ಕೊರೋನಾ ಭೀತಿ ಮಧ್ಯೆ ಬೇಕಿತ್ತಾ ಮೋಜು, ಮಸ್ತಿ?: ಸಚಿವ ಶ್ರೀರಾಮುಲು ಆಪ್ತನಿಂದ ಗುಂಡು ಪಾರ್ಟಿ..!

Jul 11, 2020, 3:26 PM IST

ಗದಗ(ಜು.11): ಕೊರೋನಾ ಕರಾಳ ದಿನಗಳಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ಆಪ್ತ ಭರ್ಜರಿಯಾಗಿ ಮೋಜು, ಮಸ್ತಿ ಮಾಡಿದ ಘಟನೆ ನಗರದಲ್ಲಿ ನಿನ್ನೆ(ಶುಕ್ರವಾರ)ನಡೆದಿದೆ. ನಗರದ ಶ್ರೀನಿವಾಸ್‌ ಭವನದಲ್ಲಿ ಸಚಿವ ಶ್ರೀರಾಮುಲು ಅವರ ಆಪ್ತ ಶಿವನಗೌಡ ಅವರ ತಂಡ ನಿನ್ನೆ ರಾತ್ರಿ ಎಣ್ಣೆ ಪಾರ್ಟಿ ಮಾಡಿದ್ದಾರೆ. 

ಕಾಂಗ್ರೆಸ್‌ನವರು ಮೊಸರಲ್ಲಿ ಕಲ್ಲು ಹುಡುಕೋದು ಬಿಡಬೇಕು: ಕಾಂಗ್ರೆಸ್‌ ವಿರುದ್ಧ ಸಚಿವ ಸುಧಾಕರ್‌ ಕಿಡಿ

ಈ ವೇಳೆಯಲ್ಲಿ ಯಾರೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ, ಮಾಸ್ಕ್‌ ಧರಿಸದೆ ಇರುವ ಮೂಲಕ ಸರ್ಕಾರದ ಆದೇಶಗಳನ್ನ ಉಲ್ಲಂಘಿಸಿದ್ದಾರೆ. ಈ ಪಾರ್ಟಿಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.