಹೇಳುತ್ತಾನೆ. ಹೀಗೆ ಹೇಳಿದ ವಿಷಯಗಳು ತಂದೆಗೂ ಸಹ ತಿಳಿಯದೇ ಹೋದಾಗ ತಂದೆ ಸಂಬಂದಪಟ್ಟ ಉಪನ್ಯಾಸಕರ ಬಳಿ ಕೊಂಡೊಯ್ದು ಈತನ ವಿಷಯಗಳನ್ನ ಕರಗತ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ವಿಜ್ಷಾನಿಯಾಗಬೇಕೆಂಬ ಆಶಯ ಹೊತ್ತ ಮಗನ ಗುರಿಗೆ ತಂದೆ ತಾಯಿಗಳು ಪ್ರೇರಿಪಿಸುತ್ತಿದ್ದಾರೆ. 

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more