BIG 3: 4 ವರ್ಷ ಕಳೆದರೂ ಕೊಡಗು ಪ್ರವಾಹ ಸಂತ್ರಸ್ತರಿಗೆ ಸಿಕ್ಕಿಲ್ಲ ಸೂರು!

BIG 3: 4 ವರ್ಷ ಕಳೆದರೂ ಕೊಡಗು ಪ್ರವಾಹ ಸಂತ್ರಸ್ತರಿಗೆ ಸಿಕ್ಕಿಲ್ಲ ಸೂರು!

Published : Nov 23, 2022, 04:35 PM ISTUpdated : Nov 23, 2022, 05:57 PM IST

Big 3 Kodagu Flood Victims Story: ಕೊಡಗು  ಜಿಲ್ಲೆಯಲ್ಲಿ  ಮನೆ  ಕಳೆದುಕೊಂಡವರಿಗೆ  ಸರ್ಕಾರದಿಂದ ನಿರ್ಮಿಸಿದ ಆಶ್ರಯ ಮನೆಗಳನ್ನ ಹಂತ ಹಂತವಾಗಿ ನೀಡಲಾಗಿದೆ. ಆದ್ರೆ, ಮಡಿಕೇರಿ ತಾಲೂಕಿನ .ಕೆ. ನಿಡುಗಣೆ  ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಆಗಿದ್ರು ಇಲ್ಲಿ ತನಕ ಹಂಚಿಕೆ ಮಾಡಿಲ್ಲ.  

ಕೊಡಗು (ನ. 23): ಬಡವರಿಗಾಗಿ ಸರ್ಕಾರ ನೂರೆಂಟು ಯೋಜನೆಗಳನ್ನ ತರುತ್ತೆ. ಇಂಪ್ಲಿಮೆಂಟ್ ಕೂಡ ಆಗುತ್ತೆ. ಆದ್ರೆ, ಅದನ್ನ ಫಲಾನುಭವಿಗಳಿಗೆ ಕೊಡದೇ ಹೇಗೆಲ್ಲ ಸತಾಯಿಸ್ತಾರೆ ಗೊತ್ತಾ? ಯೆಸ್, 2018, ಅಂದು  ಇಡೀ  ರಾಜ್ಯದ ಜನರನ್ನ ಕಂಗೆಡಿಸಿದ ದಿನ, ಎಲ್ರಲ್ಲೂ, ಭಯ, ಆತಂಕ, ದುಗುಡ, ಕಣ್ಣೀರು,  ಯಾಕಂದ್ರೆ ಕೊಡಗಿನಲ್ಲಿ ಭೀಕರ ಪ್ರವಾಹದ ಹೊಡೆತಕ್ಕೆ ಭೂ ಕುಸಿತ ಉಂಟಾಯ್ತು. ಭೂ ಕುಸಿತಕ್ಕೆ ಅದೆಷ್ಟೋ ಜನ ಮನೆಗಳನ್ನ ಕಳೆದುಕೊಂಡ್ರು. ದಿಕ್ಕು ತೋಚದಂತೆ ಆಯ್ತು.  ಇಡೀ ಕರುನಾಡು ಅವತ್ತು ಕೊಡಗಿನ  ಜನರ ಸಂಕಷ್ಟಕ್ಕೆ ಮಿಡಿಯಿತು. 2018ರ ಸಮ್ಮಿಶ್ರ  ಸರ್ಕಾರ ಕೂಡ ಜನರ ನೆರವಿಗೆ ಧಾವಿಸಿತು. ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿ ಕೊಡುವ ಭರವಸೆಯನ್ನು ನೀಡಿತು. ಅದರಂತೆ ಮನೆಗಳ ನಿರ್ಮಾಣ ಕಾಮಗಾರಿ ಶುರು ಆಯ್ತು. 

ಅಂದು, ಮನೆ ಕಳೆದುಕೊಂಡವರಿಗೆ 10 ತಿಂಗಳಲ್ಲಿಯೇ ಮನೆ ನಿರ್ಮಿಸಿ ಕೊಡೋ ಭರವಸೆಯನ್ನು ನೀಡಿತ್ತು. ಅದುವರೆಗೆ ಪ್ರತಿ ತಿಂಗಳು ಮನೆಯ ಬಾಡಿಗೆ ಕೊಡುವ ಭರವಸೆ ನೀಡಿತ್ತು.ಆದ್ರೆ, 10 ತಿಂಗಳ ನಂತರ ಸರ್ಕಾರ ಬಾಡಿಗೆ ಕೊಡೋದನ್ನ ನಿಲ್ಲಿಸಿ ಬಿಟ್ಟಿತು. ಕೊಡಗು  ಜಿಲ್ಲೆಯಲ್ಲಿ  ಮನೆ  ಕಳೆದುಕೊಂಡವರಿಗೆ  ಸರ್ಕಾರದಿಂದ ನಿರ್ಮಿಸಿದ ಆಶ್ರಯ ಮನೆಗಳನ್ನ ಹಂತ ಹಂತವಾಗಿ ನೀಡಲಾಗಿದೆ. ಆದ್ರೆ, ಮಡಿಕೇರಿ ತಾಲೂಕಿನ .ಕೆ. ನಿಡುಗಣೆ  ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಆಗಿದ್ರು ಇಲ್ಲಿ ತನಕ ಹಂಚಿಕೆ ಮಾಡಿಲ್ಲ. 

10 ಅಲ್ಲ, 20 ಅಲ್ಲ ಬರೋಬ್ಬರಿ 70 ಮನೆಗಳು ನಿರ್ಮಾಣ ಆಗಿದೆ. ಫಲಾನುಭವಿಗಳಿಗೆ ಇಲ್ಲಿ ತನಕ ಹಸ್ತಾಂತರ ಮಾಡಿಲ್ಲ. ಹೀಗಾಗಿ ಇವರೆಲ್ಲ ಇವತ್ತಿಗೂ ಅದೆಂಥ ದುಸ್ಥಿಯಲ್ಲಿ ಇದ್ದಾರೆ ನೋಡಿ. ಒಂದು ಕಡೇ ಮೂಲಭೂತ ಸೌಕರ್ಯವಿಲ್ಲ. ಮತ್ತೊಂದು ಕಡೇ ಕೂಲಿನಾಲಿ ಮಾಡಿ ಬಾಡಿಗೆ ಕಟ್ಟಬೇಕಾದ ಪರಿಸ್ಥಿತಿ ಇವರದ್ದು. 

ಇದನ್ನೂ ನೋಡಿBIG 3: ಉದ್ಘಾಟನೆಯಾಗದೆ ಪಾಳು ಬಿದ್ದಿರುವ ರಾಯಚೂರಿನ ಅಂಬೇಡ್ಕರ್ ಭವನ

ಈಗಾಗಲೇ ಈ ಫಲಾನುಭವಿಗಳು 2022ರ ಜೂನ್ ತಿಂಗಳಲ್ಲಿ ಅಂದರೇ ಈ ವರ್ಷದ ಮಳೆಗಾಲಕ್ಕೂ ಮುನ್ನವೇ ಈ  70 ಕುಟುಂಬಗಳು ಅಧಿಕಾರಿಗಳನ್ನ ಭೇಟಿ ಮಾಡಿದ್ರು. ಆಗ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳನ್ನ ಕೇಳಿದ್ರೆ ಸಣ್ಣಪುಟ್ಟ ಕೆಲಸ ಇದ್ದು ಹಸ್ತಾಂತರ ಮಾಡೋದಾಗಿ ಭರವಸೆ ನೀಡಿದ್ರು. ಆದ್ರೆ, ಇಲ್ಲಿ ತನಕವು ಯಾರಿಗೂ ಹಂಚಿಕೆ ಮಾಡದೇ ಉಡಾಫೆ ಮಾಡ್ತಿದ್ದಾರೆ ಅಂತಾರೆ ಫಲಾನುಭವಿಗಳು.  ಒಟ್ಟಿನಲ್ಲಿ ಸರ್ಕಾರದಿಂದ ಮನೆಗಳು ನಿರ್ಮಾಣ ಆಗಿದ್ರು ಫಲಾನುಭವಿಗಳಿಗೆ ಹಂಚಿಕೆ ಮಾಡೋಕೆ ಇಷ್ಟು ದಿನ ಬೇಕ. ಸಂಬಂಧಪಟ್ಟ ಅಧಿಕಾರಿಗಳೇ, ಜನಪ್ರತಿನಿಧಿಗಳೇ ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್3ಯಲ್ಲಿ  ವರದಿ ಪ್ರಸಾರ ಆದ್ಮೇಲಾದ್ರೂ ಎಚ್ಚೆತ್ತುಕೊಳ್ತಾರಾ ನೋಡೋಣ 

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more