ಸರ್ಕಾರಿ ಕೆಲಸ, ಕೈತುಂಬಾ ಸಂಬಳ; ಮೊಮ್ಮಕ್ಕಳಾದರೂ ತೀರದ ಕಾಮದಾಹದಿಂದ ಹೆಂಡತಿ ಹೊಡೆತಕ್ಕೆ ಪ್ರಾಣಬಿಟ್ಟ ಗಂಡ!

ಸರ್ಕಾರಿ ಕೆಲಸ, ಕೈತುಂಬಾ ಸಂಬಳ; ಮೊಮ್ಮಕ್ಕಳಾದರೂ ತೀರದ ಕಾಮದಾಹದಿಂದ ಹೆಂಡತಿ ಹೊಡೆತಕ್ಕೆ ಪ್ರಾಣಬಿಟ್ಟ ಗಂಡ!

Published : Oct 02, 2025, 11:03 PM IST
ಪತಿಯ ವಿಕೃತ ಕಾಮದಾಹ ಮತ್ತು ನಿರಂತರ ಕಿರುಕುಳಕ್ಕೆ ಬೇಸತ್ತು ಪತ್ನಿಯೊಬ್ಬಳು ಆತನನ್ನು ಹತ್ಯೆಗೈದಿದ್ದಾಳೆ. ಇನ್ನೊಂದು ಪ್ರಕರಣದಲ್ಲಿ, ಪೋಷಕರಿಗೆ ಹೆದರಿದ ಅಪ್ರಾಪ್ತ ಪ್ರೇಮಿಗಳು ರೈಲಿಗೆ ತಲೆಕೊಟ್ಟು ತಮ್ಮ ಪ್ರಾಣವನ್ನು ಅಂತ್ಯಗೊಳಿಸಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ನಡೆದ ಎರಡು ಬೇರೆ ಬೇರೆ ಪ್ರಕರಣಗಳು ಮಾನವ ಸಂಬಂಧಗಳಲ್ಲಿನ ಸಂಕೀರ್ಣತೆ ಮತ್ತು ದುರಂತ ಅಂತ್ಯಗಳನ್ನು ಬಿಚ್ಚಿಟ್ಟಿವೆ. ಒಂದು ಕಡೆ, ಪತಿಯ ವಿಪರೀತ ಕಾಮದಾಹ ಮತ್ತು ಅಶ್ಲೀಲ ಕಿರುಕುಳದಿಂದ ಬೇಸತ್ತ ಪತ್ನಿಯಿಂದಲೇ ಗಂಡನ ಹತ್ಯೆ ನಡೆದರೆ, ಮತ್ತೊಂದೆಡೆ ಪೋಷಕರಿಗೆ ಹೆದರಿ ಪ್ರೇಮಿಗಳು ರೈಲಿಗೆ ತಲೆಕೊಟ್ಟು ದುರಂತ ಅಂತ್ಯ ಕಂಡಿದ್ದಾರೆ.

1. ಒನಕೆ ಮಹಾದೇವಿ: ಅಶ್ಲೀಲ ವಿಡಿಯೋ ಟಾರ್ಚರ್‌ನಿಂದ ಪತಿ ಹತ್ಯೆ:

ಸುಮಾರು 25 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಗಳಿಗೆ ಇಬ್ಬರು ಮಕ್ಕಳು ಮತ್ತು ಮೊಮ್ಮಕ್ಕಳಿದ್ದರು. ಗಂಡನಿಗೆ ಸರ್ಕಾರಿ ಕೆಲಸವಿದ್ದು, ಮಗ ದುಬೈನಲ್ಲಿದ್ದರೆ, ಮಗಳು ಬಾಣಂತನಕ್ಕಾಗಿ ತವರಿಗೆ ಬಂದಿದ್ದಳು. ಮೊಮ್ಮಕ್ಕಳೊಂದಿಗೆ ಆಡಿ ಸಂತೋಷವಾಗಿರಬೇಕಿದ್ದ ವಯಸ್ಸಿನಲ್ಲಿ ಈ ದಂಪತಿ ನಿತ್ಯವೂ ಜಗಳವಾಡುತ್ತಿದ್ದರು. ಇದಕ್ಕೆಲ್ಲ ಕಾರಣ 50ಕ್ಕೂ ಹೆಚ್ಚು ವಯಸ್ಸಿನ ಗಂಡನ ವಿಕೃತ ಕಾಮದಾಹ.

ಲೈಂಗಿಕ ಕಿರುಕುಳ ಮತ್ತು ಕೊಲೆ:
ಮನೆಯಲ್ಲಿ ಎಲ್ಲರೂ ಮಲಗಿದ ನಂತರ ಪ್ರತಿದಿನ ಪತ್ನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇಷ್ಟೇ ಅಲ್ಲದೆ, ಅವಳು ಇಷ್ಟಪಡದಿದ್ದರೂ ಬಲವಂತವಾಗಿ ಅಶ್ಲೀಲ ವಿಡಿಯೋಗಳನ್ನು ತೋರಿಸಿ, ಅದರಂತೆಯೇ ನಾವೂ ಮಾಡೋಣವೆಂದು ಟಾರ್ಚರ್ ನೀಡುತ್ತಿದ್ದ. ಮಕ್ಕಳಿದ್ದಾರೆ, ಮೊಮ್ಮಕ್ಕಳಿದ್ದಾರೆ ಎಂಬುದನ್ನು ಮರೆತು ಗಂಡನ ವಿಕೃತ ವರ್ತನೆ ಮುಂದುವರೆದಿದ್ದರಿಂದ, 25 ವರ್ಷಗಳ ಕಾಲ ಹಿಂಸೆ ಅನುಭವಿಸಿದ ಪತ್ನಿಯ ತಾಳ್ಮೆ ಕಟ್ಟೆ ಒಡೆದಿತ್ತು.

ಆ ದಿನ, ಮತ್ತೆ ಕೆಟ್ಟ ವಿಡಿಯೋ ತೋರಿಸಲು ಬಂದ ಗಂಡನೊಂದಿಗೆ ಜಗಳ ನಡೆದಿದೆ. ವಿಕೃತ ಕಾಟದಿಂದ ಬೇಸತ್ತ ಪತ್ನಿ, ಮನೆಯಲ್ಲಿದ್ದ ಒನಕೆಯಿಂದಲೇ ಪತಿಯ ತಲೆಗೆ ಹೊಡೆದು ಅವನನ್ನು ಕೊಲೆ ಮಾಡಿದ್ದಾಳೆ. ಈ ಘಟನೆ ಮಗಳ ಎದುರಲ್ಲೇ ನಡೆದಿದೆ ಎಂದು ತಿಳಿದುಬಂದಿದೆ. ಕೆಟ್ಟ ಗಂಡನ ಕಥೆಯನ್ನು ಕೊನೆಗೊಳಿಸಿದ ಈ ಪತ್ನಿಯ ಕೃತ್ಯಕ್ಕೆ ಕಾರಣ ಗಂಡನ ವಿಕೃತ ಮನಸ್ಸು ಮತ್ತು ಲೈಂಗಿಕ ಕಿರುಕುಳ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

2. ಹೆತ್ತವರಿಗೆ ಹೆದರಿ ರೈಲಿಗೆ ತಲೆ ಕೊಟ್ಟ ಅಪ್ರಾಪ್ತ ಪ್ರೇಮಿಗಳು:

ಇವರಿಬ್ಬರೂ ಅಪ್ರಾಪ್ತರು; ಕಾಲೇಜಿಗೆ ಹೋಗುತ್ತಿದ್ದ ಹದಿಹರೆಯದ ವಿದ್ಯಾರ್ಥಿಗಳು. ಓದಿನ ವಯಸ್ಸಿನಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಪ್ರೇಮಲೋಕದಲ್ಲಿ ವಿಹರಿಸುತ್ತಿದ್ದ ಈ ಜೋಡಿ, 'ನನ್ನನ್ನು ಬಿಟ್ಟರೆ ನಿನಗೆ ಯಾರು ಇಲ್ಲ' ಎಂಬ ನಿರ್ಧಾರಕ್ಕೆ ಬಂದಿದ್ದರು. ಇವರ ವಿಚಾರ ತಿಳಿದ ಪೋಷಕರು ಅವರಿಗೆ ಬುದ್ಧಿ ಹೇಳಿದ್ದರು. ಆದರೆ, ಪೋಷಕರ ಮಾತು ಕೇಳದ ಈ ಜೋಡಿ ಅಂತಿಮವಾಗಿ ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾಗಿದ್ದಾರೆ. ಸಾಯುವುದಕ್ಕೂ ಮೊದಲು ಇಬ್ಬರೂ ಚಾಕ್ಲೇಟ್ ತಿಂದಿರುವುದು ಪತ್ತೆಯಾಗಿದೆ. 'ವಯಸ್ಸಲ್ಲದ ವಯಸ್ಸಿನಲ್ಲಿ ಲವ್ ಮಾಡಿದ್ದೇ ತಪ್ಪಾಯ್ತು' ಎಂದು ಭಾವಿಸಿ ಅವರು ಇಂತಹ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಪೋಷಕರಿಗೆ ಈ ಪ್ರೀತಿ ವಿಚಾರ ಗೊತ್ತಿಲ್ಲ ಎಂದು ಅವರು ಹೇಳಿಕೆ ನೀಡಿದ್ದರೂ, ಹದಿಹರಿಯದ ವಯಸ್ಸಿನಲ್ಲಿ 'ಅಫೆಕ್ಷನ್' ಅನ್ನೇ 'ಪ್ರೀತಿ' ಎಂದು ತಪ್ಪಾಗಿ ತಿಳಿದು ಇಂತಹ ದುರಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಯುವ ಪೀಳಿಗೆಗೆ ಈ ಕಥೆ ಪಾಠವಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಬಾಳಬೇಕಿದ್ದ ಎರಡು ಜೀವಗಳು ಪ್ರೀತಿಗಾಗಿ ಮಸಣ ಸೇರಿದ್ದು ವಿಪರ್ಯಾಸ.

24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
Read more