BIG 3: 4 ವರ್ಷ ಕಳೆದರೂ ಕೊಡಗು ಪ್ರವಾಹ ಸಂತ್ರಸ್ತರಿಗೆ ಸಿಕ್ಕಿಲ್ಲ ಸೂರು!

BIG 3: 4 ವರ್ಷ ಕಳೆದರೂ ಕೊಡಗು ಪ್ರವಾಹ ಸಂತ್ರಸ್ತರಿಗೆ ಸಿಕ್ಕಿಲ್ಲ ಸೂರು!

Published : Nov 23, 2022, 04:35 PM ISTUpdated : Nov 23, 2022, 05:57 PM IST

Big 3 Kodagu Flood Victims Story: ಕೊಡಗು  ಜಿಲ್ಲೆಯಲ್ಲಿ  ಮನೆ  ಕಳೆದುಕೊಂಡವರಿಗೆ  ಸರ್ಕಾರದಿಂದ ನಿರ್ಮಿಸಿದ ಆಶ್ರಯ ಮನೆಗಳನ್ನ ಹಂತ ಹಂತವಾಗಿ ನೀಡಲಾಗಿದೆ. ಆದ್ರೆ, ಮಡಿಕೇರಿ ತಾಲೂಕಿನ .ಕೆ. ನಿಡುಗಣೆ  ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಆಗಿದ್ರು ಇಲ್ಲಿ ತನಕ ಹಂಚಿಕೆ ಮಾಡಿಲ್ಲ.  

ಕೊಡಗು (ನ. 23): ಬಡವರಿಗಾಗಿ ಸರ್ಕಾರ ನೂರೆಂಟು ಯೋಜನೆಗಳನ್ನ ತರುತ್ತೆ. ಇಂಪ್ಲಿಮೆಂಟ್ ಕೂಡ ಆಗುತ್ತೆ. ಆದ್ರೆ, ಅದನ್ನ ಫಲಾನುಭವಿಗಳಿಗೆ ಕೊಡದೇ ಹೇಗೆಲ್ಲ ಸತಾಯಿಸ್ತಾರೆ ಗೊತ್ತಾ? ಯೆಸ್, 2018, ಅಂದು  ಇಡೀ  ರಾಜ್ಯದ ಜನರನ್ನ ಕಂಗೆಡಿಸಿದ ದಿನ, ಎಲ್ರಲ್ಲೂ, ಭಯ, ಆತಂಕ, ದುಗುಡ, ಕಣ್ಣೀರು,  ಯಾಕಂದ್ರೆ ಕೊಡಗಿನಲ್ಲಿ ಭೀಕರ ಪ್ರವಾಹದ ಹೊಡೆತಕ್ಕೆ ಭೂ ಕುಸಿತ ಉಂಟಾಯ್ತು. ಭೂ ಕುಸಿತಕ್ಕೆ ಅದೆಷ್ಟೋ ಜನ ಮನೆಗಳನ್ನ ಕಳೆದುಕೊಂಡ್ರು. ದಿಕ್ಕು ತೋಚದಂತೆ ಆಯ್ತು.  ಇಡೀ ಕರುನಾಡು ಅವತ್ತು ಕೊಡಗಿನ  ಜನರ ಸಂಕಷ್ಟಕ್ಕೆ ಮಿಡಿಯಿತು. 2018ರ ಸಮ್ಮಿಶ್ರ  ಸರ್ಕಾರ ಕೂಡ ಜನರ ನೆರವಿಗೆ ಧಾವಿಸಿತು. ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿ ಕೊಡುವ ಭರವಸೆಯನ್ನು ನೀಡಿತು. ಅದರಂತೆ ಮನೆಗಳ ನಿರ್ಮಾಣ ಕಾಮಗಾರಿ ಶುರು ಆಯ್ತು. 

ಅಂದು, ಮನೆ ಕಳೆದುಕೊಂಡವರಿಗೆ 10 ತಿಂಗಳಲ್ಲಿಯೇ ಮನೆ ನಿರ್ಮಿಸಿ ಕೊಡೋ ಭರವಸೆಯನ್ನು ನೀಡಿತ್ತು. ಅದುವರೆಗೆ ಪ್ರತಿ ತಿಂಗಳು ಮನೆಯ ಬಾಡಿಗೆ ಕೊಡುವ ಭರವಸೆ ನೀಡಿತ್ತು.ಆದ್ರೆ, 10 ತಿಂಗಳ ನಂತರ ಸರ್ಕಾರ ಬಾಡಿಗೆ ಕೊಡೋದನ್ನ ನಿಲ್ಲಿಸಿ ಬಿಟ್ಟಿತು. ಕೊಡಗು  ಜಿಲ್ಲೆಯಲ್ಲಿ  ಮನೆ  ಕಳೆದುಕೊಂಡವರಿಗೆ  ಸರ್ಕಾರದಿಂದ ನಿರ್ಮಿಸಿದ ಆಶ್ರಯ ಮನೆಗಳನ್ನ ಹಂತ ಹಂತವಾಗಿ ನೀಡಲಾಗಿದೆ. ಆದ್ರೆ, ಮಡಿಕೇರಿ ತಾಲೂಕಿನ .ಕೆ. ನಿಡುಗಣೆ  ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಆಗಿದ್ರು ಇಲ್ಲಿ ತನಕ ಹಂಚಿಕೆ ಮಾಡಿಲ್ಲ. 

10 ಅಲ್ಲ, 20 ಅಲ್ಲ ಬರೋಬ್ಬರಿ 70 ಮನೆಗಳು ನಿರ್ಮಾಣ ಆಗಿದೆ. ಫಲಾನುಭವಿಗಳಿಗೆ ಇಲ್ಲಿ ತನಕ ಹಸ್ತಾಂತರ ಮಾಡಿಲ್ಲ. ಹೀಗಾಗಿ ಇವರೆಲ್ಲ ಇವತ್ತಿಗೂ ಅದೆಂಥ ದುಸ್ಥಿಯಲ್ಲಿ ಇದ್ದಾರೆ ನೋಡಿ. ಒಂದು ಕಡೇ ಮೂಲಭೂತ ಸೌಕರ್ಯವಿಲ್ಲ. ಮತ್ತೊಂದು ಕಡೇ ಕೂಲಿನಾಲಿ ಮಾಡಿ ಬಾಡಿಗೆ ಕಟ್ಟಬೇಕಾದ ಪರಿಸ್ಥಿತಿ ಇವರದ್ದು. 

ಇದನ್ನೂ ನೋಡಿBIG 3: ಉದ್ಘಾಟನೆಯಾಗದೆ ಪಾಳು ಬಿದ್ದಿರುವ ರಾಯಚೂರಿನ ಅಂಬೇಡ್ಕರ್ ಭವನ

ಈಗಾಗಲೇ ಈ ಫಲಾನುಭವಿಗಳು 2022ರ ಜೂನ್ ತಿಂಗಳಲ್ಲಿ ಅಂದರೇ ಈ ವರ್ಷದ ಮಳೆಗಾಲಕ್ಕೂ ಮುನ್ನವೇ ಈ  70 ಕುಟುಂಬಗಳು ಅಧಿಕಾರಿಗಳನ್ನ ಭೇಟಿ ಮಾಡಿದ್ರು. ಆಗ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳನ್ನ ಕೇಳಿದ್ರೆ ಸಣ್ಣಪುಟ್ಟ ಕೆಲಸ ಇದ್ದು ಹಸ್ತಾಂತರ ಮಾಡೋದಾಗಿ ಭರವಸೆ ನೀಡಿದ್ರು. ಆದ್ರೆ, ಇಲ್ಲಿ ತನಕವು ಯಾರಿಗೂ ಹಂಚಿಕೆ ಮಾಡದೇ ಉಡಾಫೆ ಮಾಡ್ತಿದ್ದಾರೆ ಅಂತಾರೆ ಫಲಾನುಭವಿಗಳು.  ಒಟ್ಟಿನಲ್ಲಿ ಸರ್ಕಾರದಿಂದ ಮನೆಗಳು ನಿರ್ಮಾಣ ಆಗಿದ್ರು ಫಲಾನುಭವಿಗಳಿಗೆ ಹಂಚಿಕೆ ಮಾಡೋಕೆ ಇಷ್ಟು ದಿನ ಬೇಕ. ಸಂಬಂಧಪಟ್ಟ ಅಧಿಕಾರಿಗಳೇ, ಜನಪ್ರತಿನಿಧಿಗಳೇ ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್3ಯಲ್ಲಿ  ವರದಿ ಪ್ರಸಾರ ಆದ್ಮೇಲಾದ್ರೂ ಎಚ್ಚೆತ್ತುಕೊಳ್ತಾರಾ ನೋಡೋಣ 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more