ಆ್ಯಸಿಡ್ ಮಾರಾಟಕ್ಕೆ ಕಠಿಣ ನಿಯಮ ಬೇಕು: ಬೆಂಗಳೂರು ಆ್ಯಸಿಡ್‌ ದಾಳಿ ಸಂತ್ರಸ್ತೆ ಆಗ್ರಹ

ಆ್ಯಸಿಡ್ ಮಾರಾಟಕ್ಕೆ ಕಠಿಣ ನಿಯಮ ಬೇಕು: ಬೆಂಗಳೂರು ಆ್ಯಸಿಡ್‌ ದಾಳಿ ಸಂತ್ರಸ್ತೆ ಆಗ್ರಹ

Published : Aug 12, 2022, 08:09 PM IST

Bengaluru acid attack case: ಆರೋಪಿಗೆ ನನ್ನ ಮುಂದೆ ಆ್ಯಸಿಡ್ ಹಾಕಿ ನೇಣಿಗೆ ಹಾಕಬೇಕು ಎಂದಿರುವ ಯುವತಿ ಘಟನೆ ಬಗ್ಗೆ ವಿವಿರಿಸಿದ್ದಾರೆ

ಬೆಂಗಳೂರು (ಆ. 12): ಪ್ರೇಮ ನಿರಾಕರಿಸಿದ ಕಾರಣಕ್ಕೆ ಮಾಗಡಿ ರಸ್ತೆಯ ಸುಂಕದಟ್ಟೆಯಲ್ಲಿ ಕಳೆದ ಏಪ್ರಿಲ್‌ನಲ್ಲಿ 24 ವರ್ಷದ ಯುವತಿ ಮೇಲೆ ನಡೆದಿದ್ದ ಆ್ಯಸಿಡ್‌ ದಾಳಿ ನಡೆದಿತ್ತು. ಈ ಸಂಬಂಧ  ಪ್ರಕರಣದ ತನಿಖೆ ಪೂರ್ಣಗೊಳಿಸಿ ಆರೋಪಿ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರೋಪ ಪಟ್ಟಿಸಲ್ಲಿಸಿದ್ದಾರೆ.  ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ಥ ಯುವತಿ ಈಗ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜತೆ ಮಾತನಾಡಿದ್ದಾರೆ. 

ಆರೋಪಿಗೆ ನನ್ನ ಮುಂದೆ ಆ್ಯಸಿಡ್ ಹಾಕಿ ನೇಣಿಗೆ ಹಾಕಬೇಕು ಎಂದಿರುವ ಯುವತಿ ಘಟನೆ ಬಗ್ಗೆ ವಿವಿರಿಸಿದ್ದಾರೆ. "ಈಗ ಸ್ವಲ್ಪ ಪರವಾಗಿಲ್ಲ ಅರೋಗ್ಯ, ಇನ್ನೂ ಪೇನ್ ಹಾಗೇ ಇದೆ. ಏಪ್ರಿಲ್ 28 ರಂದು ನಮ್ಮ ಅಪ್ಪ 8.30 ಕ್ಕೆ ಆಫೀಸ್ ಗೆ ಬಿಟ್ರು, ಇನ್ನೂ ಆಫೀಸ್ ಓಪನ್ ಅಗಿರಲಿಲ್ಲ. ನಾನು ಅಫೀಸ್ ಸ್ಟೆಪ್ಸ್ ಹತ್ತುಕೊಂಡು ಹೋಗ್ತಾ ಇದ್ದೆ.  ಈ ಸಂದರ್ಭದಲ್ಲಿ ಹಿಂದೆಯಿಂದ ಯಾರೋ ಕರೆದ ಹಾಗೇ ಆಯ್ತು. ಅಗ ಅವನು ನಿನ್ನ ಮೇಲೆ ಆ್ಯಸಿಡ್ ಹಾಕ್ತೀನಿ ಎಂದು ಹೇಳ್ದ. ನನಗೆ ಆ ಟೈಮಲ್ಲಿ  ತುಂಬಾ ಭಯ ಆಯ್ತು. ನಂತರ ನನ್ನ ತಲೆ ಜುಟ್ಟು ಹಿಡಕೊಂಡು ಆ್ಯಸಿಡ್ ಹಾಕಿದ್ದಾನೆ" ಎಂದು ಯುವತಿ ತಿಳಿಸಿದ್ದಾರೆ. 

ಬೆಂಗಳೂರು: ಸುಂಕದಕಟ್ಟೆ ಆ್ಯಸಿಡ್‌ ದಾಳಿಗೆ ಫೋನ್‌ ರೆಕಾರ್ಡ್‌ ಧ್ವನಿ ಸಾಕ್ಷಿ..!

ಸರ್ಕಾರ ಆ್ಯಸಿಡ್ ಸಿಗದೇ ಇರೋ ಹಾಗೇ ನೋಡಕೋಬೇಕು ಆಗ್ರಹಿಸಿರುವ  ಯುವತಿ "ಆ್ಯಸಿಡ್ ಮಾರಾಟ ಮಾಡೋದ್ ಬಗ್ಗೆ ಕಠಿಣ ರೂಲ್ಸ್ ತರಬೇಕು.  ಅವನಿಗೆ ಕಠಿಣ ಶಿಕ್ಷೆಯಾಗಬೇಕು ಮುಂದೆ ಈ ರೀತಿ ಯಾರು ಮಾಡಬಾರದು.  ಆಸ್ಪತ್ರೆಯಲ್ಲಿ ಇರುವಾಗ ಎಲ್ಲರೂ ತುಂಬಾ ಸಪೋರ್ಟ್ ಮಾಡಿದ್ದಾರೆ.  ವೈದ್ಯರು ಪೊಲೀಸರು ಸಾಕಷ್ಟು ಸಹಕಾರ ನೀಡಿದ್ದಾರೆ. ಪೊಲೀಸರು ರಕ್ತವನ್ನು ನೀಡಿದ್ದಾರೆ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ" ಎಂದಿದ್ದಾರೆ

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more