ಬೆಕ್ಕಿನ ಮರಿಗಳದ್ದು ಜೀವವೇ ಅಲ್ಲವೆ? ಬೆಳಗಾವಿ ಅಜ್ಜಿಯ ಕಣ್ಣೀರ ಕತೆ

Jul 25, 2021, 6:23 PM IST

ಬೆಳಗಾವಿ(ಜು.  25)   ಪ್ರವಾಹ ಒಂದೊಂದೆ ಕಣ್ಣೀರ ಕತೆಯನ್ನು ತೆರೆದಿಡುತ್ತಿದೆ. ಈ ಅಜ್ಜಿಯ ಕೈಯಲ್ಲಿರುವ ಬೆಕ್ಕಿನ ಮರಿಗಳು ಮನುಷ್ಯ-ಪ್ರಾಣಿಯ ನಡುವಿನ ಬಾಂಧವ್ಯ ತೆರೆದಿಡುತ್ತದೆ. ಬೆಕ್ಕಿನ ಮರಿಗಳದ್ದು ಜೀವವೇ ಅಲ್ಲವೇ? ಎಂದು ಅಜ್ಜಿ ಕಣ್ಣೀರು ಹಾಕುತ್ತಿದ್ದಾರೆ. ಏಳು ಬೆಕ್ಕುಗಳಿದ್ದು ಹೇಗೆ ಬಿಟ್ಟು ಹೋಗುವುದು?

ಮರೆಯಾದ ಮಾವುತನಿಗೆ ಗಜರಾಜನ ಕಣ್ಣೀರ ವಿದಾಯ

ವಾಸಿಸಲು ಮನೆ ಇಲ್ಲ..ಸರ್ಕಾರ ಕೇಳಿದರೆ ಪ್ರಯೋಜನವಿಲ್ಲದ ಸ್ಥಿತಿ.. ಸವದಿ ಅಣ್ಣೋರನ್ನು ಕೇಳಿದ್ದೇವೆ.  ದನ-ಕರು ಬೆಕ್ಕಿನ ಮರಿಯನ್ನು ಹೇಗೆ ಬಿಟ್ಟುಹೋಗುವುದು ಎಂದು ಪ್ರಶ್ನೆ ಮಾಡುತ್ತಾರೆ.