ನಾನು ಜಿಮ್ ಬಾಡಿ ಇದ್ರೂ ಅಮಾಯಕ; ಆಕೆಯೇ ಚಾಟಿಂಗ್ ಮಾಡಿ ಸಿಕ್ಕಿಬಿದ್ದು, ಅಣ್ಣಂದಿರಿಗೆ ನನ್ನ ಹಾಕಿಕೊಟ್ಟಿದ್ದಾಳೆ!

ನಾನು ಜಿಮ್ ಬಾಡಿ ಇದ್ರೂ ಅಮಾಯಕ; ಆಕೆಯೇ ಚಾಟಿಂಗ್ ಮಾಡಿ ಸಿಕ್ಕಿಬಿದ್ದು, ಅಣ್ಣಂದಿರಿಗೆ ನನ್ನ ಹಾಕಿಕೊಟ್ಟಿದ್ದಾಳೆ!

Published : Oct 02, 2025, 10:46 PM IST

ಬೆಂಗಳೂರಿನಲ್ಲಿ ಎರಡು ಭಯಾನಕ ಘಟನೆಗಳು ವರದಿಯಾಗಿವೆ. ಯುವತಿಗೆ ಮೆಸೇಜ್ ಕಳುಹಿಸಿದ್ದಕ್ಕೆ ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆದರೆ, ಮತ್ತೊಂದೆಡೆ ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಪತಿಯು ಪತ್ನಿಯನ್ನು ಕೊಂದು ತಾನೂ ಸಾವಿಗೆ ಶರಣಾಗಿದ್ದಾನೆ.

ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಎರಡು ವಿಭಿನ್ನ ಮತ್ತು ಭಯಾನಕ ಘಟನೆಗಳು ವರದಿಯಾಗಿದ್ದು, ಒಂದು ಕಡೆ ಜಿಮ್ ಟ್ರೈನರ್ ಮೇಲೆ ಮಾರಣಾಂತಿಕ ಹಲ್ಲೆ* ನಡೆದರೆ, ಇನ್ನೊಂದೆಡೆ ಪತ್ನಿ-ಪತಿಯ ದುರಂತ ಅಂತ್ಯದ ಕಥೆ ಹೊರಬಿದ್ದಿದೆ.

1. ಜಿಮ್ ಟ್ರೈನರ್ ಮೇಲೆ 'ಮೆಸೇಜ್' ಮಾಡಿದ್ದಕ್ಕೆ ದಾಳಿ:

ಇಲ್ಲಿ ಜಿಮ್ ಟ್ರೈನರ್ ಆಗಿದ್ದ ಯುವಕನೋರ್ವ ಅನಿರೀಕ್ಷಿತವಾಗಿ ಹಲ್ಲೆಗೊಳಗಾಗಿದ್ದಾನೆ. ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿ ಮಗನನ್ನು ಇಂಜಿನಿಯರಿಂಗ್ ಓದಿಸಿದ ಹೆತ್ತವರ ಕನಸಿಗೆ ವಿರುದ್ಧವಾಗಿ ಯುವಕ ಜಿಮ್ ಟ್ರೈನರ್ ಆಗಿದ್ದ. ಒಂದು ದಿನ, ಮೂವರು ದುಷ್ಕರ್ಮಿಗಳು ಇದ್ದಕ್ಕಿದ್ದಂತೆ ಜಿಮ್‌ಗೆ ನುಗ್ಗಿ ಅವನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೆ ಕಾರಣ ಏನು ಎಂಬುದು ಟ್ರೈನರ್‌ಗೆ ಆರಂಭದಲ್ಲಿ ತಿಳಿದಿರಲಿಲ್ಲ.

ಹಲ್ಲೆಗೆ ಪೂರ್ವಪರ ಕಾರಣವೇನು?:
ತನಿಖೆ ವೇಳೆ ತಿಳಿದುಬಂದಿರುವಂತೆ, ಇದೇ ಜಿಮ್‌ಗೆ ಬರುತ್ತಿದ್ದ ಯುವತಿಯೊಬ್ಬಳಿಗೆ ಈ ಟ್ರೈನರ್ ಆಗಾಗ್ಗೆ ಮೆಸೇಜ್‌ಗಳನ್ನು ಮಾಡುತ್ತಿದ್ದ. ಈ ವಿಷಯ ಯುವತಿಯ ಅಣ್ಣಂದಿರಿಗೆ ತಿಳಿದು ಬಂದಿದ್ದು, ಅವರು ಜಿಮ್‌ಗೆ ಬಂದು ಟ್ರೈನರ್ ಮೇಲೆ ಫಿಲ್ಮಿ ಸ್ಟೈಲ್‌ನಲ್ಲಿ ಥಳಿಸಿದ್ದಾರೆ.

ಹಲ್ಲೆಗೊಳಗಾದ ಜಿಮ್ ಟ್ರೈನರ್ ಹೇಳಿಕೆ ಪ್ರಕಾರ, ಆ ಯುವತಿ ಚಾಟ್ ಮಾಡಿ ಸಿಕ್ಕಿಬಿದ್ದಾಗ ತಾನೇ ಉಲ್ಟಾ ಹೊಡೆದು, ತನ್ನ ಅಣ್ಣಂದಿರಿಂದ ಹಲ್ಲೆ ಮಾಡಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಚಾಟ್ ಮಾಡಿದ ತಪ್ಪಿಗಾಗಿ ಅಣ್ಣಂದಿರಿಂದ ಥಳಿತಕ್ಕೊಳಗಾಗಿರುವ ಜಿಮ್ ಟ್ರೈನರ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಸತ್ಯಾಂಶ ಏನೆಂಬುದು ತನಿಖೆ ನಂತರವಷ್ಟೇ ತಿಳಿದು ಬರಬೇಕಿದೆ.

2. ಪತ್ನಿ ಮರ್ಡರ್ ಮಾಡಿ ಗಂಡನ ಸೂಸೈಡ್: ಪ್ರೀತಿಸಿದ ಜೋಡಿಯ ದುರಂತ ಅಂತ್ಯ:

ಪ್ರೀತಿಸಿ ಮದುವೆಯಾಗಿದ್ದ ದಂಪತಿಯ ಜೀವನ ದುರಂತವಾಗಿ ಅಂತ್ಯಗೊಂಡಿದೆ. ಮೂಲತಃ ತಮಿಳುನಾಡಿನವರಾದ ಈ ಜೋಡಿ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿತ್ತು. ಎರಡು ವರ್ಷಗಳ ಹಿಂದೆ ಇವರ ಮದುವೆಯಾಗಿತ್ತು. ಇತ್ತೀಚಿನ ದಿನಗಳಲ್ಲಿ ಇವರಿಬ್ಬರ ನಡುವೆ ಜಗಳ ಸಾಮಾನ್ಯವಾಗಿದ್ದು, ಮುಖ್ಯವಾಗಿ ಪತ್ನಿ ಕೆಲಸಕ್ಕೆ ಹೋಗುವುದನ್ನು ಗಂಡ ವಿರೋಧಿಸುತ್ತಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಗಂಡ-ಹೆಂಡತಿ ನಡುವೆ ತೀವ್ರ ಕಲಹ ಉಂಟಾಗುತ್ತಿತ್ತು. ಪತಿ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗಷ್ಟೇ ಪತ್ನಿಯನ್ನು ನೋಡಲು ಬೆಂಗಳೂರಿಗೆ ಬಂದಿದ್ದ.

ಕತ್ತು ಸೀಳಿ ಕೊಲೆ:
ಬೆಂಗಳೂರಿಗೆ ಬಂದ ಕೆಲವೇ ದಿನಗಳಲ್ಲಿ ಪತಿ ತನ್ನ ಪತ್ನಿಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಚಾಕುವಿನಿಂದ ಸುಮಾರು 7-8 ಬಾರಿ ಕತ್ತು ಸೀಳಿ ಪತ್ನಿಯನ್ನು ಕೊಂದು ಹಾಕಿದ್ದಾನೆ. ನಂತರ, ಹಂತಕ ಪತಿಯು ತಾನೂ ಅದೇ ಮನೆಯಲ್ಲಿ ನೇಣಿಗೆ ಕೊರಳೊಡ್ಡಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಒಂದೇ ಮನೆಯಲ್ಲಿ ಪತಿ ಮತ್ತು ಪತ್ನಿಯ ಶವಗಳು ಪತ್ತೆಯಾಗಿದ್ದು, ಪ್ರೀತಿಸಿ ಮದುವೆಯಾದ ಜೋಡಿ ದುರಂತ ಅಂತ್ಯ ಕಂಡಿದೆ.

ಎಂತಹ ಸಮಸ್ಯೆ ಇದ್ದರೂ ಕೂತು ಮಾತನಾಡಿ ಬಗೆಹರಿಸಿಕೊಳ್ಳುವ ಅವಕಾಶವಿದ್ದರೂ, ಧರ್ಮ ಕೋಪದಿಂದ ಹೀಗಾಗಿದೆ. ದಂಪತಿಯ ಸಾವಿಗೆ ಕಾರಣವಾದ ನಿಖರ ಕಾರಣಗಳು ಅವರ ಜೊತೆಗೇ ಮಸಣ ಸೇರಿರುವುದು ವಿಪರ್ಯಾಸ ಎಂದು ಹೇಳಲಾಗುತ್ತಿದೆ. ಈ ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more