ಸೆ.27ರ ಭಾರತ್ ಬಂದ್ : ಬೆಂಗಳೂರಿನಲ್ಲಿ ಏನಿರುತ್ತೆ- ಏನಿರಲ್ಲ.?

Sep 26, 2021, 11:35 AM IST

ಬೆಂಗಳೂರು (ಸೆ.26):  ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯನ್ನು ಬೆಂಬಲಿಸಿ ಸೆಪ್ಟೆಂಬರ್ 27 ರಂದು ಕರೆ ನೀಡಲಾಗಿರುವ ಭಾರತ್‌ ಬಂದ್‌(Bharat Bandh) ಗೆ ಕರ್ನಾಟಕದಲ್ಲಿಯು (Karnataka) ಸಾಕಷ್ಟು ಬೆಂಬಲ ವ್ಯಕ್ತವಾಗಿದೆ. 

ರಾಜ್ಯದಲ್ಲಿ ಭಾರತ್‌ ಬಂದ್‌ಗೆ ಬೆಂಬಲ ಬಹುತೇಕ ಅನುಮಾನ

ಆದರೆ ಬೆಂಗಳೂರಿನಲ್ಲಿ (Bengaluru) ಭಾರತ್ ಬಂದ್‌ಗೆ ರೈತ ಸಂಘಟನೆಗಳು ಪ್ರತಿಭಟನೆ ಹೊರಾಟ ನಡೆಸಲಿದ್ದು, ಮತ್ತೆಲ್ಲ ಸೇವೆಗಳು ಎಂದಿನಂತೆ ಇರಲಿವೆ. ಬಸ್‌ಗಳು,ಆಟೊಗಳು ಎಂದಿನಂತೆ ಸಂಚಾರ ಮಾಡಲಿವೆ. ಹೋಟೆಲ್‌ಗಳು ತೆರೆದಿರುತ್ತವೆ. ಚಿತ್ರಮಂದಿರಗಳು ತೆರೆದಿರುತ್ತವೆ. ಪೇಪರ್, ಹಾಲು, ಮೆಡಿಕಲ್‌ ಸೇವೆಗಳು ಲಭ್ಯವಿರಲಿವೆ.