ಸದನ ಕದನ ರಣಾಂಗಣ ಆಗಿದ್ದೇಕೆ ಗೊತ್ತಾ..? ವಿಪಕ್ಷಗಳ ಆರೋಪಕ್ಕೆ ಸರ್ಕಾರ ನೀಡಿದ ಉತ್ತರವೇನು ?

ಸದನ ಕದನ ರಣಾಂಗಣ ಆಗಿದ್ದೇಕೆ ಗೊತ್ತಾ..? ವಿಪಕ್ಷಗಳ ಆರೋಪಕ್ಕೆ ಸರ್ಕಾರ ನೀಡಿದ ಉತ್ತರವೇನು ?

Published : Jul 17, 2024, 05:30 PM IST

ಸರ್ಕಾರಕ್ಕೆ ಸವಾಲು ಹಾಕಲು ಸಿದ್ಧವಾಗಿತ್ತು ಮೈತ್ರಿ ಪಡೆ!
ಮುಂಗಾರು ಅಧಿವೇಶನದ ತುಂಬಾ ಪ್ರಶ್ನೆಗಳ ಸುರಿಮಳೆ!
ವಿಧಾನಸೌಧದಲ್ಲಿ ಮಾರ್ದನಿಸಿದ ಸಂಗತಿಗಳೇನೇನು..?
 

ಸದನದಲ್ಲಿ ಶುರುವಾಗಿದೆ ಮಾತಿನ ಕದನ. ಭುಗಿಲೆದ್ದಿದೆ ಕೋಲಾಹಲ. ಹಗರಣ, ಅಕ್ರಮ ಪ್ರಕರಣ, ಲೂಟಿ ಹಣ. ಇಂಥಾ ವಿಚಾರಗಳೇ ವಿಧಾನಸೌಧದಲ್ಲಿ ಮಾರ್ದನಿಸ್ತಾ ಇದಾವೆ. ಇದೇ ಸೋಮವಾರದಿಂದ ವಿಧಾನಸಭೆಯ ಅಧಿವೇಶನ(Assembly session) ಆರಂಭವಾಯ್ತು. ನಿರೀಕ್ಷೆಯಂತೆ ಆ ಸದನ ಕಣವೇ ಕದನ ಭೂಮಿಯಾಗಿ ಮಾರ್ಪಟ್ಟಿದೆ. 9 ದಿನಗಳ ಕಾಲ, ಅಂದ್ರೆ  ಜುಲೈ 26ರವರೆಗೆ ಈ ಮಳೆಗಾಲದ ಅಧಿವೇಶನ ನಡೆಯಲಿದೆ. ಅಷ್ಟೂ ದಿನವೂ ಇಂಥದ್ದೇ ಯುದ್ಧ ಸನ್ನಿವೇಶ ನೋಡೋ ಸಾಧ್ಯತೆಯಂತೂ ದಟ್ಟವಾಗಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ನಂತರ ನಡೀತಿರೊ ಮೊದಲ ಅಧಿವೇಶನ ಇದು. ಲೋಕಸಭಾ ಚುನಾವಣೆ ಗೆಲುವಿನ ಉತ್ಸಾಹದಲ್ಲಿರೋ ಬಿಜೆಪಿ(BJP) ಮತ್ತು ಜೆಡಿಎಸ್‌(JDS), ಸಿದ್ದರಾಮಯ್ಯ ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ಳೋಕೆ ಸಮನ್ವಯ ಸಭೆಯನ್ನೇ ನಡೆಸಿ ಸನ್ನದ್ಧವಾಗಿದ್ವು. ಆಡಳಿತ ಪಕ್ಷದ ವಿರುದ್ಧ ಹೋರಾಟಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಸಜ್ಜಾಗಿದ್ವು. ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿ ನಡುಕ ಹುಟ್ಟಿಸೋಕೆ ಏನೇನೆಲ್ಲಾ ಸರಕುಗಳು ಬೇಕೋ, ಯಾವೆಲ್ಲಾ ಶಸ್ತ್ರಾಸ್ತ್ರಗಳು ಬೇಕೋ, ಅಷ್ಟೂ ಆಯುಧಗಳು ಈಗ ವಿಪಕ್ಷಗಳ ಬತ್ತಳಿಕೆಯಲ್ಲಿ ಭದ್ರವಾಗಿವೆ. ಆ ಅಸ್ತ್ರಗಳನ್ನೇ ಬಳಸಿಕೊಂಡು, ಸದನದಲ್ಲಿ  ಒಂದೊಂದೇ ಬಾಣ ಪ್ರಯೋಗ ಮಾಡ್ತಾ ಇವೆ, ಮಿತ್ರಪಕ್ಷಗಳು.

ಇದನ್ನೂ ವೀಕ್ಷಿಸಿ:  ಏಕಾಏಕಿ ಕುಸಿದು ಬಿತ್ತು ಗುಡ್ಡ..ಕರಾವಳಿ, ಮಲೆನಾಡು ತತ್ತರ! ಉಕ್ಕಿ ಹರಿಯುತ್ತಿವೆ ಹಳ್ಳ ಕೊಳ್ಳ.. ಸೇತುವೆಗಳು ಜಲಾವೃತ..!

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more