Chikkamgaluru: ರೋಪ್‌ ವೇ, ಸರ್ಕಾರದ ಘೋಷಣೆಗೆ ಪರಿಸರವಾದಿಗಳಿಂದ ತೀವ್ರ ವಿರೋಧ

Chikkamgaluru: ರೋಪ್‌ ವೇ, ಸರ್ಕಾರದ ಘೋಷಣೆಗೆ ಪರಿಸರವಾದಿಗಳಿಂದ ತೀವ್ರ ವಿರೋಧ

Suvarna News   | Asianet News
Published : Mar 10, 2022, 05:30 PM IST

- ಚಂದ್ರದ್ರೋಣ ಪರ್ವತ ಸಾಲಿನಲ್ಲಿ ರೋಪ್ ವೇ ಯೋಜನೆ ಘೋಷಣೆ

- ಸರ್ಕಾರದ ಘೋಷಣೆಗೆ ಪರಿಸರವಾದಿಗಳಿಂದ ತೀವ್ರ ವಿರೋಧ

- ಅರಣ್ಯ ನಾಶ, ಭೂಕುಸಿತ, ಭದ್ರ ನದಿಯ ನೀರಿನ ಮೂಲಕ್ಕೆ ಧಕ್ಕೆ ಆತಂಕ

- ಪ್ರವಾಸೋದ್ಯಮದ ಹೆಸ್ರಲ್ಲಿ  ಕಾಡುಪ್ರಾಣಿಗಳಿಗೆ ಜೀವಕ್ಕೆ ಹಾನಿ
 

ಚಿಕ್ಕಮಗಳೂರು (ಮಾ. 10):  ಬಜೆಟ್ ನಲ್ಲಿ ಕಾಫಿ ನಾಡಿನ ಪ್ರವಾಸೋಧ್ಯಮ ಅಭಿವೃದ್ದಿಗೆ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ರೋಪ್ ವೇ ಯೋಜನೆಯನ್ನು ಘೋಷಣೆ ಮಾಡಿದೆ ಸರ್ಕಾರ. ಘೋಷಣೆಯಾದ  ಬೆನ್ನಲ್ಲೇ ರೋಪ್ ವೇ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದೆ.ಪರಿಸರ ಪ್ರೇಮಿಗಳು ಯಾವುದೆ ಕಾರಣಕ್ಕೂ ಯೋಜನೆ ಬೇಡ್ವೇ ಬೇಡ , ಇದು ಶೋಲಾ ಅರಣ್ಯಕ್ಕೆ ಅಪಾಯ ಅಂತಿದ್ದಾರೆ.  
 ರಾಜ್ಯದ ಎತ್ತರ ಶಿಖರವಾಗಿರೋ ಮುಳ್ಳಯ್ಯನಗಿರಿ,ದತ್ತಪೀಠದಲ್ಲಿ ರೋಪ್ ವೇ ಯೋಜನೆ ಘೋಷಣೆಯಾಗಿದ ಬೆನ್ನಲೇ ವಿರೋಧ ವ್ಯಕ್ತವಾಗ್ತಾ ಇದೆ. ಶೋಲಾರಣ್ಯದಲ್ಲಿ ರೋಪ್ ವೇ ಯೋಜನೆ ಮಾಡೋದನ್ನು ಕೈಬಿಡುವಂತೆ ಒತ್ತಾಯವು ಕೇಳಿಬಂದಿದೆ.

ಮುಳ್ಳಯ್ಯನಗಿರಿ ಸಾಲಿನಲ್ಲಿರೋ ಶೋಲಾರಣ್ಯದಲ್ಲಿ ರೋಪ್ ವೇ ಮಾಡೋವಾಗ  ಅರಣ್ಯ ನಾಶವಾಗುತ್ತೇ ಅನ್ನೋದು ಅವ್ರ ವಾದ.. ಇನ್ನೂ ಆಳವಾದ ಗುಂಡಿಗಳನ್ನು ತೆಗೆಯೋದ್ರಿಂದ ಮುಂದೇ ಭೂಕುಸಿತವು ಅಗೋ ಭೀತಿಯು ಎದುರಾಗೋ ಸಾಧ್ಯತೆಯು ಇದೆ. ಇದಲ್ಲದೆ ಭದ್ರ ನದಿಯ ನೀರಿನ ಮೂಲಕ್ಕೆ ಧಕ್ಕೆಯಾಗುತ್ತೆ. ಕಾಡುಪ್ರಾಣಿಗಳಿಗೆ ಪ್ರವಾಸೋದ್ಯಮದ ಹೆಸ್ರಲ್ಲಿ ಜೀವಕ್ಕೆ ಹಾನಿಯಾಗುತ್ತೆ ಅನ್ನೋ ಆತಂಕವನ್ನು ಹೊರಹಾಕಿದ್ದಾರೆ.
 
ಒಟ್ಟಾರೆ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ದಿ ಪಡಿಸೋಕೆ ರಾಜ್ಯ ಸರ್ಕಾರವೇನೂ ಗಿರಿಸಾಲಿನಲ್ಲಿ ರೋಪ್ ವೇ ಯೋಜನೆಯನ್ನು ಘೋಷಿಸ್ತು. ಅದ್ರೆ ಪರಿಸರವಾದಿಗಳಂತೂ ತೀವ್ರ ವಿರೋಧ ವ್ಯಕ್ತಪಡಿಸ್ತಾ ಇದ್ದಾರೆ. ಸರ್ಕಾರ ಏನೂ ನಿರ್ಧಾರ ತೆಗೆದುಕೊಳ್ಳುತ್ತೋ ಅನ್ನೋದನ್ನು ಮಾತ್ರ ಕಾದುನೋಡಬೇಕಾಗಿದೆ.

22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
23:26Mysuru Marriage home Tragedy: ಮದುವೆ ಮನೆಯಲ್ಲಿ ಮೂರು ಚಟ್ಟ, ರಾಕ್ಷಸ ಉಲ್ಲಾಸ್ ಗೌಡನ ಕ್ರೌರ್ಯದ ಕಥೆ!
23:26FIR video: ಭೀಮಾತೀರದ ಹಂತಕ ಅಪ್ಪುಗೌಡ ಇಬ್ಬರ ಹತ್ಯೆಗೆ ಸ್ಕೆಚ್ ಹಾಕಿದ್ದ; ಆದ್ರೆ 6 ಜನರ ಕೊಲೆ ಮಾಡಿದ್ದೇಕೆ ಹಂತಕರು?
23:22ಕೇರಳದಿಂದ ಬಂದಿತ್ತು 20 ಲಕ್ಷ, ಪೊಲೀಸರಿಗೆ ಸಿಕ್ಕಿತ್ತು ಸುಳಿವು! ಖೆಡ್ಡಾಗೆ ಬಿದ್ದಿದ್ಹೇಗೆ 'ಖಾಕಿ' ಗ್ಯಾಂಗ್?
24:322 ಕೋಟಿ ವಿಮೆ ಹಣಕ್ಕಾಗಿ ನಿವೃತ್ತ ಯೋಧನ ಕೊಲೆ: ಪೋಸ್ಟ್ ಮಾರ್ಟಮ್ ರಿಪೋರ್ಟ್ ತಿರುಚಿ ಸಿಕ್ಕಿಬಿದ್ದ ಹೆಂಡತಿ!
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more